Labels

Tuesday 31 March 2020

ಘಾತಕರಿನ್ನೇಕೆ ಪರಮಾರ್ಥ ಶ್ರವಣ



ಘಾತಕರಿನ್ನೇಕೆ ಪರಮಾರ್ಥ ಶ್ರವಣ ನೀತಿವಂತರೆ ನಿಮಗೆ ಪರನಿಂದೆ ಏಕೆ ? \\ಪ.\\
ಕೋತಿಗಂದಣವೇಕನಾಥನಿಗೆ ಮುನಿಸೇಕೆ ? ಹೋತು ಕಾಳಗವಾಡೆ ಖ್ಯಾತಿಯೇಕೆ ?
ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ? ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ?   \\1\\
ದಯವಂತನಲ್ಲದಾ ದೊರೆಯ ಸೇವೆಯು ಏಕೆ ? ಭಯವು ಉಳ್ಳವಗೆ ರಣರಂಗವೇಕೆ ?
ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆ ವ್ಯಯವಾದ ಧನಕಿನ್ನು ಚಿಂತೆಯೇಕೆ ?   \\2\\
ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆ ಬಲ್ಲಧಿಕ e್ಞÁನಿಗೆ ದ್ವೇಷವೇಕೆ ?
ಚೆಲ್ವ ಶ್ರೀ ಪುರಂದರ ವಿಠಲನ ದಯವಿರಲು ಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ?   \\3\\


ಗೋವಿಂದ ನಮೋ ಗೋವಿಂದ ನಮೋ Govinda namo Govinda


ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ ಗೋವರ್ಧನ ಗಿರಿಯೆತ್ತಿದ ಗೋವಿಂದ ನಮ್ಮ ರಕ್ಷಿಸೊ \\ಪ.\\
ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ ಕರ್ತು ಯಮನವರೆಳೆದು ಒಯ್ಯಲು ಅರ್ಥ ಪುತ್ರರು ಕಾಯ್ವರೆ  \\1\\
ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ \\2\\
ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು  ಬಿಡದೆ ಯಮನವರೆಳದು ಒಯ್ಯಲು ಎಡವಿ ಬಿದ್ದಿತು ನಾಲಗೆ \\3\\
ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು ಪ್ರಾಣ ಹೋಗಲು ಮುಟ್ಟಲಂಜುವಳು ಜಾಣೆ ಕರೆದರೆ ಬಾರಳು \\4\\
ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು  ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು \\5\\
ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು \\6\\
ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ \\7\\


ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ govinda enniro hari govinda enniro


ಗೋವಿಂದ ಎನ್ನಿರೊ - ಹರಿ ಗೋವಿಂದ ಎನ್ನಿರೊ  ಗೋವಿಂದನ ನಾಮವ ಮರೆಯೆದಿರಿರೊ   \\ಪ. \\
ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು  ಸಂಭ್ರಮದರಸುಗಳೈದು ಮಂದಿ ||
ಡಂಭಕತನದಿಂದ ಕಾಯುವ ಜೀವವ  ನಂಬಿ ನಚ್ಚಿ ಕೆಡಬೇಡಿ ಕಾಣಿರೊ   \\1 \\
ನೆಲೆಯು ಇಲ್ಲದ ಕಾಯ ಎಲವಿನ ಹಂದರವು  ಬಲಿದು ಸುತ್ತಿದ ಚರ್ಮದ ಹೊದಿಕೆ ||
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ  \\2 \\
ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ  ಹರಿಯೇ ಸರ್ವೋತ್ತಮನೆಂದೆನ್ನಿರೊ ||
ಪುರಂದವಿಠಲನ ಸ್ಮರಣೆಯ ಮಾಡಲು  ದುರಿತ ಭಯಂಗಳ ಪರಿಹರಿಸುವುದು \\3 \\


ಗೋವರ್ಧನಗಿರಿಯ ನೆಗಹಿಬಂದು


ಗೋವರ್ಧನಗಿರಿಯ ನೆಗಹಿಬಂದು - ನೀನಿಲ್ಲಿಹಾವಿನ ಮಂಚದ ಮೇಲೆ ಮಲಗಿದೆಯೊ ರಂಗ?   \\ಪ\\
ಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ |ಹಾದಿಹೋಗಿ ಕಾಲು ನೊಂದು ಮಲಗಿದೆಯೊ ರಂಗ?\\ 1\\
ಅಸುರೆ ಪೂತಣಿಯ ಮೊಲೆಯುಂಡು ಶಕಟನ ಒದೆದು | ಅಸುಗುಂದಿ ಮಲಗಿದೆಯೊ- ಶ್ರೀರಂಗ \\2\\
ಕಡಹದ ಮರದಿಂದ ಧುಮುಕಿ ಕಾಳಿಂಗನ |ಹೆಡೆಯ ತುಳಿದು ಕಾಲ್ನೊಂದು ಮಲಗಿದೆಯೊ? \\3\\
ಬಾಲ ಬ್ರಹ್ಮಣನಾಗಿ ಬಲಿಯ ದಾನವ ಬೇಡಿ |ನೆಲನನಳೆದು ಕಾಲುನೊಂದು ಮಲಗಿದೆಯೊ? \\4\\
ಶ್ರೀಶ ಶ್ರೀರಂಗರಾಜ ಪರಮ ಪಾವನ |ಶೇಷಶಯನ ಶ್ರೀಪುರಂದರ ವಿಠಲ \\5\\


ಗೋಪಿಯ ಭಾಗ್ಯವಿದು |


ಗೋಪಿಯ ಭಾಗ್ಯವಿದು |
ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪ
ಅಂಬೆಗಾಲಿಡು ಹರಿಕುಣಿದಾಡೈ ತೋ-|
ಳಂಬಲಿ ತಾ ಹೊಂಗುಬ್ಬಿಯನು ||
ಅಂಬುಜನಾಭ ನೀನಾನೆಯನಾಡೆಂದು |
ಸಂಭ್ರಮದಿಂದ ಮುದ್ದಾಡುವಳೊ 1
ನಿತ್ಯ ನಿರ್ಮಲನಿಗೆ ನೀರನೆರೆದು ತಂದು |
ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||
ಸತ್ಯಲೋಕವನಾಳುವ ವಿಧಿಜನಕನ |
ಪುತ್ರನೆಂದರಿತು ತಕ್ಕೈಸುವಳೊ 2
ಪಾಲುಗಡಲು ಮನೆಯಾಗಿ ಮೂಲೋಕವ |
ಪಾಲಿಸುತಿಪ್ಪ ನಾರಾಯಣನ ||
ಕಾಲ ಮೇಲೆ ಮಲಗಿಸಿ ಬಟ್ಟಲ ತುಂಬ |
ಹಾಲು ಕುಡಿಸಿ ಸಂತೈಸುವಳೊ 3
ಹರಿ ನಿತ್ಯ ತೃಪ್ತನೆಂದರಿಯದೆ ಹೊನ್ನಿನ |
ಹರಿವಾಣದೊಳಗೆ ಮೃಷ್ಟಾನ್ನವನು ||
ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|
ಕರೆದು ಉಣಿಸಿ ತೃಪ್ತಿ ಬಡಿಸುವಳೊ 4
ಅಂಗಜಪಿತನಿಗೆ ಮೋಹದಿಂದ ಹೊಸ |
ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||
ಬಂಗಾರದರಳೆಲೆ ಬಿಂದುಲಿಗಳನಿಟ್ಟು |
ಸಿಂಗರವನು ಮಾಡಿ ನೋಡುವಳೊ 5


ಗೋಪಿ ನಿನ್ನ ಮಗನಿಗಾಗೆ-ಕೇರಿಯ ಬಿಟ್ಟು


ಗೋಪಿ ನಿನ್ನ ಮಗನಿಗಾಗೆ-ಕೇರಿಯ ಬಿಟ್ಟು |
ಪೋಪೆವೆ ಬೆಳಗಾಗೆ ಪ
ಮಕ್ಕಳನಾಡಗೊಡ-ಮನೆಯ ಹೊಕ್ಕು |
ಉಕ್ಕುವ ಪಾಲ್ ಕುಡಿವ||
ಗಕ್ಕನೆ ಕಂಡರೊಡನೆ ನಮ್ಮೆಲ್ಲರ ಕೈಗೆ |
ಸಿಕ್ಕದೆ ಓಡಿದನೆ 1
ಮೊಸರನೆಲ್ಲವ ಸುರಿದ-ಮೇಲಿಟ್ಟಂಥ |
ಹೊಸಬೆಣ್ಣೆಗೆ ತಾ ಹಾರಿದ ||
ಕೊಸರಿ ನೆಲುವಿನ ಮೇಲಿರಿದ ಕೃಷ್ಣ ತಾ |
ಮುಸುರೆನೊಳಗೆ ಸುರಿದ 2
ಅಂತಿಂಥವನಲ್ಲ ಕಾಣೆ-ನಿನ್ನವ ಜಗ-|
ದಂತರ್ಯಾಮಿಯು ಜಾಣೆ ||
ಅಂತರಂಗದಲ್ಲಿ ನೋಡಲು ಪುರಂದರ-|
ವಿಠಲ ಬಂದಿದ್ದ ಕಾಣೆ 3


ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |


ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |
ಗೋಕುಲದೊಳಗಿರಲಾರೆವಮ್ಮ ಪ
ಸಾಕು ಸಾಕು ನಮಗೇಕೆ ರಚ್ಚೆಗಳು |
ಆ ಕೃಷ್ಣನ ಪರಿ ನೀ ಕೇಳಮ್ಮ ಅ.ಪ
ಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||
ರೇಳು ಭುವನದೊಳಾಡುತಲಿರಲಿ |
ಆಲದೆಲೆಯ ನಮ್ಮಾಲಯವನೆ ಪೊಕ್ಕು-|
ಬಾಲೆಯರೆಲ್ಲರ ಬತ್ತಲೆ ಮಾಡಿ ||
ಶಾಲೆಗಳೆಲ್ಲ ಮೇಲಕೆ ಹಾರಿಸಿ |
ಆಲಂಗಿಸಿಕೊಂಡು ಬರುವನಮ್ಮ 1
ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |
ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |
ಅನುಬಂಧನಾಗಿ ಇದ್ದರೆ ಇರಲಿ ||
ಅನುವು ಕಂಡುಕೊಂಡಾವೇಳೆಯಲಿ |
ಉಣಬಿಟ್ಟಾಕಳ ಕರುಗಳನುಣಿಸಿ ||
ಮನೆಯವರೆಲ್ಲರನೆಬ್ಬಿಸಿ ತಾನೇ |
ಮನೆಯೆಲ್ಲವ ಸೂರಾಡಿದನಮ್ಮ 2
ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |
ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |
ಯಾರ ಮುಂದೆ ಹೇಳಲಿ ಸೊಲ್ಲ? ||
ಓರಗೆಯಲಿ ಸಂಸಾರ ಮಾಡುವ |
ನಾರಿಯರೆಲ್ಲರ ರಂಬಿಸಿಕರೆದು ವಿ-|
ಕಾರ ಮಾಡದಂತೆ ಪುರಂದರವಿಠಲಗೆ |
ಸಾರಿಸಾರಿ ನೀ ಬುದ್ಧಿ ಹೇಳಮ್ಮ 3


ಗೋಕುಲದೊಳಗಿರಲಾರೆವಮ್ಮ


ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |
ಗೋಕುಲದೊಳಗಿರಲಾರೆವಮ್ಮ ಪ
ಸಾಕು ಸಾಕು ನಮಗೇಕೆ ರಚ್ಚೆಗಳು |
ಆ ಕೃಷ್ಣನ ಪರಿ ನೀ ಕೇಳಮ್ಮ ಅ.ಪ
ಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||
ರೇಳು ಭುವನದೊಳಾಡುತಲಿರಲಿ |
ಆಲದೆಲೆಯ ನಮ್ಮಾಲಯವನೆ ಪೊಕ್ಕು-|
ಬಾಲೆಯರೆಲ್ಲರ ಬತ್ತಲೆ ಮಾಡಿ ||
ಶಾಲೆಗಳೆಲ್ಲ ಮೇಲಕೆ ಹಾರಿಸಿ |
ಆಲಂಗಿಸಿಕೊಂಡು ಬರುವನಮ್ಮ 1
ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |
ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |
ಅನುಬಂಧನಾಗಿ ಇದ್ದರೆ ಇರಲಿ ||
ಅನುವು ಕಂಡುಕೊಂಡಾವೇಳೆಯಲಿ |
ಉಣಬಿಟ್ಟಾಕಳ ಕರುಗಳನುಣಿಸಿ ||
ಮನೆಯವರೆಲ್ಲರನೆಬ್ಬಿಸಿ ತಾನೇ |
ಮನೆಯೆಲ್ಲವ ಸೂರಾಡಿದನಮ್ಮ 2
ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |
ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |
ಯಾರ ಮುಂದೆ ಹೇಳಲಿ ಸೊಲ್ಲ? ||
ಓರಗೆಯಲಿ ಸಂಸಾರ ಮಾಡುವ |
ನಾರಿಯರೆಲ್ಲರ ರಂಬಿಸಿಕರೆದು ವಿ-|
ಕಾರ ಮಾಡದಂತೆ ಪುರಂದರವಿಠಲಗೆ |
ಸಾರಿಸಾರಿ ನೀ ಬುದ್ಧಿ ಹೇಳಮ್ಮ 3


ಗೋಕುಲದ ಗೋಪಿಯರದೆಷ್ಟು ಧನ್ಯರೋ |


ಗೋಕುಲದ ಗೋಪಿಯರದೆಷ್ಟು ಧನ್ಯರೋ |
ಶ್ರೀಕಾಂತನನುರಾಗದಲಿ ಪಾಡುತಿಹರೊ ಪ
ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |
ತಳಿಸಾರಣಿ ಸಮ್ಮಾರ್ಜಿಸುವಾಗ ||
ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |
ಬೆಳಗುಜಾವದಿ ಮೊಸರ ಕಡೆವಾಗಲು 1
ನಡೆವಾಗ ನುಡಿವಾಗ ಭೋಜನವ ಮಾಡುವಾಗ |
ಉಡುವಾಗ ಆಭರಣ ಇಡುವಾಗಲು ||
ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |
ಅಡಿಗಡಿಗೆ ತಾಂಬೂಲ ಮೆಲುವಾಗಲು 2
ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |
ಪರಿಪರಿ ಗೀತಪ್ರಸಂಗದಿಂದ ||
ಪರಿಪೂರ್ಣನಾದ ಶ್ರೀ ಪುರಂದರವಿಠಲನ |
ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3


