Labels

Showing posts with label tatva. Show all posts
Showing posts with label tatva. Show all posts

Wednesday, 20 May 2020

ನಂಬಬೇಡ ನಾರಿಯರನು nambabeda naariyaranu


ನಂಬಬೇಡ ನಾರಿಯರನು ಹಂಬಲಿಸಿ ಹಾರಯಿಸಬೇಡ
ಅಂಬುಜಾಕ್ಷಿಯರೊಲುಮೆ ಬಯಲು ಡಂಬಕವೆಂದು ತಿಳಿಯಿರೊ \\ಪ.\\
ನೋಟವೆಲ್ಲ ಪುಸಿಯು ಸತಿಯ ರಾಟವೆಲ್ಲ ಸಂಚು ಸನ್ನೆ ಕೂಟವೆಲ್ಲ ಗನ್ನ  ಘಾತುಕ
ನೋಟವೆಲ್ಲ ವಂಚನೆ ವಾತಬದ್ಧ ಹೆಂಗಳಲ್ಲಿ ಕೋಟಲೆಗೊಂಡು ತಿರುಗಬೇಡ
ಮಾಟಗಾತಿಯರೊಲುಮೆ ಬಯಲು ಬೂಟಕವೆಂದು ತಿಳಿಯಿರೊ \\1\\
ಸೋತನೆಂದು ವಿಟಗೆ ದೈನ್ಯ ಮಾತನಾಡಿ ಮರುಳಗೊಳಸಿ
ಕಾತರವ ಹುಟ್ಟಿಸಿ ಆವನ ಮಾತೆ ಪಿತರ ತೊಲಗಿಸಿ
ಪ್ರೀತಿ ಬಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಚಾತಿಕಾರ್ತಿ ಹೆಂಗಳೆಯರ \\2\\
ಧರೆಯ ಜನರ ಮೋಹಕೆಳಸಿ ಭರದಿ ನೆಟ್ಟು ಕೆಡಲುಬೇಡ
ಎರೆಳೆಂಗಳ ಹೆಂಗಳೊಲುಮೆ ಗುರುಳೆ ನೀರ ಮೇಲಿನ
ಮರೆಯಬೇಡ ಗುರುಮಂತ್ರವ ಸ್ಥಿರವಿಲ್ಲದ ಜನ್ಮದಲ್ಲಿ

ಕರುಣನಿಧಿ ಪುರಂದರವಿಠಲನ ಚರಣ ಸ್ಮರಣೆ ಮಾಡಿರೊ \\3\\

ಧಾನ್ಯ ದೊರಕಿತು ಎನಗೆ dhanya dorakito enage


ಧಾನ್ಯ ದೊರಕಿತು ಎನಗೆ ಧನವು ದೊರಕಿತು\\ ಪ\\
ಓಣಿಯೊಳಗೆ ಹೋದ ಮಾಣಿಕ್ಯದ ಹರಳು ದೊರಕಿತೋ \\ಅ.ಪ\\
ಕಟ್ಟಿ ಹಗೆಯ ಹಾಕುವುದಲ್ಲ ಒಟ್ಟಿ ಕೆಸರ ಬಡಿಯುವುದಲ್ಲ ||
ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ \\1\\
ಹರಿದು ಗೊಣಸು ಹಚ್ಚುವುದಲ್ಲ ಮುರಿದು ಸಣ್ಣಗೆ ಮಾಡುವುದಲ್ಲ ||
ಅರಿದು ಇದನು ಪೇಟೆಗೆ ಒಯ್ದರೆ ಕರೆದು ಬೆಲೆಯನು ಕಟ್ಟುವುದಲ್ಲ\\2\\
ಪಾಲು ಪಸುಗೆ ಹಂಚುವುದಲ್ಲ ಮೇಲೆ ಚಾರರು ಒಯ್ಯುವುದಲ್ಲ ||
ಶ್ರೀಲೋಲ ಪುರಂದರ ವಿಠಲನ ಮೂಲನಾಮ ದೊರಕಿತಲ್ಲ\\3\\


ಧರ್ಮವೇ ಜಯವೆಂಬ ದಿವ್ಯ ಮಂತ್ರ dharmave jayawemba divya mantra


ಧರ್ಮವೇ ಜಯವೆಂಬ ದಿವ್ಯ ಮಂತ್ರ ಮರ್ಮಗಳನೆತ್ತಿದರೆ ಒಳಿತಲಾ ಕೇಳಿ\\ ಪ.\\
ವಿಷವನುಣಿಸಿದಗೆ ಷಡುರಸವನುಣಿಸಲುಬೇಕು ದ್ವೇಷಮಾಡುವನ ಪೋಷಿಸಲು ಬೇಕು ||
ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |ಸು ಹೀರಿದನ ಹೆಸರ ಮಗನಿಗಿಡಬೇಕು \\1\\
ಹಿಂದೆ ನಿಂದಿಸುವರನು ವಂದಿಸುತಲಿರಬೇಕು ಬಂಧಿಸಿದವನ ಕೂಡ ಬೆರೆಯಬೇಕು ||
ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |ಕೊಂದವನ ಗೆಳತನವ ಮಾಡಬೇಕಯ್ಯ \\2\\
ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು ಕಂಡರಾಗದವರ ತಾ ಕರಿಯಬೇಕು ||

ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ ಖಂಡ ಮಹಿಮೆಯನರಿತು ನೆನೆಯಬೇಕಯ್ಯ\\3\\

ಧರ್ಮವೆಂಬ ಸಂಬಳವ dharmavemba sambalava


ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ |ಹೆಮ್ಮೆಯಿಂದ ಈ ಶರೀರ ನಂಬಬೇಡಿ ಕಾಣಿರೊ\\ಪ.\\

ಅಟ್ಟ ಅಡಿಗೆ ಉಣಲು ಕೊಡನು ಕೊಟ್ಟ ಸಾಲ ಕೇಳಗೊಡನು |
ಪೆಟ್ಟಿಗೆ ತುಂಬ ಹಣವು ಇದ್ದರೆ ಕೊಟ್ಟೆನೆಂದರೆ ಬಿಡನು ಯಮನು \\1\\
ಮಾಳಿಗೆ ಮನೆಯ ಇರಲು ಜಾಳಿಗೆ ತುಂಬ ಹೊನ್ನು ಇರಲು |
ಆಳುಮಂದಿ ಕುದುರೆ ಇದ್ದರೆ ಬೀಳುಗೊಡದೆ ಯಮನು ಬಿಡನು \\2\\
ವ್ಯರ್ಥವಾದ ಈ ಶರೀರ ಸತ್ಯವೆಂದು ನಂಬಬೇಡಿ |

ಕರ್ತು ಪುರಂದರವಿಠಲರಾಯನ ಭಕ್ತಿಯಿಂದ ನೆನೆಯಿರೊ \\3\\

ಧರ್ಮಕ್ಕೆ ಕೈಬಾರದೀ ಕಾಲ dharmakke kai baaradi kala


ಧರ್ಮಕ್ಕೆ ಕೈಬಾರದೀ ಕಾಲ  ಪಾಪ ಕರ್ಮಕ್ಕೆ ಮನ ಬಾಹುದೀ ಕಲಿಕಾಲ  \\ಪ.\\

ದಂಡದೋಷಕೆ ಉಂಟು ಪುಂಡುಪೋಕರಿಗುಂಟು | ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||
ಭಂಡೆಯರಿಗುಂಟು ದಿಂಡೆಯರಿಗುಂಟು  ಬೇಡಿ ಕೊಂಡಿವರಿಗಿಲ್ಲವು ಈ ಕಲಿಕಾಲ \\1\\
ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು | ಹೆತ್ತತಾಯಿಗಿಲ್ಲ ಈ ಕಲಿಕಾಲ ||
ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ ಉತ್ತಮರಿಗೆ ಇಲ್ಲವೀ ಕಲಿಕಾಲ \\2\\
ಹುಸಿದಿಟವಾಯಿತು ರಸ - ಕಸವಾಯಿತು ಮಸಿ ಮಾಣಿಕವಾಯಿತೀ ಕಾಲ ||

ವಸುಧೆಯೊಳಗೆ ನಮ್ಮ ಪುರಂದರವಿಠಲನ ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ\\ 3\\


