Labels

Tuesday 14 January 2020

ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ enna manada donka tiddiso

ಎನ್ನ ಮನದ ಡೊಂಕ ತಿದ್ದಿಸೋ, ಶ್ರೀನಿವಾಸ
ಎನ್ನ ಮನದ ಡೊಂಕ ತಿದ್ದಿಸೋ ||ಪ||
ಎನ್ನ ಮನದ ಡೊಂಕ ತಿದ್ದಿಸಿ
ನಿನ್ನ ಸೇವಕನಾದ ಮೇಲೆ
ಇನ್ನು ಸಂಶಯವೇಕೆ ಕೃಷ್ಣ
ನಿನ್ನ ಚರಣದಲ್ಲಿ ಸೇರಿಸೋ ||ಅ.ಪ||
ಉದಯವಾದರೆ ಊಟದ ಚಿಂತೆ
ಅದರ ಮೇಲೆ ಭೋಗದ ಚಿಂತೆ
ಹದಿನಾಲ್ಕು ಲೋಕವಾಳಬೇಕೆಂಬ ಚಿಂತೆ
ಇದು ಪುಣ್ಯ ಇದು ಪಾಪವೆಂದು
ಹೃದಯದಲಿ ಭಯವಿಲ್ಲದೆ
ಮದನೋಹಿತನಾದೆ ನಿನ್ನ
ಪದವ ನಂಬದೆ ದೀನದಯಾಳೋ ||
ನೆರೆಮನೆಯ ಭಾಗ್ಯ ನೋಡಿ
ಸಹಿಸಲಾರದೆ ಅಸೂಯನಾಗಿ
ಹರಿಸ್ಮರಣೆಗೆ ವಿಮುಖನಾದೆ
ನರರ ಸ್ತುತಿಯ ಮಾಡಿದೆ
ಪರರ ಸತಿಗೆ ಪರ ಅನ್ನಕ್ಕೆ
ತಿರುಗಿ ತಿರುಗಿ ಚಪಲನಾದೆ
ಗುರುಹಿರಿಯರ ದೂಷಿಣಿ
ಮರುಳಾದೆ ದೀನಶರಣ್ಯ ||
ಅಗಣಿತ ಸುಖ ಬಂದರೆ ನಾ
ಅಗಣಿತ ದುಃಖಕ್ಹರಿಯೆಂಬುವೆ
ಜಗದೊಳು ಲಾಭವು ಬಂದರೆ ಧನಿಕ ನಾನೆಂಬೆ
ಮಿಗೆ ಹಾನಿಗೆ ಹರಿ ದೂಷಿಸಿ
ನೆಗೆದು ಪತಂಗ ಕಿಚ್ಚಿಲಿ ಬೀಳ್ವ
ಬಗೆಯಾದೆನು ಪುರಂದರ ವಿಠಲ
ಖಗರಾಜ ಸುವಾಹನ ||

No comments:

Post a Comment