ಗೆದ್ದೆಯೊ ಹನುಮಂತಾ-ಅಸುರರ


ಗೆದ್ದೆಯೊ ಹನುಮಂತಾ-ಅಸುರರ
ಒದ್ದೆಯೊ ಬಲವಂತಾ ಪ
ಬದ್ಧಾಂಜಲಿಯಿಂದ ರಘುಪತಿ ಪಾದವ
ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ಅ.ಪ
ಅಂಜನಿಸುತನೀತ-ಲಂಕಾಪುರದಿ-ಅಕ್ಷಯನ ಕೊಂದಾತ ||
ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು |
ಮಂಜುಳವಾರೆಯ ತಂದ ರಾಮನ ದೂತ 1
ಈರೇಳು ಜಗದೊಳಗೆ-ಇನ್ನು ಮತ್ತೆ ಯಾರು ಸರಿಯೊ ನಿನಗೆ
ವೀರ ಮಹಾಬಲ ಶೂರ ಪರಾಕ್ರಮ |
ಧೀರ ಸಮೀರ ಉದಾರ ಗಂಭೀರ 2
ವಾಂಛಿತ ಫಲವೀವ-ನಾದ ಮುಖ್ಯ- ಪ್ರಾಣ ಮಹಾನುಭಾವ ||
ಕಿಂಚಿತ್ತು ಕಷ್ಟವ ಪಡಲೀಸ ಭಕ್ತರ್ಗೆ |
ಪಾಂಚಜನ್ಯ ಪುರಂದರ ವಿಠಲದಾಸ 3


ಗುಮ್ಮನ ಕರೆಯದಿರೆ-ಅಮ್ಮ ನೀನು


ಗುಮ್ಮನ ಕರೆಯದಿರೆ-ಅಮ್ಮ ನೀನು |
ಗುಮ್ಮನ ಕರೆಯದಿರೆ ಪ
ಸುಮ್ಮನೆ ಇರುವೆನು ಅಮ್ಮಿಯ ಬೇಡೆನು |
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲಅ.ಪ
ಹೆಣ್ಣುಗಳಿರುವಲ್ಲಿಗೆ-ಹೋಗಿ ಅವರ-|
ಕಣ್ಣ ಮುಚ್ಚುವುದಿಲ್ಲವೆ ||
ಚಿಣ್ಣರ ಬಡಿಯೆನು ಅಣ್ಣನ ಬೈಯೆನು |
ಬೆಣ್ಣೆಯ ಬೇಡೆನು ಮಣ್ಣ ತಿನ್ನುವುದಿಲ್ಲ 1
ಬಾವಿಗೆ ಹೋಗೆ ಕಾಣೆ-ಅಮ್ಮ ನಾನು-|
ಹಾವಿನ ಮೇಲಾಡೆ ಕಾಣೆ ||
ಆವಿನ ಮೊಲೆಯೂಡೆ ಕರುಗಳನ್ನು ಬಿಡೆ |
ದೇವರಂತೆ ಒಂದು ಠಾವಲಿ ಕೊಡುವೆ2
ಮಗನ ಮಾತನು ಕೇಳಬೇಡ-ಗೋಪಿದೇವಿ-|
ಮುಗುಳುನಗೆಯ ನಗುತ ||
ಜಗದ ಒಡೆಯ ಶ್ರೀಪುರಂದರವಿಠಲನ |
ಬಿಗಿದಪ್ಪಿಕೊಂಡಳು ಮೋಹದಿಂದಾಗ 3


ಗಿಳಿಯು ಪಂಜರದೊಳಿಲ್ಲ - ಶ್ರೀ ರಾಮ ರಾಮ |


ಗಿಳಿಯು ಪಂಜರದೊಳಿಲ್ಲ - ಶ್ರೀ ರಾಮ ರಾಮ |
ಗಿಳಿಯು ಪಂಜರದೊಳಿಲ್ಲ ಪ.
ಅಕ್ಕ ಕೇಳೆ ಎನ್ನ ಮಾತು ||
ಚಿಕ್ಕದೊಂದು ಗಿಳಿಯ ಸಾಕಿದೆ ||
ಅಕ್ಕ ನಾನಿಲ್ಲದ ವೇಳೆ |
ಬೆಕ್ಕು ಕೊಂಡು ಹೋಯಿತಯ್ಯೋ 1
ಅರ್ತಿಗೊಂದು ಗಿಳಿಯ ಸಾಕಿದೆ |
ಮುತ್ತಿನ ಹಾರವನು ಹಾಕಿದೆ ||
ಮುತ್ತಿನಂಥ ಗಿಳಿಯು ತಾನು |
ಎತ್ತ ಹಾರಿ ಹೋಯಿತಯ್ಯೋ 2
ಹಸಿರು ಬಣ್ಣದ ಗಿಳಿಯು |
ಕುಶಲ ಬುದ್ಧಿಯ ಗಿಳಿಯು ||
ಹಸಗುಂದಿ ಗಿಳಿಯು ತಾ |
ಮೋಸ ಮಾಡಿ ಹೋಯಿತಯ್ಯೋ 3
ಮುಪ್ಪಾಗದ ಬೆಣ್ಣೆಯ |
ತಪ್ಪದೆ ಹಾಕಿದೆ ಹಾಲು ||
ಒಪ್ಪದಿಂದ ಕುಡಿದು ತಾನು |
ಗಪ್ಪನೆ ಹಾರಿ ಹೋಯಿತಯ್ಯೋ 4
ಒಂಬತ್ತ ಬಾಗಿಲ ಮನೆಯು |
ತುಂಬಿದ ಸಂರ್ದಶಿ ಇರಲು ||
ಕಂಬ ಮುರಿದು ಡಿಂಬ ಬಿದ್ದು |
ಅಂಬರಕಡರಿ ಹೋಯಿತಯ್ಯೋ 5
ರಾಮ ರಾಮ ಎಂಬ ಗಿಳಿಯು |
ಕೋಮಲ ಕಾಯದ ಗಿಳಿಯು ||
ಸಾಮಜಪೋಷಕ ತಾನು |
ಪ್ರೇಮದಿ ಸಾಕಿದ ಗಿಳಿಯು 6
ಅಂಗೈಯಲಾಡುವ ಗಿಳಿಯು |
ಮುಂಗೈಯ ಮೇಲಿನ ಗಿಳಿಯು ||
ರಂಗ ಪುರಂದರವಿಠಲನಂತ |
ರಂಗದೊಳಿಹ ಗಿಳಿಯು 7


ಗಾಳಿ ಬಂದ ಕೈಯಲಿ ತೂರಿಕೊಳ್ಳಿರೊ


ಗಾಳಿ ಬಂದ ಕೈಯಲಿ ತೂರಿಕೊಳ್ಳಿರೊ |
ನಾಲಗೆಯಿದ್ದ ಕೈಯಲಿ ನಾರಾಯಣನೆನ್ನಿರೊಪ.
ಕದ್ದು ಹುಸಿಯನಾಡಿ ಅಪಾರ |
ಬುದ್ದಿಯಿಂದ ಕೆಡಲು ಬೇಡಿ ||
ಬುದ್ದಿವಂತರಾಗಿ - ಅನಿ |
ರುದ್ಧನ ನೆನಯಿರೊ 1
ನಿತ್ಯವಿಲ್ಲ ನೇಮವಿಲ್ಲ |
ಮತ್ತೆ ಧಾನಧರ್ಮವಿಲ್ಲ ||
ವ್ಯರ್ಥವಾಗಿ ಕೆಡದೆ - ಪುರು |
ಷೋತ್ತಮನೆನ್ನಿರೊ 2
ಭಕ್ತಿಕೊಡುವ ಮುಕ್ತಿಕೊಡುವ |
ಮತ್ತೆ ದಾಯುಜ್ಯ ಕೊಡುವ ||
ಕರ್ತೃ ಪುರಂದರವಿಠಲನ |
ನಿತ್ಯ ನೆನೆಯಿರೊ 3


ಗರುಡ ಗಮನ ಬಂದನೋ-ನೋಡಿರೊ ಬೇಗ


ಗರುಡ ಗಮನ ಬಂದನೋ-ನೋಡಿರೊ ಬೇಗ
ಗರುಡ ಗಮನ ಬಂದನೋ ಪ
ಗರುಡ ಗಮನ ಬಂದ ಧರಣಿಯಿಂದೊಪ್ಪುತ
ಕರೆದು ಬಾರೆನ್ನುತ ವರಗಳ ಬೀರುತ ಅ.ಪ
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ
ಚಿನ್ನದೊಲ್ ಪೊಳೆವ ವಿಹಂಗ ರಥದಲಿ ||
ಘನ್ನ ಮಹಿಮ ಬಂದsಚ್ಛಿನ್ನ ಮೂರುತಿ ಬಂದ
ಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ 1
ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ||
ಸೂಕ್ಷ್ಮ-ಸ್ಥೂಲದೊಳಗಿರುವನು ತಾ ಬಂದ
ಸಾಕ್ಷೀ ಭೂತನಾದ ಸರ್ವೇಶ್ವರ ಬಂದ 2
ತಂದೆ ಪುರಂದರ ವಿಠಲರಾಯ ಬಂದ
ಬಂದು ನಿಂದು ನಲಿದಾಡುತಿಹ ||
ಅಂದು ಸಾಂದೀಪನ ನಂದನನ ತಂದಿತ್ತ
ಸಿಂಧು ಶಯನ ಆನಂದ ಮೂರುತಿ ಬಂದ 3


ವಂದಿಸುವುದಾದಿಯಲಿ ಗಣನಾಥನ



ವಂದಿಸುವುದಾದಿಯಲಿ ಗಣನಾಥನ ಪಸಂದೇಹ ಸಲ್ಲ ಶ್ರೀಹರಿಯಾಜ್ಞೆಯಿದಕುಂಟು ಅ.ಪಹಿಂದೆ ರಾವಣ ತಾನು ವಂದಿಸದೆ ಗಜಮುಖನನಿಂದು ತಪವನು ಗೈದು ವರ ಪಡೆಯಲುಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿತಂದ ವರಗಳನೆಲ್ಲ ಧರೆಗೆ ಇಳಿಸಿದನು 1ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆಮುಂದೆ ಗಣಪನ ಪೂಜಿಸೆಂದು ಪೇಳೆ


ಗಂಡಬಿಟ್ಟ ಗೈಯಾಳಿ ಕಾಣಣ್ಣ -


ಗಂಡಬಿಟ್ಟ ಗೈಯಾಳಿ ಕಾಣಣ್ಣ - ಅವಳ
ಕಂಡರೆ ಕಡೆಗಾಗಿ ದಾರಿ ಪೋಗಣ್ಣ ಪ.
ಊರೊಳಗೆ ತಾನು ಪರದೇಶಿಯೊನ್ನವಳು
ಸಾರುತ ತಿರುಗುವಳು ಮನೆಮನೆಯ
ಕೇರಿ - ಕೇರಿಗುಂಟ ಕಲೆಯತ ತಿರುಗುವಳು
ನಾರಿಯಲ್ಲವೊ ಮುಕ್ಕಾ ಮಾರಿಕಾಣ್ಣ 1
ಅತ್ತೆ ಮಾವನ ಕೂಡ ಅತಿ ಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯರ ದೇವರ ಸತ್ಯ ನಿಜವಾದರೆ
ಬತ್ತಲೆ ಅಡ್ಡಂಬಲೂಡೇನೆಂಬುವಳು 2
ಹಲವು ಜನರೊಳು ಕಿವಿಮಾತನಾಡವಳು
ಹಲವು ಜನರೊಳು ಕಡಿದಾಡವಳು
ಹಲವು ಜನರೊಳ ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಬರಲಿ ಹೆಣ್ಣು 3
ಪರಪುರುಷರ ಕೂಡಿ ಸರಸವಾಡುತ ಹೋಗಿ
ನೆರೆದಿದ್ದ ಸಭೆಯಲಿ ಕರೆಯುವಳು
ಮರೆಸಿ ತನ್ನವಗುಣ ಗಾಡಿಯೆಂದು ಮೆರೆವಳು
ಕರಿರೂಪದವಳ ನೀ ಕೆಣಕದಿರಣ್ಣ 4
ಏಸು ಗೃಹಗಳೆಂದು ಎಣಿಸಿ ನೋಡಿಬಂದು
ಬೇಸರದೆ ಜನಕೆ ಹೇಳುವಳು
ಲೇಸಾಗಿ ಪುರಂದರವಿಠಲನು ಹೇಳಿದ
ಹೇಸಿ ತೊತ್ತನು ನೀನು ಕೆಣಕದಿರಣ್ಣ 5


ಕೋಳಿ ಕೊಗಿತಲ್ಲಾ - ಲಕ್ಷ್ಮೀ


ಕೋಳಿ ಕೊಗಿತಲ್ಲಾ - ಲಕ್ಷ್ಮೀ
ಲೋಲನಲ್ಲದೆ ಅನ್ಯರಾರಿಲ್ಲವೆಂದು ಪ.
ಮೊದಲ ಜಾವದಲಿ ಮುಕುಂದನೆಂದು ಕೂಗಿ
ಎರಡಲಿ ಶ್ರೀ ವೆಂಕಟಾದ್ರಿಯೆಂದು ||
ಉರಗಗಿರಿಯ ವಾಸ ಯಾದವ ಕುಲ ಗೊಲ್ಲ
ಚದುರ ಚಲ್ಲಪಿಲ್ಲಿ ರಾಯನಲ್ಲದಿಲ್ಲವೆಂದು 1
ಮೂರು ಜಾವದಲಿ ಮುರಾರಿಯೆಂದು ಕೂಗಿ
ನಾಕರಲಿ ನಾರಾಯಣಯೆನಲು ||
ಕ್ಷೀರಾಬ್ಧಿಯ ವಾಸ ಲಕ್ಷ್ಮೀಪತಿ ಕೋ
ನೇರಿವಾಸ ವೆಂಕಟಕೃಷ್ಣರಾಯನೆಂದು 2
ಪರಮಪುರುಷ ಮುಖ್ಯ ಆಧಾರಭೂತ
ಕರುಣದ ಪುಂಜನು ಜಗದಾದಿ ತಾ ||
ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿ
ವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು 3
ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದ
ಕೊಕ್ಕನು ಮೇಲೆ ನೆಗಹಿಕೊಳುತ ||
ಚಕ್ಕನೆ ಕೇರಿ ಕೇರಿಯಗುಂಟ ಸಾಗುತ
ಮುಕುಂದನಲ್ಲದೆ ಅನ್ಯರಾರಿಲ್ಲವೆಂದು 4
ಐದು ಜಾವದಲಿ ಅನಂತನೆಂದು ಕೂಗಿ
ಆರರಲ್ಲಿ ಅಳಗಾದ್ರೀಶಯೆಂದು ||
ಏಳರಲ್ಲಿ ಕಾಶಿಯ ಬಿಂದುಮಾಧವ
ಎಂಟಕೆ ಪುರಂದರವಿಠಲರಾಯನೆಂದು 5