ಧರ್ಮ ದೊರಕುವದೇ |dharma dorakuvade


ಧರ್ಮ ದೊರಕುವದೇ ದುಷ್ಕರ್ಮಿಸತ್ತಿಯೊಳು
ಪುರುಷಾಧಮನಿಗೆ ಧರ್ಮ ದೊರಕುವದೆ \\ಪ.\\
ಧನವಿದ್ದರೇನಯ್ಯ ಮನವಿಲ್ಲವು  ಮನವಿದ್ದರೇನಯ್ಯ ಧನವಿಲ್ಲವು |
ಧನವು ಮನವು ಯರಡುಂಡ್ಯಾದ ಮನುಜಗೆ ಅನುಕೂಲವಾದಂಥ ಸತಿಯಿಲ್ಲವಯ್ಯ \\1\\
ಧರ್ಮಯಾಗ ಮಾಡವ ಧರ್ಮ ನಾಳೆಯಾದೆನಬ್ಯಾಡನಾಳ್ಯಾರೊ
\ನಾವ್ಯಾರೊ ಯಲೊ ಮಾನವಾ 
 ಊಳಿಗದವ ಬಂದು ಬಾಬಾರೆಂದೆಳವಾಗ ಆಗ ಮಾಡುವೆನೆಂದರೆ
ದೊರಕುವುದೇ ಧರ್ಮ\\2\\
ಬಾಡಿಗೆ ಮನೆಯಂತೆಯೊ ದೇಹವ ನಚ್ಚಿ ಮಾಡುವೆ ಪರಿಪರಿಯಾಗವನು 
 ಈ ಬೀಡಬಿಟ್ಟು ಆ ಬೀಡ ಹೋದ ಮೇಲೆ ಆಗ ಮಾಡುವೆನೆಂದರೆ ದೊರಕುವದೆ \\3\\
ತನ್ನ ಕಣ್ಣ ಮುಂದೆ ಹೋಹ ಜೀವವ ಕಂಡು ಇನ್ನು ನಾಚಿಕೆಯಿಲ್ಲವೆ ತನಗೆ | 
ನನ್ನದು ನನ್ನದುಯೆಂಬ ಭ್ರಾಂತಿಯ ಬಿಟ್ಟು ಕುನ್ನಿ ದೇಹವನಚ್ಚಿ ಕೆಡಬ್ಯಾಡ ಮನುಜ\\4\\

ವಂದಾನೊಂದು ಪರಿಯಲ್ಲಿ ತೊಳಲಿ ಬಳಲಿ ಜೀವ ಮುಂದನ ಜನ್ಮಕೆ ಸಾಧನವು
ತಂದೆ ಶ್ರೀ ಪುರಂದರ ವಿಠಲರಾಯನನ ಸಂದೇಹವಿಲ್ಲದೆ ನೆನೆ ಕಂಡ್ಯಾ ಮನುಜ \\5\\

ಧನವಗಳಿಸಬೇಕಿಂತಹದು dhanavagalisa


ಧನವಗಳಿಸಬೇಕಿಂತಹದು ಈಜನರಿಗೆ ಕಾಣಿಸದಂತಹದು \\ಪ.\\
ಕೊಟ್ಟರೆ ತೀರದಂತಹದು ತನ್ನ ಬಿಟ್ಟು ಅಗಲಿ ಇರದಂತಹದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ ಮುಟ್ಟರು ಆರು ಅಂತಹದು \\1\\
ಕರ್ಮವ ನೋಡಿಸುವಂತಹದು ಧರ್ಮವ ಮಾಡಿಸುವಂತಹದು
ನಿರ್ಮಲವಾಗಿದೆ ಮನಸಿನೊಳಗೆ ನಿಜ ಧರ್ಮವ ತೋರಿಸುವಂತಹದು\\ 2\\
ಅಜ್ಞಾನವು ಬಾರದಂತಹದು - ನಿಜ ಸುಜ್ಞಾನವ ತೋರುವಂತಹದು

ವಿಜ್ಞಾನಮೂರ್ತಿ ಪುರಂದರವಿಠಲನ ಪ್ರಜ್ಞೆಯನ್ನು ಕೊಡುವಂತಹದು \\3\\

Tuesday, 7 April 2020

ಜಾಲಿಯ ಮರದಂತೆ ದುರ್ಜನರೆಲ್ಲ kaaliya maradante durjanerella


ಜಾಲಿಯ ಮರದಂತೆ  ದುರ್ಜನರೆಲ್ಲಜಾಲಿಯ ಮರದಂತೆ \\ಪ.\\
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲಹಸಿದು ಬಂದವರಿಗೆ ಹಣ್ಣಿಲ್ಲವೊ
ಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲವಿಷಮರ ದುಸ್ಸಂಗ ಪಡೆದರೇನುಂಟು\\1\\
ಊರ ಹಂದಿಗೆ ಅಲಂಕಾರವ ಮಾಡಲುನಾರುವ ದುರ್ಗಂಧ ಬಿಡಬಲ್ಲುದೆ
ಸಾರ ತತ್ತ್ವಜ್ಞಾನ ಪಾಪಿಗೆ ಹೇಳಲುಕ್ರೂರಬುದ್ಧಿಯ ಬಿಟ್ಟು ಸಜ್ಜನವಪ್ಪಗೆ ?\\2\\
ತನ್ನಿಂದ ಉಪಕಾರ ತೊಟಕಾದರೂ ಇಲ್ಲಬಿನ್ನಣ ಮಾತುಗಳು ಮೊದಲೆ ಇಲ್ಲ
ಪನ್ನಗಶಯನ ಪುರಂದರವಿಠಲನಲ್ಲದೆಅನ್ಯದೈವಂಗಳ ಭಜಿಸದೆ ನರರು \\3\\