ಕೊಬ್ಬಿನಲಿರಬೇಡವೊ - ಏ ನಮ್ಮ ನನುಜಾ


ಕೊಬ್ಬಿನಲಿರಬೇಡವೊ - ಏ ನಮ್ಮ ನನುಜಾ
ಕೊಬ್ಬಿನಲಿರಬೇಡವೊ ಪ.
ಸಿರಿಬಂದ ಕಾಲಕೆ ಸಿರಿಮದವೆಂಬರು
ಬಿರಿದು ಬಿರಿದು ಮೇಲಕೆ ಮಾಳ್ಪರು
ಸಿರಿಹೋದ ಮರುರಿನ ಬಡತನ ಬಂದರೆ
ಹುರುಕು - ಕಜ್ಜಿಯ ತುರಿಸಿ ತಿರುಗುವರಯ್ಯಾ 1
ಒಡವೆ ವಸ್ತುವನಿಟ್ಟು ಬಡಿವಾರ ಮಾಳ್ಪರು
ನಡೆಯಲಾರನೆಂದು ಬಳುಕುವರು
ಸಿಡಿಲು ಎರಗಿದಂತೆ ಬಡತನ ಬಂದರೆ
ಕೊಡವ ಹೊತ್ತನಾರ ತರುವರಯ್ಯ 2
ವ್ಯಾಪಾರ ಬಂದಾಗ ವ್ಯಾಪಾರ ಮಾಳ್ಪರು
ಶಾಪಿಸಿಕೊಂಡರು ಬಡವರ ಕೈಲಿ
ಶ್ರೀಪತಿ ಪುರಂದರವಿಠಲರು ಮುನಿದರೆ
ಭೊಪಾರದೊಳಗೆಲ್ಲ ತಿರಿದು ತಿಂಬರಯ್ಯ 3


ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|


ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|
ಪಿಡಿವುದೆಂದು ನೀ ಒಲಿವುದೆಂದು ಪ
ಕೊಡುಕೊಂಬ ಮಹದನುಗ್ರಹದವನೆಂದು ನಿ-|
ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪ
ಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |
ನೀನೇ ತತ್ತದ್ರೂಪನಾದೆಯಲ್ಲ ||
ಹೀನರೊಳ್ ನಾನತಿ ಹೀನನಾಗಿ-ಅಭಿ-|
ಮಾನಿಯಾಗಿ ಕಾಲಕಳೆದೆನಲ್ಲ ||
ವಾನರನಂಗೈಯ ಮಾಣಿಕ್ಯದಂತೆನ್ನ |
ಮಾನದಂತರ್ಯಾಮಿ ಸಿಕ್ಕೆಯಲ್ಲ ||
ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|
ಙÁ್ಞನ-ವೈರಾಗ್ಯ ಭಾಗ್ಯಗಳನು ದೇವ 1
ಕಾಡಿನ ಮೃಗವು ತಾ ಹಾಡಿದರೆ ನಂಬಿ |
ಆಡುವುದಲ್ಲದೆ ಓಡುವುದೆ? ||
ಕಾಡುವ ಪಶುವಿನ ಬಾಲವ ಕಟ್ಟಿಸಿ |
ಕೂಡೆ ಪಾಲ್ಗರೆಯಲು ಒದೆಯುವುದೆ? ||
ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|
ಡಾಡುವಳಲ್ಲದೆ ದೂಡುವಳೆ ||
ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |
ಮಾಡಬೇಡ ದಯೆಮಾಡಿ ನೀಡಿಷ್ಟವ 2
ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |
ನಿನ್ನ ಸೇರುವ ಯತ್ನ ಬಿಟ್ಟು ನಾನು ||
ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |
ಸುಣ್ಣಕಿಕ್ಕಿದ ನೀರಿನಂತಾದೆನು ||
ಎನ್ನಪರಾಧವನಂತ ಕ್ಷಮಿಸು ನೀನು |
ಮನ್ನಿಸದಿರಲಾರಿಗೆ ಪೇಳ್ವೆನು ||
ಓಂ ನಮೋ ಶ್ರೀ ಹರಿ ಎಂಬ ಪೂರ್ಣಙÁ್ಞನ-|
ವನ್ನು ಪುರಂದರವಿಠಲನ ಎನ್ನಪ್ಪನೆ 3


ಕೊಡುವ ಕರ್ತ ಬೇರೆ ಇರುತಿರೆ


ಕೊಡುವ ಕರ್ತ ಬೇರೆ ಇರುತಿರೆ -
ಬಿಡುಬಿಡು ಚಿಂತೆಯನು ಪ.
ಒಡೆಯನಾಗಿ ಮೂಜಗವನು ಪಾಲಿಪ |
ಬಡವರಾಧಾರಿಯು ಭಕ್ತರ ಪ್ರಿಯನು ಅಪ
ಕಲ್ಲಿನೊಳಗೆ ಇರುವ - ಕಪ್ಪೆಗೆ - |
ಅಲ್ಲೆ ಉದಕಕೊಡುವ |
ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |
ವಲ್ಲಭ ಶ್ರೀಹರಿ ಎಲ್ಲಿಯು ಇರುತಿರೆ |1||
ಆನೆಗೈದುಮಣದಾ - ಆಹಾರವ |
ತಾನೆ ತಂದು ಕೊಡುವ |
ದೀನರೊಡೆಯ ಶ್ರೀನಿವಾಸ ದಯಾನಿಧಿ |
ಮಾನದಿಂದಲಿ ಕಾಯ್ವ ಭಾನುಕೋಟಿ ತೇಜ 2
ಸರಸಿಜಾಕ್ಷ ತನ್ನ - ಸೇರಿದ |
ನರರನು ಬಿಡನಣ್ಣ |
ಪರಮದಯಾನಿಧಿ ಭಕುತರ ಸಲಹುವ | ಪುರಂದರವಿಠಲನು ಪುಷ್ಪಶರನ ಪಿತ 3


ಕೊಡು ಕಂಡೆಯಾ ಹರಿಯೆ-ನಿನ್ನ ನಾಮ


ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|
ಕೊಡು ಕಂಡೆಯಾ ಹರಿಯೆ ಪ

ಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪ
ಒಡಲು ತುಂಬದು ಎಂದು ಬಳಲಿಸೆ ಬರಲಿಲ್ಲ |
ಸಡಗರದಿಂ ಭಾಗ್ಯ ಬೇಡಲಿಲ್ಲ ||
ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |
ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ1
ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |
ನಾನಾಯೋನಿಗಳಲ್ಲಿ ಬಳಲಿ ಬಂದೆ ||
ದೀನರಕ್ಷಕ ನೀನೆ ದಯದಿಂದಲೆನಗಿನ್ನು |
ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ2
ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |
ಅಲಸಿ ಕೋಟಲೆಯ ಸಂಸಾರದಿಂದ |
ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |
ಸಲಹೊ ದೇವರ ದೇವ ಪುರಂದರ ವಿಠಲ3


ಕೊಡಬಹುದೇ ಮಗಳ - ಸಮುದ್ರರಾಜ


ಕೊಡಬಹುದೇ ಮಗಳ - ಸಮುದ್ರರಾಜ
ಕೊಡಬಹುದೇ ಮಗಳ ಪ
ನಡೆದರೆ ಬಡವಹಳೆಂಬ ಕುಮಾರಿಯ |
ಹಿಡಿಬಿಟ್ಟಿ ಮಾಡಿ ಹರಿಗೆ ಸಿಂಧುರಾಜನು ಅ.ಪ
ಕುರುಹಬಲ್ಲವರಾರು, ಕುಲಗೋತ್ರವಾವುದೊ |
ಅರಿತ ರಾಯರೊಳಗೆ ಆರ ಮಗನೊ ಇವ |
ವರುಶಭಾಂಗಿಗೆ ತಕ್ಕ ವರನಹುದೆ ಇವ |
ಹಿರಿಯರೆಂಬುದ ನೆರೆಹೊರೆಯೂ ಕಾಣದನಿವ |
ಪರಿಪಂಥಿಜನಕೆಲ್ಲ ಪ್ರಾಣಘಾತಕನಿವ |
ನಿರುತ ಮೇಘವ ಪೋಲ್ವ ನೀಲಮೆಯ್ಯವನಿವ,
ಹಿರಿದಾದ ನಾಲ್ಕು ಹಸ್ತಗಳುಳ್ಳವನಿವ |
ಅರುಣಚ್ಛಾಯೆಯ ರೇಖೆ ಅರಳಿಸಿ ಹಾರುವ ||
ಗರುಡಹಕ್ಕಿಯ ನೆಚ್ಚಿದ - ಎದೆಯ ಮೇಲೆ |
ಭರದಿ ಒದೆಯ ಮೆಚ್ಚಿದ - ಘೋರರೂಪ |
ಧರಿಸಿ ಕೋಪದಿ ಹೆಚ್ಚಿದ - ಕರೆವ ಗೋವ |
ಕರುಗಳ ಕೊರಳುಚ್ಚಿದ - ಸಂಸಾರದೊಳ್ |
ಇರುತಿಹ ನಾರಿಯರ ಮನವೆಲ್ಲ ಬಿಚ್ಚಿದ 1
ಅಡಿಗಡಿಗೆ ಹತ್ತು ಅವತಾರವ ಮಾಡಿದ |
ಕಡುಕಪತಿಯಲ್ಲದೆ ಭಾರಿ ಗುಣದವನಲ್ಲ |
ಗಿಡದ ಮರೆಯಲಿದ್ದು ಕಪಿಯ ಕೊಂದನು ಹೊಲ್ಲ |
ನಡತೆಯಲಿ ಸಲೆ ಜನಲಜ್ಜೆ ಇವನಿಗಿಲ್ಲ |
ಹಿಡಿದು ಪೂತನಿ ಮೊಲೆಯುಂಡ ಚೌಪಟಮಲ್ಲ |
ಮಡುಹಿದ ಮಾವನ ಮಧುರೆಯೊಳಗೆ ಖುಲ್ಲ |
ಕೊಡೆಮಾಡಿ ಬೆಟ್ಟವ ಗೋಕುಲದೊಳಗೆಲ್ಲ |
ಮಡದಿಯರುಡುಗೆಯ ಕದ್ದದ್ದು ಹುಸಿಯಲ್ಲ ||
ಕಡಹದ ಮರವೇರಿದ - ಅವರ ಮಾನ - |
ಕೆಡಿಸಿ ಭಂಡರ ಮಾಡಿದ - ದಧಿಕ್ಷೀರ - |
ಗಡಿಗೆ ಸೂರೆಯ ಮಾಡಿದ - ಕಾಳಿಂಗನ - |
ಮಡುವ ಕಲಕಿ ನೋಡಿದ - ಸ್ಯಂದನವನು |
ನಡೆಸುವ ಕಾರಣ ನರಗೆ ಸಾರಥಿಯಾದ 2
ಊದುತ ಕೊಳಲನರಣ್ಯದೊಳ್ ಗೋಗಳ |
ಕಾದು ಕುಂಚಿಗೆ ಮಾಡಿ ಕಂಬಳಿ ಪೊದೆವನು |
ಓದನವನು ಬೇಡಿ ಹೊಟ್ಟೆಯ ಹೊರೆದನು |
ಯಾದವರೊಳಗಾಡಿ ಎಂಜಲನುಂಡನು |
ಕ್ರೋಧದಿಂದ ಸುರರ ಕೊಂದು - ಕೊಂದಿಡುವನು |
ಪಾದರಿ ಪೆಣ್ಣುಗಳೊಳಗಿರುತಿಪ್ಪನು
ಆದಿಯೆ ಇವಗಿಲ್ಲ ಎಂದೆಂದಿಗಿಪ್ಪನು |
ಭೂದಿವಿಜರ ಕೂಡ ಬಿಕ್ಷಕೆ ಪೋಪನು ||
ಮೇದಿನಿಯೊಳಗಿರುವ - ಮಸ್ತಕವು ಬೋ - |
ಳಾದವರೊಳಗಿರುವ - ನೋಡಲು ಭೇದಾ - |
ಭೇದದಂದದಿ ತೋರುವ - ಸಭೆಯೊಳಗೆ |
ಬೈದರೆ ಮೈದೋರುವ ಶೇಷಶಾಯಿ - |
ಯಾದಂಥ ಪುರಂದರ ವಿಠಲನೆಂದರಿಯದೆ 3


ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ


ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ-|
ಬಿಟ್ಟರಂಜುವನಲ್ಲ ಹೊರು ಕಲ್ಲ ಕೃಷ್ಣ ಪ
ಕಾಲನೂರಿ ಅಡಿಯಿಟ್ಟರೆ-ಭೂ-|
ಪಾಲನಾಣೆ ನರಸಿಂಗನೆ ||
ಏಳು ವರ್ಷ ಬಡ್ಡಿ ಮೂಲಸಹಿತವಾಗಿ |
ತಾಳುವನಲ್ಲವೊ ತಿರುಕ ಹಾರುವನೆ 1
ಕೊರಳುಗೊಯ್ಕ ನೀನು ಸಾಲವ ತೆಗೆದು |
ತಿರುಗುವುದುಚಿತವೆ ವನವನವ ||
ಎರಡೇಳು ವರ್ಷಕೆ ಎನಗಿಂದು ಸಿಕ್ಕಿದೆ |
ಒರಳಿಗೆ ಕಟ್ಟದೆ ಬಿಡುವೆನೆ ಕೃಷ್ಣ 2
ಬತ್ತಲೆ ನಿಂತರೂ ಬಿಡುವೆನೆ ನಿನ್ನ |
ಉತ್ತಮ ಗುಣಗಳ ತೋರಿದೆ ||
ಹತ್ತಿದ್ದ ಕುದುರೆ ಸಹಿತವಾಗಿ ಹಿಡಿತಂದು |
ಚಿತ್ತದಿ ಕಟ್ಟುವೆ ಪುರಂದರವಿಠಲ 3


ಕೊಟ್ಟಸಾಲ ಕೊಡದೆ ಭಂಡಾಟ ಮಾಡುತಿಹನೆ |


ಕೊಟ್ಟಸಾಲ ಕೊಡದೆ ಭಂಡಾಟ ಮಾಡುತಿಹನೆ |
ಎಷ್ಟು ಕೇಳಿದರೆನಗೆ ಓಯೆನ್ನದಿಹನೆ ಪ
ಭರದಿ ಕೇಳಲು ಜಲದಿ ಕಣ್ಣ ಬಿಡುತಿಹನೆ |
ತರುಬಿ ಕೇಳಲು ಕಲ್ಲು ಹೊತ್ತು ನಿಂತಿಹನೆ ||
ಮರಳಿ ಕೇಳಲು ಊರ ಅಡವಿ ಸೇರುವನೆ |
ಇರುಳು ಹಗಲೆಲ್ಲ ಕಾಣಿಸಿಕೊಳ್ಳದಿಹನೆ 1
ಕಂಡು ನಿಲ್ಲಿಸಲೊಂದು ಕಾಲಲಿ ನಿಲುವನೆ |
ಕೊಂಡ ಸಾಲಕೆ ಕೊಡಲಿ ಪಿಡಿದು ನಿಲ್ಲುವನೆ ||
ಉಂಡರಾಣಿಯೆಂದು ಉಪವಾಸವಿರುವನೆ |
ಬಂಡನಂದದಿ ಠಕ್ಕುಟೌಳಿ ನಡಿಸುವನೆ 2
ಕೆಟ್ಟ ಬಯಲುಲಜ್ಜೆ ಹೇವ ತೊರೆಯುವನೆ |
ಕೊಟ್ಟು ಪೋಗೆನ್ನಲು ಕಲಿಯು ಆಗುವನೆ ||
ಸೃಷ್ಟಿಗೊಡೆಯ ಶ್ರೀರಂಗಪಟ್ಟಣದ ಪುರಂದರ |
ವಿಠಲೇಶನು ನಮ್ಮ ಪಶ್ಚಿಮರಂಗನಾಥನು 3


ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |


ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |
ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ ಪ
ಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |
ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ||
ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |
ಅಂಗನೆಯರ ಉತ್ತುಂಗ ಕುಚದಲಿಟ್ಟ ಕೈಯ ತೋರೊ 1
ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |
ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ||
ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |
ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ 2
ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |
ಬಲ್ಲಿದ ಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||
ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |
ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ 3
ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |
ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||
ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |
ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ 4
ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |
ನಾಕಪತಿಗೆ ಅಭಯವನಿತ್ತ-ಕೈಯ ತೋರೊ |
ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |
ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ 5


ಕೇಳೆ ಗೋಪಿ ಗೋಪಾಲ ಮಾಡಿದ ಬಲು


ಕೇಳೆ ಗೋಪಿ ಗೋಪಾಲ ಮಾಡಿದ ಬಲು |
ದಾಳಿಯ ಗೋಕುಲದಿ ಪ
ತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |
ಹೇಳೆ ಕೃಷ್ಣವ ಕರೆದು ಅ.ಪ
ಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |
ಸುರಿದು ಪಾಲ್ಪೆಣ್ಣೆಗಳ ||
ಉರೋಜಗಳಿಗೆ ಕರ ಸರಿಸಿ ಕಣ್ಗಳನು |
ತೆರೆದು ನೋಡುವನೆ ನಮ್ಮ 1
ಗಂಡನು ಮನೆಯೊಳಗಿರಲು ಬಂದು ಕೃಷ್ಣ |
ಭಂಡ ಮಾತುಗಳ ಬಹು ||
ತುಂಟತನದಲಾಡಿ ಉದ್ದಂಡ ಕಠಿಣಕಾಯ |
ದುಂಡುಕುಚವ ಪಿಡಿದ 2
_______ವದ ಮೇಲಿರಲು ತಾ |
ಸೀರೆಯ ಸೆಳೆವ ನೋಡೆ ||
ಆರಿವರೆಂದು ವಿಚಾರಿಸಿ ನೋಡಲು |
ಮೋರೆಯ ಬಾಗಿದನೆ 3
ಕೇರಿಯೊಳಗೆ ದಧಿ ಮಾರುತಿರಲು ಕೃಷ್ಣ |
ಸಾರಿ ಬಂದು ಮೊಸರ ||
ಸೂರೆಗೊಂಡು ಪರನಾರಿಯರ ನೆರೆದು ತಾ |
ಘೋರರೂಪದಿ ಮೆರೆದ 4
ಆಡಲೇತಕೆ ನಮ್ಮ ಬಾಗಿಲಂಗಳದೊಳು |
ಬೇಡುವ ಜಲ ದೈನ್ಯದಿ ||
ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |
ಮಾಡುವ ರತಿ ಎಂಬನೆ 5
ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |
ಉಡೆಮುಡಿ ಪಿಡಿದ ನೋಡೆ ||
ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |
ಕೊಡಲಿ ತೋರುವನೆ ಗೋಪಿ 6
ಮಡದಿಯರೆಲ್ಲರು ಮಿಯುತಲಿರೆ ಮೈ |
ಉಡುಗೆಯ ತೆಗೆದುಕೊಂಡು ||
ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |
ಕೊಡದೆ ಅಡವಿಗೆ ನಡೆದ 7
ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |
ಚಿಣ್ಣರ ಬಡಿವ ನೋಡೆ ||
ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |
ಬೆಣ್ಣೆಯ ತಿಂದಿರೆಂಬ 8
ಏಣಲೋಚನೆ ಸರ್ಪವೇಣಿ ನಮ್ಮ ಮನೆ |
ಓಣಿಯೊಳಗೆ ಪೋಗುತ ||
ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |
ತ್ರಾಣವ ತೋರಿದನೆ 9
ಪದುಮನಾಭನು ಪುರದ ಚದುರಿಯರಿಗೆ ತಾನು |
ಮದನಶಾಸ್ತ್ರವ ಪೇಳುತ ||
ಮುದದೊಳಗಿರಲವರೊಡೆಯ ಬರಲು ಕೃಷ್ಣ |
ಕುದುರೆಯ ನೇರಿದನೆ 10
ಎಷ್ಟುಪದ್ರವ ಕೊಟ್ಟರು ಗೋಕುಲದೊಳು |
ಬಿಟ್ಟವನಿರಲಾರೆವೆ ||
ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|
ವಿಠಲ ಸಲಹುವನೆ 11


ಕೇಳು ಕೋಪಿಸಬೇಡ ಹೇಳಲಿಕಂಜುವೆ


ಕೇಳು ಕೋಪಿಸಬೇಡ ಹೇಳಲಿಕಂಜುವೆ
ಬಾಳು ಬಡತನವ ನಾನು ಪ.
ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲ
ಬಲು ಭಂಡ ನಿನ್ನಯ ಕಿರಿಯ ಮಗ ||
ಲಲನೆಯು ಸೇರಿದಳು ಬಲು ಲೋಭಿಗಳ ಮನೆಯ
ಹೊಲಕುಲವರಿಯಳು ನಿನ್ನ ಸೊಸೆಯು ರಂಗ 1
ಮಗಳ ಮಾರ್ಗವು ಡೊಂಕು | ಮೈದುನ ಗುರುದ್ರೋಹಿ
ಮಗನ ಮಗನು ಚಾಡಿಗಾರ
ಹಗರಣಕೆ ನೀಚರ ಹಣ್ಣು ಮೆದ್ದೆಂಜಲ
ಜಗದೊಡೆಯನೆನಿಸಿಕೊಂಡೆ - ನೀನುಂಡೆ 2
ಲಕ್ಷ್ಮೀಪತಿಯು ಎನಿಸಿ ಭಿಕ್ಷೆ ಬೇಡಲು ಪೋದೆ
ಪಕ್ಷಿಯ ಪೆಗಲೇರಿ ರಾಜನೆನಿಸಿದೆ ||
ಸಾಕ್ಷಾತು ಪುರಂದರವಿಠಲನೆ ನಿನ್ನ ಗುಣ
ಲಕ್ಷಣ ಪೇಳಲಳವೆ - ಕಳೆವೆ3


ಕೇಳಲೊಲ್ಲನೆ ಎನ್ನ ಮಾತನು-ರಂಗ


ಕೇಳಲೊಲ್ಲನೆ ಎನ್ನ ಮಾತನು-ರಂಗ -|
ಕಾಳಿಮರ್ದನನಿಗೆ ಪೇಳೇ ಗೋಪಮ್ಮ ಬುದ್ಧಿ ಪ
ಬಿಟ್ಟ ಕಂಗಳ ಮುಚ್ಚಲೊಲ್ಲನೆ-ಬೇಗ- |
ಬೆಟ್ಟಕೆ ಬೆನ್ನೊಡ್ಡಿ ನಿಂತನೆ ||
ಸಿಟ್ಟಿಂದೆ ಕೋರೆಯ ತೋರ್ಪನೆ-ಬೇಗ-|
ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ರಂಗ 1
ಮೂರಡಿ ಭೂಮಿಯ ಬೇಡಿದನೆ-ನೃಪರ-|
ಬೇರ ಕಡಿಯಲು ಕೊಡಲಿ ತಂದನೆ |
ನಾರ ಸೀರೆಯನುಟ್ಟುಕೊಂಡನೆ-ಬೇಗ-|
ಚೋರತನದಿ ಹರವಿ ಹಾಲ ಕುಡಿದನಮ್ಮ 2
ಬತ್ತಲೆ ನಾರಿಯರನಪ್ಪಿದ-ಬೇಗ-|
ಉತ್ತಮ ಅಶ್ವವ ಹತ್ತಿದ ||
ಹತ್ತವತಾರವನೆತ್ತಿದ-ನಮ್ಮ-|
ಸತ್ಯಮೂರುತಿ ಪುರಂದರವಿಠಲರಾಯನು 3


ಕೇಳನೊ ಹರಿ ತಾಳನೋ


ಕೇಳನೊ ಹರಿ ತಾಳನೋ
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಪ.
ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು
ಕೊಂಬು ಕೊಳಲ ಧ್ವನಿಸಾರವಿದ್ದು ||
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಡಂಭಕದ ಕೂಗಾಟ 1
ನಾನಾಬಗೆಯ ಭಾವ ರಾಗ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು ||
ದಾನವಾರಿಯ ದಿವ್ಯ ನಾಮರಹಿತವಾದ
ಹೀನ ಸಂಗೀತ ಸಾಹಿತ್ಯವ ಮನವಿತ್ತು 2
ಅಡಿಗಡಿಗಾನಂದ ಬಾಷ್ಪ ಪುಳಕದಿಂದ
ನುಡಿನುಡಿಗೂ ಶ್ರೀ ಹರಿಯೆನ್ನುತ ||
ದೃಢಭಕ್ತರನು ಕೊಡಿ ಹರಿಕೀರ್ತನೆಯ ಪಾಡಿ
ಕಡೆಗೆ ಪುರಂದರವಿಠಲನೆಂದರೆ ಕೇಳ್ವ 3


ಕೇಶವನೊಲುಮೆಯು ಆಗುವ


ಕೇಶವನೊಲುಮೆಯು ಆಗುವ ತನಕಹರಿದಾಸರೊಳಿರು ಮನವೆ
ಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರನುತಿಗಳ ಪೊಗಳುತ ಮನದೊಳು ಪ.
ಮೋಸದಿ ಜೀವಿಯ ಘಾಸಿ ಮಾಡಿದ ಫಲ ಕಾಶಿಗೆ ಹೋದರೆ ಹೋದೀತೆ
ದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆ
ಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆ
ಶಶಿವದನೆಯ ಅಧರಾಮೃತ ಸೇವಿಸಿಸುಧೆಯೆಂದಡೆ ನಿಜವಾದೀತೆ 1
ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ ಹೀನ ವಿಷಯಗಳು ಹೋದಿತೇ
ಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆ
ಭಾನುವಿಕಾಸನ ಭಜನೆಯ ಮಾಡದ ದೀನಗೆಮುಕುತಿಯು ದೊರಕೀತೆ 2
ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆ
ತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯಮನಸಿಗೆ ತಿಳಿದೀತೆ

ಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ3
ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆನರಕವು ತಪ್ಪೀತೆ
ತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆಮುಕ್ತಿಯು ದೊರಕೀತೆ
ಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆ
ಮಾಯಾವಾದಗಳ ಕಲಿತಾ ಮನುಜಗೆಕಾಯಕಷ್ಟ ಬರದಿದ್ದೀತೆ 4
ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆ
ಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿರೋಗಗಳು ಬಿಟ್ಟೀತೆ
ಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆ
ಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5
ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆ
ಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆ
ಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆ
ಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6
ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆ
ಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆ
ಆರುಶಾಸ್ತ್ರವನು ಮೀರಿದ ಯೋಗಿಗೆ ತಾರಕ ಬ್ರಹ್ಮವು ತಪ್ಪೀತೆ
ವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7


ಕೇಶವ ನಾರಾಯಣ ಮಾಧವ -


ಕೇಶವ ನಾರಾಯಣ ಮಾಧವ - ಹರಿ |
ವಾಸುದೇವ ಎನಬಾರದೆ ? ಪ.
ಕೇಶವನ ನಾಮವನು ಏಸು ಬಾರಿ ನೆನೆದರೂ |
ದೋಷಪರಿಹವಪ್ಪುದು - ಏ ಜಿಹ್ವೆ ಅಪ
ಜಲಜನಾಭನ ನಾಮವು - ಈ ಜಗ - |
ದೊಳು ಜನಭಯಹರಣ ||
ಸುಲಭವೇದ್ಯನೆನಲೇಕೆ ಸುಖಕೆ ಸಾಧನವಿದು |
ಬಲಿಯೆಂಬ ಭಕ್ತನು ಬಗೆದು ರಸವನುಂಡು ಹೇ ಜಿಹ್ವೆ 1
(ಎರಡನೇ ನುಡಿ ಇಲ್ಲ)
ಹೇಮಕಶ್ಯಪ ಸಂಹಾರ - ಭಕ್ತರು ನಿನ್ನ |
ನಾಮವ ಸವಿದುಂಬರು ||
ವಾಮನ ವಾಮನನೆಂದು ವಂದಿಸಿದವರಿಗೆ |
ಶ್ರೀಮದನಂತ ಪುರಂದರವಿಠಲನು
ಕಾಮಿತ ಫಲವೀವನು - ಹೇ ಜಿಹ್ವೆ 3


ಕೇಶವ - ಮಾಧವ - ಗೋವಿಂದ


ಕೇಶವ - ಮಾಧವ - ಗೋವಿಂದ ವಿಠಲೆಂಬದಾಸಯ್ಯ ಬಂದ ಕಾಣೆ ಪ.
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆಳನು ವೇದವನೊಯ್ಯೆ ಪೊಳೆವ ಕಾನಾದದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯಪೊತ್ತದಾಸಯ್ಯ ಬಂದ ಕಾಣೆ
ಇಳೆಯಕದ್ದ ಸುರನ ಕೋರೆದಾಡಿಯ ಅಳಿದ ದಾಸಯ್ಯ ಬಂದ ಕಾಣೆ
ಛಲದಿ ಕಂಬದಿ ಬಂದು ಅಸುರನ ಸೀಳಿದದಾಸಯ್ಯ ಬಂದ ಕಾಣೆ 1
ಬಲಿಯ ದಾನವಬೇಡಿ ನೆಲವನಳೆದು ನಿಂದದಾಸಯ್ಯ ಬಂದ ಕಾಣೆ
ಮತಿತ ಕ್ಷತ್ರಿಯರ ಕು¯ವ ಸಂಹರಿಸಿದದಾಸಯ್ಯ ಬಂದ ಕಾಣೆ
ಲಲನೆಯ ನೊಯ್ಯೆ ತಾ ತಲೆ ಹತ್ತಾರನುಕೊಂದ ದಾಸಯ್ಯ ಬಂದ ಕಾಣೆ
ನೆಲ ಕೊತ್ತಿಕಂಸನ ಬಲವನಳಿದ ಮುದ್ದುದಾಸಯ್ಯ ಬಂದ ಕಾಣೆ 2
ಪುಂಡತನದಿ ಪೋಗಿ ಪುರವನುರುಪಿ
ಬಂದ ದಾಸಯ್ಯ ಕಾಣೆ
ಲಂಡರಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ
ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರ ವಿಠಲ
ದಾಸಯ್ಯ ಬಂದ ಕಾಣೆ 3


ಕೆಟ್ಟೆನಲ್ಲೊ ಹರಿಯೆ |


ಕೆಟ್ಟೆನಲ್ಲೊ ಹರಿಯೆ |
ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪ
ಬಂದೆನು ನಾ-ತಂದೆ-ತಾಯಿಗಳುದರದಿ |
ಒಂದನೂ ಅರಿಯದೆ ಬಾಲಕತನದೊಳು ||
ಮುಂದುವರಿದ ಯೌವನದೊಳು ಸತಿ-ಸುತ-|
ರಂದವ ನೋಡುತ ನಿನ್ನ ನಾ ಮರೆತೆನೊ 1
ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|
ಮಾನವಿಲ್ಲದೆ ಕುಲಹೀನರಾಶ್ರಯದಿಂದ ||
ಙÁ್ಞನಿಗಳೊಡನಾಟವಿಲ್ಲದೆ ಮನದೊಳು |
ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2
ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |
ಕದನವು ದಶದಿಕ್ಕಿನುದಯದ ರಾಯರ ||
ಎದೆನೀರು ಬತ್ತಿತು ಅದರಿಂದ ನಿನ್ನಯ |
ಪದಪದ್ಮಯುಗಳದ ತುದಿಯ ನಾ ಮರೆತೆನು 3
ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |
ಕಾಡೊಳಗಾಡುವ ಮೃಗದಂತೆ ಜೀವಿಸಿ ||
ಗೂಡೊಳಗಿರುತಿಹ ಗೂಬೆಯ ತೆರನಂತೆ |
ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4
ಬುದ್ದಿಹೀನನು ನಾನು ಉದ್ದರಿಸೆಲೊ ದೇವ
ಮುದ್ದು ಶ್ರೀ ಪುರಂದರ ವಿಠಲನೆನ್ನ ||
ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |
ಪೊದ್ದುವೆ ನಿನ್ನಯ ಚರಣಾರವಿಂದವ 5


ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟ


ಕೆಟ್ಟು ನೆಂಟರ ಸೇರುವುದು ಬಹಳ ಕಷ್ಟ
ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ಪ.
ಹರಿಯನಪ್ಪಲುಬಹುದು ಉರಿಯ ಮುಕ್ಕಲುಬಹುದು
ಉರುವ ಮಾರಿಗೆ ಗ್ರಾಸವಾಗಬಹುದು
ಸುರಿವ ಕೆಂಡದ ಮನೆಗೆ ಬರಿಮೈಯೊಳಿರಬಹುದು
ಧರೆಯೊಳಗೆ ದಾರಿದ್ರವಾರಿಗೂ ಬೇಡವೋ 1
ವಿಷಯ ಕುಡಿಯಲುಬಹುದು ಇರಿದುಕೊಳ್ಳಲುಬಹುದು
ಹಸಿದ ಹುಲಿಬಾಯಿ ತುತ್ತಾಗಬಹುದು
ಹಸೆಗೆಟ್ಟು ಹೋದ ನಂಟಿರಲಿ ತಾ ಬಾಯನ್ನು
ಕಿಸಿಯಲಾಗದು ಕೊರಳ ಹಿಸುಕಿಕೊಳಬಹುದು 2
ಕುಡುಗೋಲು ಪಿಡಿದು ಕೂಟಿಯಮಾಡಿ ಉಣಬಹುದು
ಒಡಲಾಸೆಗೊಲ್ಬುರಾಳಾಗಬಹುದು
ಒಡೆಯ ಶ್ರೀ ಪುರಂದರವಿಠ¯ ಸ್ಮರಣೆಯಲಿ
ಬಡವನಾಗಿಯೇ ಬೇಡಿ ಉಣ್ಣಬಹುದು 3


ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮ


ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮ
ನಟ್ಟುಳಿದಶನವಾಯಿತು ಪ.
ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ
ಬಿಟ್ಟು ಮುಂದಣ ಪಥವ - ಹೇ ದೇವಾ ಅಪ
ಸತ್ಯ ಕಾಮ ಕರ್ಮವು ಧರ್ಮದ ಬಲ
ಮತ್ತೆ ಅಡಗಿಹೋಯಿತು
ಎತ್ತ ನೋಡಲು ನೀಚವೃತ್ತಿಯೆ ತುಂಬಿ
ಅತ್ಯಂತ ಪ್ರಬಲವಾಯ್ತೋ ಹೇ ದೇವಾ 1
ಹೊತ್ತು ಹೊತ್ತಿಗೆ ಹಲವು ಲಂಪಟತನದಲಿ
ಚಿತ್ತ ಚಂಚಲವಾಯಿತು
ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು
ಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2
ಪೇಳುವುದೇನಿನ್ನು ದುರ್ಜನರ ಸಂಗ
ದೋಲಾಟ ಸೊಗಸಾಯಿತು
ಕೀಳು ಮೇಲು ಮೇಲು ಕೀಳಾಗಿ ನಡೆಯುವ
ಕಾಲ ವೆಗ್ಗಳವಾಯಿತೋ ಹೇ ದೇವಾ 3
ಆಳುವ ಅರಸರಿಗೆಲ್ಲ ಕಾಂತನದಾಸೆ
ಮೇಲು ಮೇಲಾಯಿತಯ್ಯ
ನೀಲ ಮೇಘಶ್ಯಾಮ ನಿನ್ನಾಳೆಂಬರಿಗೆ
ಕೂಳು ಹುಟ್ಟದೆ ಹೋಯಿತೋ ಹೇ ದೇವಾ 4
ಅರಿಷಡ್ವರ್ಗದಲಿ ಸಿಲುಕಿ ಸುe್ಞÁನದ
ಅರಿವು ಇಲ್ಲದೆ ಹೋಯಿತು
ಕರಣಾಳು ಶ್ರೀ ಪುರಂದರವಿಠಲನೆ ನಿನ್ನ
ಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5


ಕೆಂಡಕ್ಕೆ ಗೊರಲಿ ಮುತ್ತುವುದುಂಟೆ


ಕೆಂಡಕ್ಕೆ ಗೊರಲಿ ಮುತ್ತುವುದುಂಟೆ
ಪಾಂಡುರಂಗನ ದಾಸರಿಗೆ ಭಯವುಂಟೆ ? ಪ.
ಆನೆ ಸಿಂಹನ ಕೂಡ ಅಣಕವಾಡುವುದುಂಟೆ
ಶ್ವಾನಗೆ ಹುಲಿಯೊಳು ಸರಸವುಂಟೆ ?||
ಏನೆಂಬೆ ಎರಡಿಲ್ಲದಿರುಳು ಹಗಲು ನಿನ್ನ
ಧ್ಯಾನ ಮಾಡುವರಿಗೆ ನರಕವುಂಟೆ ? ಸ್ವಾಮಿ ?1
ಕತ್ತಲೆ ರವಿಯನು ಕವಿದು ಮುಚ್ಚುವುದುಂಟೆ
ಹತ್ತಿ ಸರ್ಪನ ಕಪ್ಪೆ ನುಂಗುವುದುಂಟೆ ? ||
ಅತ್ತಿತ್ತ ಮನವನು ಹರಿಬಿಡದಲಿ ಏಕ
ಚಿತ್ತದಿ ನೆನೆವಗೆ ನರಕವುಂಟೆ ಸ್ವಾಮಿ 2
ಆ ಮಾರುತನ ಗುದ್ದಿ ಹದ್ದು ನೋಯಿಸಲುಂಟೆ
ಹೇಮಗಿರಿಗೆ ವಜ್ರ ಸಿಡಿಯಲುಂಟೆ ?
ಸ್ವಾಮಿ ಶ್ರೀ ಪುರಂದರವಿಠಲರಾಯನೆ ನಿನ್ನ
ನಾಮಧಾರಿಗಳಿಗೆ ನರಕವುಂಟೆ ಸ್ವಾಮಿ ? 3


ಕೃಷ್ಣೇತಿ ಮಂಗಳಂ ದಿವ್ಯನಾಮ


ಕೃಷ್ಣೇತಿ ಮಂಗಳಂ ದಿವ್ಯನಾಮ ಪ
ಇಷ್ಟರಿಂದಲಿ ಭವಬಂಧನ
ನಷ್ಟವಾಗಿ ಹೋಹುದೋ ಅ.ಪ
ನಾರದಮುನಿ ತಾನು ನರಕ ಪಟ್ಟಣಕೆ ಹೋಗಿ
ವಾರೀಜನಾಭ ಎಂದು ಒದರಿದಾಗ ||
ಘೋರ ಪಾತಕವೆಲ್ಲ ದೂರವಾಗಿ ಹೋಯ್ತು
ಸೂರೆಯಾಯಿತು ಸ್ವರ್ಗಲೋಕವೆಲ್ಲ 1
ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆ
ನಿಜಪದವಿಯೈದಿದನು ನಿಮಿಷದಲಿ ||
ಭುಜಗಭೂಷಣನು ತಾ ಶ್ರೀರಾಮನಾಮವ
ನಿಜಕಾಂತೆಯನು ಕರೆದು ಉಪದೇಶವಿತ್ತ2
ಪಂಚಪಾಂಡವರನು ಪರಿಪಾಲಿಸಿತು ನಾಮ
ಪಾಂಚಾಲೀ ಮೊರೆ ಕೇಳಿ ಪೊರೆಯಿತು ನಾಮ ||
ವಂಚನೆ ಮಾಡಿ ಕೌರವರ ಮಡುಹಿ ನಿ -
ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ 3
ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿ
ಕರಿರಾಜ ಹರಿಯೆಂದು ಮೊರೆಯಿಡಲು ||
ತ್ವರಿತದಿಂದಲಿ ಬಂದು ಕರಿಯನುದ್ಧರಿಸುತ
ಕರಿರಾಜವರದನೆಂದೆನಿಸಿಕೊಂಡ ನಾಮ4
ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆ
ಅವನ ಮಲತಾಯಿ ಗರ್ಜಿಸಿದಳಾಗ ||
ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿ
ಸವಿಯಾದಚಲಪದವ ಪಡೆದನಾಗ 5
ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆ
ಗಿರಿಯ ಶಿಖರದಿಂದೀಡಾಡಲು ||
ನರಹರೆ ನರಹರೆ ರಕ್ಷಿಸೆಂದನ್ನಲು
ನರಸಿಂಹ ರೂಪದಿಂದವನ ಪಾಲಿಸಿದ6
ಕಂದನ ಅಪರಾಧವ ಕೇಳದೆ ನೃಪನು ತಾ
ನಂದತಿ ದಾರುಣ ಕಡಹದೋಳು ಕೆಡಹೆ ||
ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿ
ಬೆಂದು ಕಂದಿವ ಎಣ್ಣೆ ತಣ್ಣೀರಾಯಿತು 7
ಅಸುರ ಬಾಧೆಗೆ ಸಿಲುಕಿ ಅಶೋಕವನದಲಿ
ಶಶಿಮುಖಿ ಬೀಜಮಂತ್ರವ ಜಪಿಸೆ ||
ಅಸುರನ ಕೊಂದು ಅಶೋಕವನವ ಬಿಡಿಸಿ
ವಸುಧೀ ಸುತೆಯ ಸಲಹಿದ ರಾಮನಾಮ 8
ಪರಿಪರಿ ಭಕ್ತರನು ಪಾಲಿಸಿತು ಈ ನಾಮ
ಪರಮ ಮಂಗಲವು ಪಾವನವು ಈ ನಾಮ ||
ಸುರರು ಬ್ರಹ್ಮಾದಿಗಳು ಸ್ರೋತ್ರ ಮಾಡುವ ನಾಮ
ಧರೆಯೊಳು ಸಿರಿ ಪುರಂದರ ವಿಠಲ ನಾಮ9


ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ


ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ ಪ
ಮಸ್ತಕದಲಿ ಮಾಣಿಕದ ಕಿರೀಟ
ಕಸ್ತುರಿ ತಿಲಕವು ಹೊಳೆವ ಲಲಾಟ ||
ಹಸ್ತದಿ ಕೊಳಲನೂದುವ ನರೆ ನೋಟ
ಕೌಸ್ತುಭದೆಡ ಬಲದೊಳು ಲೋಲಾಟ1
ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿವನ ಮಾಲೆಯಿಟ್ಟ ಕೊರಳು
ಉಗುರಿಗೆ ಹೊನ್ನ ಮುದ್ರಿಕೆಯಿಟ್ಟ ಬೆರಳು
ಸೊಗಸಿನ ನಾಭಿಯು ತಾವರೆ ಅರಳು 2
ಉಡುದಾರ ಒಡ್ಯಾಣ ಸಕಲಾಭರಣ
ಬೆಡಗಿನ ಪೀತಾಂಬರ ರವಿಕಿರಣ ||
ಕಡಗ ಗಗ್ಗರ ಗೆಜ್ಜೆ ಇಕ್ಕಿದ ಚರಣ
ಒಡೆಯ ಪುರಂದರ ವಿಠಲನ ಕರುಣ3


Monday 30 March 2020

ಕೃಷ್ಣ ಮಂತ್ರವ ಜಪಿಸೊ - ಏ ಮನುಜ


ಕೃಷ್ಣ ಮಂತ್ರವ ಜಪಿಸೊ - ಏ ಮನುಜ |
ಕೃಷ್ಣ ಮಂತ್ರವ ಜಪಿಸೊ ಪ.
ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪ
ಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |
ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||
ಉಪದೇಶದಲಿ e್ಞÁನಕೊಟ್ಟು ಸಲಹುವ ಮಂತ್ರ |
ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1
ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |
ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||
ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |
ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2
ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |
ಜೀವಗಳಿಗೆಲ್ಲ ಸಂಜೀವ ಮಂತ್ರ ||
ಪಾವನ ಮಾಡಿ ಪಾಲಿಪುದೀ ಮಂತ್ರ |
ದೇವ ಪುರಂದರವಿಠಲ ಮಹಾ ಮಂತ್ರ 3


ಕೂಸು ಕಂಡೆವಮ್ಮ-ಅಮ್ಮ ನಿಮ್ಮ


ಕೂಸು ಕಂಡೆವಮ್ಮ-ಅಮ್ಮ ನಿಮ್ಮ-
ಕೂಸು ಕಂಡೆವಮ್ಮ ಪ
ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು |
ಶೇಷಗಿರಿಯ ಮೇಲೆ ವಾಸವಾಗಿಪ್ಪನೆ 1
ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು |
ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ2
ಗುಡ್ಡ ಬೆರಳಲ್ಲೆತ್ತಿ ದೊಡ್ಡಿ ಗೋಗಳ ಕಾಯ್ದ |
ಒಡ್ಡಿ ಜಗನ್ನಾಥ ಗಿಡ್ಡಾಗಿಪ್ಪನೆ 3
ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು |
ಹಡಗನೇರಿ ಬಂದು ಉಡುಪಿಯಲಿಪ್ಪನೆ4
ಮಂಗಳರೇಖೆ ಪದಂಗಳುಳ್ಳ ನಿಮ್ಮ |
ರಂಗ ಪುರಂದರವಿಠಲ ಶ್ರೀ ಕೃಷ್ಣ 5


ಕೂಡಿಕೊಂಡಾಡಲೊಲ್ಲರೊ-ರಂಗಯ್ಯ


ಕೂಡಿಕೊಂಡಾಡಲೊಲ್ಲರೊ-ರಂಗಯ್ಯ ನಿನ್ನ |
ಕೂಡಿಕೊಂಡಾಡಲೊಲ್ಲರೊ ಪ
ಕೇಡಿಗನಿವ ನಮ್ಮ ಕೆಲಸ ಕೆಡಿಪನೆಂದು ಅ.ಪ
ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನಿವ |
ಅನ್ನಿಗರ ಬಿಡುವನೆ? ಎಂದೆಲ್ಲರು ಮಾತಾಡಿಕೊಂಡು 1
ತರಳ ಪುಟ್ಟನೆಂದು ಕರೆದು ಸಲಹಿದರೆ |
ಬೆರಳನೆಣಿಸಿ ಕೊಂದ ಕೊಲೆಗಾರನೆಂದು ನಿನ್ನ 2
ಆವ ಕಾಯುತ ಹೋಗಿ ಹಾವಿನ ಮಡುವ ಧುಮುಕಿ |
ಠಾವವಿಲ್ಲ ಮಾಡಿದ ಕೇವಲ ಹೀನನೆಂದು 3
ಗೊಲ್ಲತಿಯರ ಮನೆ ಪೊಕ್ಕು ಪಾಲ್ಬೆಣ್ಣೆ ಮೊಸರುಗಳು |
ನಿಲ್ಲದೆ ತಿಂಬುವನಿವ ಕಳ್ಳ ಕೃಷ್ಣನೆಂದು 4
ಕರುಣಾಕರ ಸಿರಿ ಪುರಂದರವಿಠಲನೆ |
ಧರೆಯ ನರರು ನಿನ್ನ ಚರಿಯ ಪರಿಯ ಕಂಡು 5


ಕೂಗದೆ ಉಸುರಿಕ್ಕದೆ- ನೀವು


ಕೂಗದೆ ಉಸುರಿಕ್ಕದೆ- ನೀವು |
ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪ
ಹೆಜ್ಜೆಗಳಿವೆಕೋ ಮನೆಯಲಿ-ಕಾಲ |
ಗೆಜ್ಜೆಯ ದನಿ ಕೇಳಬರುತಲಿದೆ ||
ನಿರ್ಜರಪತಿ ತನ್ನ ಮನಸಿಗೆ ಬಂದಂತೆ |
ಮಜ್ಜಿಗೆ ಓಕುಳಿ ಆಡಿಹನಕ್ಕ 1
ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |
ಓರಗೆ ಮಕ್ಕಳುಗಳ ನಿಲ್ಲಿಸಿ ||
ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |
ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ 2
ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |
ಮೇಲಿನ ಕೆನೆಗಳು ಬಳಿದಿಹವೆ ||
ಬಾಲಚೋರ ಶ್ರೀ ಪುರಂದರವಿಠಲನು |
ಚಾಲುವರಿದರಿನ್ನು ಬಿಡಬಾರದಕ್ಕ 3


ಕುಳಿತೆಯ ಕೃಷ್ಣ ಕುಳ್ಳಿರ ಕಲಿತೆಯ


ಕುಳಿತೆಯ ಕೃಷ್ಣ ಕುಳ್ಳಿರ ಕಲಿತೆಯ |
ಕುಳಿತೆಯ ಎನ್ನೊಡೆಯ ಪ
ಇಳೆಯೊಳು ಭಕುತರ ಹೃದಯ ಕಮಲದೊಳು |
ಕುಳಿತೆಯ ಎನ್ನೊಡೆಯ ಅ.ಪ
ಜಲಚರರೂಪದಿ ನಿಗಮಗಳೆಣಿಸುತ ಕುಳಿತೆಯ ಎನ್ನೊಡೆಯ |
ಕುಲಗಿರಿಗಳನೆಲ್ಲ ನೆಗಹಿಕೂರ್ಮನಾಗಿ ಕುಳಿತೆಯ ಎನ್ನೊಡೆಯ ||
ಛಲದಿ ವರಾಹನಾಗಿ ಭೂಮಿದೇವಿಯ ತಂದುಕುಳಿತೆಯ ಎನ್ನೊಡೆಯ
ಖಳಹಿರಣ್ಯಾಖ್ಯನ ಕರುಳಬಗಿವೆನೆಂದುಕುಳಿತೆಯ ಎನ್ನೊಡೆಯ 1

ತೊಡೆ ವಟುವೇಷವ ಸುರರ ರಕ್ಷಿಪೆನೆಂದುಕುಳಿತೆಯ ಎನ್ನೊಡೆಯ |
ಪೊಡವಿಯ ಕ್ಷತ್ರಿಯ ವಂಶ ಸವರುವೆನೆಂದುಕುಳಿತೆಯ ಎನ್ನೊಡೆಯ ||
ಮಡದಿಯ ಒಯ್ದನ ಕೆಡಹಿ ಲಂಕೆಯಲಿಕುಳಿತೆಯ ಎನ್ನೊಡೆಯ |
ಕಡುಮೂರ್ಖ ಕೌರವನನ್ನು ಕೊಲುವೆನೆಂದುಕುಳಿತೆಯ ಎನ್ನೊಡೆಯ2
ತ್ರಿಪುರರ ಸತಿಯರ ವ್ರತವ ಕೆಡಿಪೆನೆಂದುಕುಳಿತೆಯ ಎನ್ನೊಡೆಯ |
ಉಪಸನಿಷದ್ವಾಹನ ತೇಜಿಯ ಬೆನ್ನಲಿಕುಳಿತೆಯ ಎನ್ನೊಡೆಯ |
ಕೃಪೆಯಿಂದಲಿ ಮನದೊಳು ನೆನೆವವರಲಿಕುಳಿತೆಯ ಎನ್ನೊಡೆಯ |
ಕಪಟನಾಟಕ ಸಿರಿ ಪುರಂದರವಿಠಲ ಕುಳಿತೆಯ ಎನ್ನೊಡೆಯ 3


ಕಾಳಿಯಮರ್ದನ ರಂಗಗೆ- ಹೇಳೆ


ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |
ಕೇಳಲೊಲ್ಲನು ಎನ್ನ ಮಾತನು ಪ
ದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |
ಬೆಟ್ಟಕೆ ಬೆನ್ನಾತು ನಿಂತನೆ ||
ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |
ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1
ಮೂರಡಿ ಭೂಮಿಯ ಬೇಡಿದನೆ-ನೃಪರ |
ಬೇರನಳಿಯೆ ಕೊಡಲಿ ಪಿಡಿದನೆ ||
ನಾರಮಡಿಯನುಟ್ಟು ಬಂದನೆ-ಅಹ |
ಚೋರತನದಿ ಪಾಲ್ಬೆಣ್ಣೆಯ ತಿಂದನೆ 2
ಬತ್ತಲೆ ನಾರಿಯರನಪ್ಪಿದ-ಹೋಗಿ ||
ಉತ್ತಮಾಶ್ವವನು ಹತ್ತಿದ ||
ಹತ್ತವತಾರವ ತಾಳಿದ-ನಮ್ಮ |
ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3


ಕಾಳಬೆಳದಿಂಗಳು - ಈ ಸಂಸಾರ -


ಕಾಳಬೆಳದಿಂಗಳು - ಈ ಸಂಸಾರ -
ಕತ್ತಲೆ ಬೆಳುದಿಂಗಳು ಪ.
ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |
ವ್ಯರ್ಥ ಭಂಢಾರವೆಲ್ಲವನು ಸೋತು ||
ಬತ್ತಲೆ ಪೋಗಿ ವಿರಾಟನ ಮನೆಯೊಳು |
ತೊತ್ತಾದಳು ದ್ರೌಪದಿ ಒಂದು ವರುಷ 1
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |
ಬೆಂಬತ್ತಿ ತಿರುಗುತಲಿಪ್ಪರು ||
ಎಂಬಾತಗೆ ನೋಡಿ ಬಡತನ ಬಂದರೆ |
ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2
ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |
ಬಂಟರಂತೆ ಬಾಗಿಲ ಕಾಯ್ವರು |
ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |
ಹೆಂಟೆಯಾಗಿ ತಿರುಗುತಿಪ್ಪರಯ್ಯ 3
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |
ಕೊಂಡು ಸಾರಥಿಯಾದ ಫಲ್ಗುಣನ ||
ಮಂಡಲವಾಳವ ಹರಿಶ್ಚಂದ್ರರಾಯನು ||
ಕೊಂಡು ಕಾಯ್ದ ಚಂಡಾಲನ ಮನೆಯ 4
ನೊಂದಿತು ಕಾಯವು ಬೆಂದಿತು ಒಡಲು |
ಬೆಂದ ಒಡಲಿಗಾಗಿ ಹಾಸ್ಯಮಾಡಿ ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |
ತೊಂಡನಾಗಿ ನೀ ಸುಖವಾಗಿ ಬಾಳು * 5



ಕಾಯಲಾರೆನು ಕೃಷ್ಣಕಂಡವರ ಬಾಗಿಲನು


ಕಾಯಲಾರೆನು ಕೃಷ್ಣಕಂಡವರ ಬಾಗಿಲನು |
ನಾಯಿ ಕುನ್ನಿಗಳಂತೆ ಪರರ ಪೀಡಿಸುತೆ ಪ
ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು |
ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ ||
ಮುದದಿ ನಿನ್ನರ್ಚಿಸದೆ ನರರ ಸದವನ ಪೊಕ್ಕು |
ಒದಗಿ ಸೇವೆಯ ಮಾಡಿ ಅವರ ಬಾಗಿಲನು1
ಕಲ್ಲಕರಗಿಸಬಹುದು ಹುರಿಗಡಲೆಯನು ಅರೆದು |
ತೈಲವನು ತೆಗೆದಾದರುಣಲು ಬಹುದು ||
ಬಲ್ಲಿದವರಾ ಮನಸು ಮೆಚ್ಚಿಸಲರಿಯೆನೈ |
ಹಲ್ಲು ಕಿರಿಯುತಲಿ ಹಂಬಲಿಸಿ ಬಾಯ್ಬಿಡುತ2
ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ |
ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ |
ಅಂತ್ಯವ ನಾ ಕಾಣೆ ಆದರಿಸುವರಿಲ್ಲ |
ಚಿಂತೆಯ ಬಿಡಿಸಯ್ಯ ಪುರಂದರ ವಿಠಲ3


ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |


ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |
ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|
ನಾಗಸಂಪಿಗೆ ಅರಳಲು ಪ
ಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |
ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||
ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |
ನಿದ್ದೆ ತಿಳಿದೇಳಯ್ಯ ಕೃಷ್ಣ 1
ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |
ಹೊಸದಾದ ಹಸುವಿನೀ ತುಪ್ಪವನ್ನು ||
ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |
ಹಸುಳೆ ನಿನಗಾರೋಗಣೆಗೆ ಮಾಡುವೆ 2
ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |
ಕಂದರೊಳಗತಿ ನೀನು ಹಟಿಯಾದೆಯ ||
ಇಂದು ನೀನತ್ತರೇ ಎತ್ತಿಕೊಳ್ಳುವರಿಲ್ಲ |
ಕಂದ ಅಳಬೇಡವೊ ಪುರಂದರವಿಠಲ 3


ಕಳವು ಕಲಿಸಿದೆಯಮ್ಮ ಗೋಪಿ


ಕಳವು ಕಲಿಸಿದೆಯಮ್ಮ ಗೋಪಿ ಕಮಲನಾಭಗೆ | ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವ ಹಚ್ಚಿ ಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1
ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2
ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3


ಕಷ್ಟವಾವುದು ಸುಖವದಾವುದಯ್ಯ



ಕಷ್ಟವಾವುದು ಸುಖವದಾವುದಯ್ಯ ಪ.

ಹೊನ್ನಳ್ಳವಗೆ ಬಂದ ದಾರಿದ್ರ್ಯ ಬಲು ಕಷ್ಟ

ಅನ್ಯರ ಮನೆಯ ಸೇರುವುದು ಬಹುಕಷ್ಟ

ಅನ್ಯಾಯವಿರದೆ ಅಪಕೀರ್ತಿ ಹೊರುವುದು ಕಷ್ಟ

ಗನ್ನಘಾತಕವ ಮಾಡುವುದು ಕಷ್ಟವಯ್ಯ 1

ಉದ್ಯೋಗದಲಿ ಒಳ್ಳೆ ಲಾಭವಾದರೆ ಸುಖವು

ಬಧ್ಧನುಡಿ ನುಡಿಯುವುದು ಬಹಳ ಸುಖವು

ಗುದ್ದಾಟವಿರದಣ್ಣ - ತಮ್ಮರಿದ್ದರೆ ಸುಖವು

ಬುದ್ಧಿವಂತನಾಗಿ ಬಾಳುವುದು ಸುಖವಯ್ಯ 2

ಮತ್ಸರವಿರದ ಸೊಸೆಯು ಮನೆಗೆ ಬಂದರೆ ಸುಖವು

ಪುತ್ರ ತಾ ಬುದ್ಧಿವಂತನಾದರೆ ಸುಖವು

ಹಸ್ತವನು ಎತ್ತಿ ದಾನವನು ಕೊಡುವುದು ಸುಖವು

ವಸ್ತ್ರವನು ಮಾಸದುಡುವುದು ಬಹಳ ಸುಖವಯ್ಯಾ 3

ಭೂತಳದಿ ಸಮ್ಮತನು ಆಗಿ ಬಾಳ್ವದು ಸುಖವು

ಭೂತೇಶನಾ ಪ್ರೀತಿ ಬಹಳ ಸುಖವು

ನೀತಿ ನಡೆಯನು ನಡೆವುದೇ ಸುಖವು ಹಿರಿಯರ

ಮಾತುಗಳ ನಡೆಸುವುದು ಬಹಳ ಸುಖವಯ್ಯ 4

ಆಧಾರವಿಲ್ಲದಲೆ ಸಾಲ ಕೊಡುವುದು ಕಷ್ಟ

ಮಾದ ಹುಣ್ಣದು ಮತ್ತೆ ಹುಟ್ಟಿದರೆ ಕಷ್ಟ

ಹಾದಿಯನು ಬರಿಗಾಲಿನಿಂದ ನಡೆಯುವುದು ಕಷ್ಟ

ಆದಿ ಮೂರುತಿ ಪುರಂದರವಿಠಲರಾಯ 5


ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ


ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ
ಭ್ರಷ್ಟಮಾನವ ಹಣೆಯ ಬರಹವನ್ನದೆ ಇಲ್ಲ ಪ
ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ
ಪರಿಪರಿಯಲಿ ವಿದ್ಯ ಕಲಿತರಿಲ್ಲ
ನರಿಯ ಬುಧ್ಧಿಯಲಿ ನಡೆದುಕೊಂಡರು ಇಲ್ಲ
ಅರಿಯದೆ ಹಲವ ಹಂಬಲಿಸಿದರಿಲ್ಲ 1
ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ
ಕಂಡಕಂಡವರಿಗೆ ಕೈ ಮುಗಿದರಿಲ್ಲ
ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ
ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ 2
ಕಟ್ಟಾಳು ಕಂಡು ಜಾಣನಾಗಿ ಪುಟ್ಟಿದರಿಲ್ಲ
ಬೆಟ್ಟಗಳನು ಕಿತ್ತಟ್ಟರಿಲ್ಲ
ಸೃಷ್ಟಿಯೊಳು ಪುರಂದರವಿಠಲರಾಯ
ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ* 3


ಕಲ್ಯಾಣಂ ತುಳಸೀ ಕಲ್ಯಾಣಂ


ಕಲ್ಯಾಣಂ ತುಳಸೀ ಕಲ್ಯಾಣಂ ಪ
ಕಲ್ಯಾಣವು ನಮ್ಮ ಕೃಷ್ಣ ಶ್ರೀ ತುಳಸಿಗೆ |
ಬಲ್ಲಿದ ಶ್ರೀವಾಸುದೇವನಿಗೆ ಅ.ಪ
ಅಂಗಳದೊಳಗೆಲ್ಲ ತುಳಸೀವನವ ಮಾಡಿ |
ಶೃಂಗಾರವ ಮಾಡೆ ಶೀಘ್ರದಿಂದ ||
ಕಂಗಳ ಪಾಪವ ಪರಿಹರಿಸುವ ಮುದ್ದು |
ರಂಗಬಂದಲ್ಲಿ ನೆಲಸಿಹನು 1
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು |
ತಂದ ಶ್ರೀಗಂಧಾಕ್ಷತೆಗಳಿಂದ ||
ಸಿಂಧುಶಯನನ ವೃಂದಾವನದಲಿ ಪೂಜಿಸೆ |
ಕುಂದದ ಭಾಗ್ಯ ಕೊಡುತಿಹಳು 2
ಉತ್ಥಾನ ದ್ವಾದಶಿ ದಿವಸದಲ್ಲಿ ಕೃಷ್ಣ-|
ಉತ್ತಮ ತುಲಸಿಗೆ ವಿವಾಹವ ||
ಚಿತ್ತ ನಿರ್ಮಲರಾಗಿ ಮಾಡಿದವರಿಗೆ |
ಉತ್ತಮ ಗತಿ¬ೂವ ಪುರಂದರವಿಠಲ 3


ಕಲಿಯುಗದ ಮಹಿಮೆಯನು


ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.
ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |
ಗುರುಹಿರಿಯರೊಳು ದೋಷವೆಣಿಸುತಿಹರು |
ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |
ತರುಣಿಯರ ನುಡಿಗಳನು ಲಾಲಿಸುತ್ತಿಹರು 1
ಕಂಡುದನೆ ಹೇಳರು ಕಾಣದನೆ ಹೇಳುವರು |
ಉಂಡ ಮನೆಗೆರಡನ್ನೆ ಎಣಿಸುತಿಹರು ||
ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |
ದಂಡಿಸುವರಿಂಗೆ ಧನಗಳನು ಕೊಡುತಿಹರು 2
ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |
ಒಳ್ಳೆಯವರೊಡನೆ ವಂಚನೆ ಮಾಳ್ಪರು ||
ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |
ಬಲ್ಲಿದವರಿಗೆ ಬಾಯ ಸವಿಯನುಣಿಸುವರು 3
ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |
ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||
ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |
ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು 4
ಮಾಡಿದುಪಕಾರವನು ಮರೆತುಕಳೆವರು ಮತ್ತೆ |
ಕೂಡಾಡಿ ಬೇಡುವರು ಕುಟಿಲತ್ವದಿಂದ ||
ರೂಢಿಗೊಡೆಯನು ನಮ್ಮ ಪುರಂದರವಿಠಲನ |
ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ 5


ಕರ್ಮಬಂಧನ ಛೇದನ -


ಕರ್ಮಬಂಧನ ಛೇದನ - ಶ್ರೀ - |
ರಾಮನ ನಾಮವ ನೆನೆ ಮನವೆ ಪ.
ಅರ್ಚಿಸಲರಿಯೆನು ಪೂಜಿಸಲರಿಯೆನು |
ಮೆಚ್ಚಿಸಲರಿಯೆನೆಂದೆನ ಬೇಡ ||
ಅಚ್ಯುತಾನಂತ ಗೋವಿಂದನ ನಾಮವ |
ಇಚ್ಛೆ ಬಂದಾಗಲೆ ನೆನೆ ಮನವೆ 1
ಸ್ನಾನವನರಿಯೆನು ಧ್ಯಾನವನರಿಯೆನು |
ಏನನು ಅರಿಯೆನೆಂದೆನಬೇಡ ||
ಜಾನಕಿರಮಣನ ದಶರಥನಂದನ |
ದಾನವನಾಶನ ನೆನೆ ಮನವೆ 2
ಮಂತ್ರವನರಿಯೆನು ತಂತ್ರವನರಿಯೆನು |
ಎಂತು ಅರಿಯೆನೆಂದೆನಬೇಡ ||
ಸಂತತಾನಂತ ಗೋವಿಂದನ ನಾಮವ |
ಅಂತರಂಗದೊಳು ನೆನೆ ಮನವೆ 3
ಜಪವ ನಾನರಿಯೆನು ತಪವ ನಾನರಿಯೆನು |
ಉಪವಾಸವರಿಯೆನೆಂದೆನಬೇಡ ||
ಅಪರಿಮಿತ ಗುಣಗಳ ಅನಂತಮಹಿಮನ |
ಕೃಪೆಯ ಸಮುದ್ರನ ನೆನೆ ಮನವೆ 4
ಕಲಿಯುಗದೊಳು ಹರಿನಾಮವ ನೆನೆದರೆ |
ಕುಲಕೋಟಿಗಳುದ್ಧರಿಸುವುವು ||
ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |
ಜಲರುಹನಾಭನ ನೆನೆ ಮನವೆ 5
ತಾಪತ್ರಯಗಳ ತಪ್ಪಿಸಿ ಸುಜನರ |
ಪಾಪಗಳೆಲ್ಲವ ಪರಿಹರಿಸುವುದು ||
ಶ್ರೀಪತಿ ಸದಮಲಧ್ಯಾನಗೋಚರನ |
ಗೋಪೀನಾಥನ ನೆನೆ ಮನವೆ 6
ವರದ ವೀರನಾರಾಯಣ ಸ್ವಾಮಿಯು |
ಪರಮಪಾವನನು ಹಿತನಾಗಿ ||
ಹರಿಯದ ಇಹಪರ ಕೊಡುವ ಸುಖಂಗಳ |
ಪುರಂದರವಿಠಲನ ನೆನೆ ಮನವೆ 7


ಕರುಣಿಸೋ ರಂಗಾ ಕರುಣಿಸೋ


ಕರುಣಿಸೋ ರಂಗಾ ಕರುಣಿಸೋ ಪ
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪ
ರುಕುಮಾಂಗದನಂತೆ ವ್ರತವನಾನರಿಯೆನು
ಶುಕಮುನಿಯಂತೆ ಸ್ತುತಿಸಲರಿಯೆ ||
ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇ
ವಕಿಯಂತೆ ಮುದ್ದಿಸಲರಿಯೆನು ರಂಗಾ 1

ಗರುಡನಂತೆ ಪೊತ್ತು ತಿರುಗಲರಿಯೆ ನಾನು
ಕರಿರಾಜನಂತೆ ಕರೆಯಲರಿಯೆ ||
ಮರಕಪಿಯಂತೆ ಸೇವೆಯ ಮಾಡಲರಿಯೆನು
ಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2
ಬಲಿಯಂತೆ ದಾನವ ಕೊಡಲರಿಯೆನು ಭಕ್ತಿ
ಛಲವನರಿಯೆ ಪ್ರಹ್ಲಾದನಂತೆ ||
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರದೇವ ಪುರಂದರ ವಿಠಲ 3


ಕರುಣಿಸಿ ಕೇಳು ಕಂದನ ಮಾತನು


ಕರುಣಿಸಿ ಕೇಳು ಕಂದನ ಮಾತನು
ಗರುಡ ವಾಹನ ಗಂಗಾಜನಕ ಶ್ರೀಹರಿಯೇ ಪ
ಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲ
ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||
ತತ್ತರ ಪಡುತಿಹೆ ತಾವರೆಲೆಯ ನೀರಂತೆ
ಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1
ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲ
ಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||
ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲ
ಬಿಂದು ಮಾತ್ರದ ಸುಖ ಕಾಣಿ ನಾ ಹರಿಯೇ2
ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀ ಹರಿ
ಅಲ್ಲ ತಿಂದಿಲಿಯಂತೆ ಬಳಲುವೆನೊ ||
ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನ
ಸಲ್ಲದ ನಾಣ್ಯವ ಮಾಡುವರೆ ಹರಿಯೇ 3
ನಖ ಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆ
ಸುಖವೆಂಬುದನು ಕಾಣೆ ಸ್ವಪ್ನದಲು
ಮುಖವರಿಯದ ರಾಜ್ಯಕ್ಕೆನ್ನನು ಎಳತಂದು
ಕಕಮಕ ಮಾಡುವುದುಚಿತವೆ ಹರಿಯೇ 4
ಇಷ್ಟುದಿವಸ ನಿನ್ನನೆನೆಯದ ಕಾರಣ
ಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||
ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯ
ವಿಟ್ಟು ಸಲಹೊ ಶ್ರೀ ಪುರಂದರ ವಿಠಲ 5


ಕರುಣಾಕರ ನೀನೆಂಬುವುದೆತಕೊ


ಕರುಣಾಕರ ನೀನೆಂಬುವುದೆತಕೊ |
ಭರವಸೆ ಇಲ್ಲೆನಗೆ ಪ
ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |
ಪೊರೆದವ ಭವದಲಿ ನೀನಂತೆ ||
ಅರಿತು ವಿಚಾರಿಸಿ ನೋಡಲಿದೆಲ್ಲವು |
ಪರಿಪರಿ ಕಂತೆಗಳಂತಿದೆ ಕೃಷ್ಣ 1
ಕರುಣಾಕರ ನೀನಾದರೆ ಈಗಲೆ |
ಕರಪಿಡಿದೆನ್ನನು ನೀ ಕಾಯೊ ||
ಸರಸಿಜಾಕ್ಷನೇ ಅರಸು ನೀನಾದರೆ |
ದುರಿತಗಳೆನ್ನನು ಪೀಡಿಪುದುಂಟೆ 2
ಮರಣ ಕಾಲದಲಿ ಅಜಮಿಳಗೊಲಿದೆಯೊ |
ಗರುಡಧ್ವಜನೆಂಬ ಬಿರುದಿನಿಂದ ||
ವರ ಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 5


ಕರವ ಮುಗಿದ-ಮುಖ್ಯಪ್ರಾಣ-ಕರವ


ಕರವ ಮುಗಿದ-ಮುಖ್ಯಪ್ರಾಣ-ಕರವ ಮುಗಿದ ಪ
ಕರವ ಮುಗಿದ ಶ್ರೀಹರಿಗೆ ತಾನೆದುರಾಗಿ
ದುರುಳರ ಸದೆದು ನೀ ಶರಣರ ಪೊರೆಯೆಂದು ಅ.ಪ
ಜೀವೇಶ್ವರೈಕ್ಯವು ಜಗತು ಮಿಥ್ಯವೆಂದು
ಈ ವಿಧ ಪೇಳುವ ಮಾಯಿಗಳನಳಿಯೆಂದು 1
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇಯೆಂಬ
ಕ್ಷುಲಕರನು ಪಿಡಿದು ಹಲ್ಗಳ ಮುರಿಯೆಂದು 2
ತಾರತಮ್ಯ ಪಂಚಭೇದ ಸತ್ಯವೆಂದು
ಮಾರುತ ಮತ ಪೊಂದಿದವರನು ಪೊರೆಯೆಂದು 3
ಪರಿಪರಿ ಭಕ್ತರು ಹೃದಯ ಕಮಲದೊಳು
ನಿರುತ ಮಾಡುವ ಪೂಜೆ ನಿನಗರ್ಪಿತವೆಂದು 4
ಹರಿಯ ಮನೋಗತವರಿತು ಮಾಡುವೆನೆಂದು
ಪುರಂದರ ವಿಠಲನ ಚರಣದ ಬಳಿಯಲ್ಲಿ 5


ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ


ಕದವನಿಕ್ಕಿದಳಿದೆಕೊ ಗಯ್ಯಾಳಿ ಮೂಳಿ ಪ.

ಕದವನಿಕ್ಕಿದಳಿದಕೊ ಚಿಲಕವಲ್ಲಾಡುತಿದೆ |
ಒದಗಿದ ಪಾಪವು ಹೊರಗೆ ಹೋದೀತೆಂದು ಅ.ಪ
ಭಾರತ - ರಾಮಾಯಣ ಪಂಚರಾತ್ರಾಗಮ |
ಸಾರತತ್ವದ ಬಿಂದು ಕಿವಿಗೆ ಬಿದ್ದೀತೆಂದು 1
ಹರಿಯ ಪಾದಾಂಬುಜಯುಗಳವ ನೆನೆವ ಭ - |
ಕ್ತರ ಪಾದದರಜ ಒಳಗೆ ಬಿದ್ದೀತೆಂದು 2
ಮಂಗಳ ಮೂರುತಿ ಪುರಂದರವಿಠಲನ |
ತುಂಗವಿಕ್ರಮಪಾದ ಅಂಗಳ ಪೊಕ್ಕೀತೆಂದು 3


ಕಣ್ಣೆತ್ತಿ ನೋಡಲುಬೇಡ


ಕಣ್ಣೆತ್ತಿ ನೋಡಲುಬೇಡ - ಅವಳ
ಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.
ಕಣ್ಣಿಟ್ಟ ಕೀಚಕ ಕೆಟ್ಟ - ಪರ
ಹೆಣ್ಣಿಗಾಗಿ ರಾವಣ ತಲೆಕೊಟ್ಟ
ಏನು ಮಾಡಿದಳಣ್ಣ ನಷ್ಟ - ಪರ
ಹೆಣ್ಣನು ಮೋಹಿಸಿದವ ಬಲು ಭ್ರಷ್ಠ 1
ದೂರದಲ್ಲಿಯ ಸುಖದಣ್ಣ - ಅವಳ
ಚಾರು ಕಂಚುಕದೊಳಗಿನ ಕುಚವಣ್ಣ
ಸೀರೆಯ ಬಿಗಿದುಟ್ಟ ಹೆಣ್ಣ - ಅವಳ
ಓರೆನೋಟ ನೋಡಿ ಹಾರಬೇಡಣ್ಣ 2
ಹಸಿವು ಇಲ್ಲರ ಸವಿಯೂಟ - ತನ್ನ
ವಶಕೆ ಬಾರದ ಪರಹಸ್ವಿನ ಕೂಟ
ದೆಸೆದೆಸೆಗಪಕೀರ್ತಿಯಾಟ - ನಮ್ಮ
ವಸುಧೀಶ ಪುರಂದರವಿಠಲನೊಳ್ನೋಟ 3


ಕಣ್ಣಿನೊಳಗೆ ನೋಡೊ ಹರಿಯ -


ಕಣ್ಣಿನೊಳಗೆ ನೋಡೊ ಹರಿಯ - ಒಳ -
ಗಣ್ಣಿನಿಂದಲಿ ನೋಡೊ ಮೂಜಗದೊಡೆಯ ಪ.
ಆಧಾರ ಮೊದಲಾದ ಆರು - ಚಕ್ರ
ಶೋಧಿಸಿ ಸುಡಬೇಕು ಈ ಕ್ಷಣ ಮೂರು ||
ಸಾಧಿಸಿ ಸುಷಮ್ನ ಏರು ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು 1
ಎವೆಹಾಕದೆ ಮೇಲೆ ನೋಡು - ಮುಂದೆ
ತವಕದಿಂದಲಿ ವಾಯು ಬಂಧನ ಮಾಡು ||
ಸವಿದು ನಾದವ ಪಾನ ಮಾಡು - ಅಲ್ಲಿ
ನವವಿಧ ಭಕ್ತಿಯಲಿ ನಲಿನಲಿದಾಡು 2
ಅಂಡದೊಳಗೆ ಆಡುತಾನೆ - ಭಾನು -
ಮಂಡಲ ನಾರಾಯಣನೆಂಬುವನೆ ||
ಕುಂಡಲಿ ತುದಿಯೊಳಿದ್ದಾನೆ - ಶ್ರೀ ಪು -
ರಂದರ ವಿಠಲನು ಪಾಲಿಸುತಾನೆ 3


ಕಣ್ಣಾರೆ ಕಂಡೆನಚ್ಯುತನ-ಕಂಚಿ


ಕಣ್ಣಾರೆ ಕಂಡೆನಚ್ಯುತನ-ಕಂಚಿ
ಪುಣ್ಯ ಕೋಟಿ ಕರಿರಾಜವರದನ ಪ
ವರಮಣಿ ಮುಕುಟಮಸ್ತಕನ ಸುರ-
ವರ ಸನಕಾದಿ ವಂದಿತ ಪಾದಯುಗನ ||
ತರುಣಿ ಲಕ್ಷ್ಮೀ ಮನೋಹರನ-ಪೀತಾಂ
ಬರದುಡಿಗೆಯಲಿ ರಂಜಿಸುವ ವಿಗ್ರಹನ 1
ಕಸ್ತೂರಿ ಪೆರೆನೊಸಲವನ ತೋರ
ಮುತ್ತಿನ ಹಾರ ಪದಕವ ಧರಿಸಿದನ ||
ಎತ್ತಿದಭಯ ಹಸ್ತದವನ ತನ್ನ
ಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ 2
ನೀಲ ಮೇಘ ಶ್ಯಾಮಲನ ದೇವ
ಲೋಲ ಮಕರ ಕುಂಡಲ ಧರಿಸಿಹನ ||
ಮೂಲೋಕದೊಳಗೆ ಚೆನ್ನಿಗನ ಕಮ
ಲಾಲಯಾಪತಿ ವೈಕುಂಠವಲ್ಲಭನ 3
ಭಾನುಕೋಟಿ ತೇಜದವನ ಭವ
ಕಾನನ ರಾಶಿಗೆ ಹವ್ಯ ವಾಹನನ ||
ದಾನವರೆದೆಯ ತಲ್ಲಣನ ಮುನಿ
ಮಾನಸೆ ಹಂಸನೆಂದೆನಿಸಿ ಮೆರೆವನ 4
ತುಂಗ ಚತುರ್ಭುಜದವನ ಶುಭ
ಮಂಗಳ ರೇಖೆ ಅಂಗಾಲಲೊಪ್ಪುವನ ||
ಶೃಂಗಾರ ಹಾರ ಕಂಧರನ ದೇವ
ಗಂಗೆಯ ಪಿತ ಪುರಂದರ ವಿಠಲನ 5


ಕಣ್ಣ ಮುಂದಿರೊ-ರಂಗ-ಕಣ್ಣ ಮುಂದಿರೊ


ಕಣ್ಣ ಮುಂದಿರೊ-ರಂಗ-ಕಣ್ಣ ಮುಂದಿರೊ ಪ
ಪೂತನಿಯ ಮೊಲೆಯನುಂಡು |
ವಾತಶಕಟಾದಿ ದೈತ್ಯರ ||
ಫಾತಿಸಿದ ರಂಗ ನಿನ್ನ |
ಪೋತತನಕಂಜುವೆನು 1
ಕಡಹದ ಮರವನೇರಿ |
ಮಡುವ ಧುಮುಕಿ ನೋಡಿ ||
ಹೆಡೆಯ ತುಳಿದ ನಿನ್ನ |
ದುಡುಕಿಗಂಜುವೆನು 2
ಬಾಲೆಯರ ಮನೆಗೆ ಪೋಗಿ |
ಹಾಲು-ಮೊಸರು ಕದ್ದು ||
|ಲೀಲೆ ಮಾಡದಿರಯ್ಯ |
ಲೋಲ ಪುರಂದರವಿಠಲ 3


ಕಡುಕೃಪೆಯಿಂದ ಹರಿ ಒಲದರೆ ಸತ್ಯದ


ಕಡುಕೃಪೆಯಿಂದ ಹರಿ ಒಲದರೆ ಸತ್ಯದ
ನಡೆವಳಿ ಮೌನವೆ ಸಾಕ್ಷಿ
ದೃಡ ಭಕ್ತರಿಗುಣಬಡಿಸಿದಂಥವರಿಗೆ
ಷಡುರ ಸ್ನಾನವೇ ಸಾಕ್ಷಿ ಪ
ಅನ್ನದಾನ ಮಾಡಿದ ಮನುಜಗೆ - ದಿ
ವ್ಯಾನ್ನವುಂಬುವುದೇ ಸಾಕ್ಷಿ
ಅನ್ನದಾನ ಮಾಡದ ಮನುಜಗೆ - ಸರ
ರನ್ನಕೆ ಬಾಯ್ಬಿಡುವುದೆ ಸಾಕ್ಷಿ 1
ಕನ್ಯಾದಾನ ಮಾಡದ ಮನುಜಗೆ ಚೆಲ್ವ
ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನ ಮಾಡದ ಮನುಜಗೆ - ಪರ
ಹೆಣ್ಣಿನ ಹೋರಾಟವೇ ಸಾಕ್ಷಿ 2
ಪರರಿಗೊಂದು ತಾನೊಂದುಂಬುವರಿಗೆ
ಜ್ವರ - ಗುಲ್ಮ ರೋಗವೇ ಸಾಕ್ಷಿ
ಪರಿಪರಿ ವಿಧದಿಂದ ಹಿರಿಯರ ದೂರುವಗೆ
ತಿರಿದು ತಿಂಬುವುದೇ ಸಾಕ್ಷಿ 3
ಕಂಡ ಪುರುಷಗೆ ಕಣ್ಣಿಡುವ ಸತಿಯು - ತನ್ನ
ಗಂಡನ ಕಳೆಯುದೇ ಸಾಕ್ಷಿ
ಪುಂಡತನದಿ ಪರ ಹೆಂಗಳೆನುಳುಪುವಗೆ
ಹೆಂಡಿರು ಕಳೆವುದೇ ಸಾಕ್ಷಿ 4
ಕ್ಷೇತ್ರದಾನದ ಮಾಡಿದ ಮನುಜಗೆ - ಏಕ
ಛತ್ರದ ರಾಜ್ಯವೇ ಸಾಕ್ಷಿ
ಮುಕ್ತಿ ಪಡೆದು ತಿಳಿ ಪುರಂದರವಿಠಲನ
ಭಕ್ತನಾಗುವುದೇ ಸಾಕ್ಷಿ 5


ಕಂದ ಹಾಲ ಕುಡಿಯೊ-ನಮ್ಮ ಗೋ-|ವಿಂದ


ಕಂದ ಹಾಲ ಕುಡಿಯೊ-ನಮ್ಮ ಗೋ-|
ವಿಂದ ಹಾಲ ಕುಡಿಯೊ ಪ
ವೃಂದಾವನದೊಳು ಬಳಲಿ ಬಂದೆಯೊ ರಂಗ ಅ.ಪ
ಶೃಂಗಾರವಾದ ಗೋವಿಂದ-ಚೆಲುವ |
ಪೊಂಗೊಳಲೂದುವ ಚೆಂದ ||
ಅಂಗನೆಯರ ಒಲುಮೆಯಿಂದ-ನಮ್ಮ |
ಮಂಗಳಮೂರತಿಯ ಮೋರೆ ಬಾಡಿತಯ್ಯ 1
ಆಕಳೊಡನೆ ಹರಿದಾಡಿ-ನಮ್ಮ |
ಶ್ರೀಕಾಂತ ಗೆಳೆಯರ ಕೂಡಿ ||
ಲೋಕವ ಈರಡಿ ಮಾಡಿ-ನಮ್ಮ |
ಸಾಕುವ ಪಾದವು ಬಳಲಿದುವಯ್ಯ 2
ಸದಮಲ ಯೋಗಿಗಳೆಲ್ಲ-ನಿನ್ನ |
ಪದವ ಬಣ್ಣಿಸುತಿಪ್ಪರೆಲ್ಲ ||
ಯದುಕುಲ ಚೌಪಟ ಮಲ್ಲ-ಹಾಲ |
ಹದನು ವಿೂರಿತಯ್ಯ ಪುರಂದರವಿಠಲ 3


ಕಂಡೆ ತಿರುಪತಿ ವೆಂಕಟೇಶನ


ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥವನೀವ ದೇವನ ಕರುಣ
ನಿಧಿಯೆಂದೆನಿಸಿ ಮೆರೆವನ ಪ
ಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕ್ಕಚ್ಚರಿಯೆನಿಪ ನಗೆಮೊಗ
ನೊಸಲೊಳಗೆ ತಿರುಮಣಿಯ ಕಂಡೆನು
ಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನು
ಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1
ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವ
ಉಪ್ಪು ವೋಗರವನ್ನು ಮಾರಿಸಿ
ಉಚಿತದಿಂದಲಿ ಹಣವ ಗಳಿಸುವ ||
ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದ
ಕ್ರಯ ಮಾಡಿ ಕೊಡಿಸುವ
ಸರ್ಪಶಯನನ ಸಾರ್ವಭೌಮನ ಅಪ್ಪ
ವೆಂಕಟರಮಣನಂಘ್ರಿಯ 2
ಉರದಿ ಶ್ರೀದೇವಿ ಇರಲು ಕಂಡೆನು
ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರ ನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||
ತರತರದಿ ಭಕ್ತರಿಗೆ ವರಗಳ ಕರೆದು
ಕೊಡುವುದ ನಾನು ಕಂಡೆನು
ಶರಧಿಶಯನನ ಶೇಷಗಿರಿವರ ಸಿರಿ ಪುರಂದರ ವಿಠಲನಂಘ್ರಿಯ3