Labels

Showing posts with label Muddu mohan vittala. Show all posts
Showing posts with label Muddu mohan vittala. Show all posts

Saturday, 4 January 2020

ಹರಿದಾಸರ ಸಂಗದಿಂದ haridasara sanghadinda

ಹರಿದಾಸರ ಸಂಗದಿಂದಹ

ಹರಿದಾಸರ ಸಂಗದಿಂದ
ಹರಿನಿನ್ನಸಂಗವಾಯಿತೋ ಎನಗೆ
ತಂದೆಮುದ್ದುಮೋಹನವಿಠಲಾ

Friday, 18 October 2019

ಶ್ರೀ ಗೋವಿಂದ ಭಜನಾವಳಿ shri govind bhajanavali

ಶ್ರೀ ಗೋವಿಂದ ಭಜನಾವಳಿ
ಶ್ರೀ ನಾರಾಯಣ ಜಯಗೋವಿಂದ
ಸದ್ಗುರು ಸಿಂಧೋ ಜಯಗೋವಿಂದ
ವೈಕುಂಠಾಲಯ ಜಯಗೋವಿಂದ
ಆಶ್ರಿತಬಂಥೋ ಜಯಗೋವಿಂದ
ಲಕ್ಷ್ಮೀನಾಯಕ ಜಯಗೋವಿಂದ
ದೋಷವಿದೂರ ಜಯಗೋವಿಂದ
ಬ್ರಹ್ಮೇಶಾರ್ಚಿತ ಜಯಗೋವಿಂದ
ಮತ್ಸ್ಯಶರೀರ ಜಯಗೋವಿಂದ
ಕಚ್ಛಪರೂಪೀ ಜಯಗೋವಿಂz
ಮ್ಲೇಂಛ ಕುಠಾರ ಜಯಗೋವಿಂದ
ಆದಿವರಾಹ ಜಯಗೋವಿಂದ
ಚಿನ್ಮಯ ದೇಹ ಜಯಗೋವಿಂದ
ಶ್ರೀ ನರಸಿಂಹ ಜಯಗೋವಿಂದ
ವೇದಸುವೇದ್ಯ ಜಯಗೋವಿಂದ
ವಾಮನರೂಪೀ ಜಯಗೋವಿಂದ
ವೆಂಕಟನಾಥ ಜಯಗೋವಿಂದ
ಭಾರ್ಗವರಾಮಾ ಜಯಗೋವಿಂದ
ವೃದ್ಧಿವಿನೋದ ಜಯಗೋವಿಂದ
ರಾವಣ ಶತ್ರು ಜಯಗೋವಿಂದ
ಸಪ್ತಗಿರೀಶ ಜಯಗೋವಿಂದ
ರಾಕ್ಷಸ ಶತ್ರು ಜಯಗೋವಿಂದ
ಅದ್ಭುತಚರ್ಯ ಜಯಗೋವಿಂದ
ಗೋಕುಲಚಂದ್ರ ಜಯಗೋವಿಂದ
ನಾರದಗೇಯಾ ಜಯಗೋವಿಂದ
ಸೀತೆಸಹಾಯ ಜಯಗೋವಿಂದ
ಮಾರುತಿ ಸೇವ್ಯ ಜಯಗೋವಿಂದ
ಬುದ್ಧಶರೀರ ಜಯಗೋವಿಂದ
(ಕಲ್ಕ್ಯಾವತಾರ) ಜಯಗೋವಿಂದ
ಕೇಶವವಿಷ್ಣೋ ಕೃಷ್ಣಮುಕುಂದ
ವಾರಿಜನಾಭ ಶ್ರೀಧರ ರೂಪ
ತಾಕ್ಷ್ರ್ಯತುರಂಗ ಶ್ರೀದಶುಭಾಂಗ
ಸಜ್ಜನ ಸಂಗೇ ಚಂಚಲಪಾಂಗ
ದುರ್ಜನ ಭಂಗಂ ಸಜ್ಜನ ಸಂಗಂ
ದೇಹಿಸದಾಮೇ ದೇವವರೇಣ್ಯ
ಪಾಪವಿನಾಶಂ ಪುಣ್ಯಸಮೃದ್ಧಿಂ
ಕಾಯವಿರಕ್ತಿ ಕರ್ಮಸುರಕ್ತಿಂ
ಪಾದಯುಗೇತೇ ಪಾವನದಾಸ್ಯಂ
ನಿರ್ಮಲ ಭಕ್ತಿಂ ನಿಶ್ಚಲಬುದ್ಧಿಂ
ನಿಸ್ತುಲ ಸೇವಾಂ ದೇಹಿ ಸದಾಮೇ
ದೇವನಮಸ್ತೇ
ಪ್ರಸ್ತುತಿ ದಿವ್ಯಂ ಸ್ವೀಕುರು ತಂದೆ
ಮುದ್ದೂ ಮೋಹನ ವಿಠಲಂ ವಂದೇ

ಶ್ರಿ ಹರಿಯೇ ನಿನ್ನುಪಕೃತಿಯುshri jariye ninna prakrutiyo

ಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮ
ಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾ
ಕಾಳಿಯ ದಮನಾ ಭುವನತ್ರಯಾಕ್ರಮಣ
ಪದ್ಮಾಲಯಾ ರಮಣ 1
ಧನದಮಾತಿರಲಿ ಗೋಧನದ ಮಾತಿರಲಿ
ಭೂ ಧನದ ಮಾತಿರಲಿ ಶೌರೀ
ಧನವೆಲ್ಲವೂ ಕರ್ಮವನು ಬೆನ್ಹಿಡಿದು
ಬಹದೆನುತಾಡುವರೊ ಮುರಾರಿ
ತನುವು ನಿನ್ನಯ ಸೇವೆಯನು ಮಾಡುತಿರಲಿ ಕಂಸಾರಿ
ಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿ
ಈ ಕೃಪೆಯಭೂರೀ ದುರ್ಜನವಿದಾರೀ
ಸುಜನೋಪಕಾರೀ ಗಿರಿನಾಥ ಧಾರೀ
ಪಾಪಹಾರಿ ದಿತಿಜಾರಿ ನಿರ್ವಿಕಾರಿ ಉದಾರಿ 2
ನಾಕದೊಳಗಿರಲಿ ಭೂಲೋಕದೊಳಗಿರಲಿ
ಅಧೋಲೋಕದೊಳಗಿರಲಿ ನಾನೂ
ಶ್ರೀಕಾಂತ ನಿನಗೆ ಬೇಕಾದವನೆನುತ್ತ
ಸಾಕಬೇಕೆನ್ನ ನೀನೂ ಭಕ್ತಜನಕಾಮಧೇನು
ಹೇಳಬೇಕಾದುದಿನ್ನೇನು 3
ಬಿದ್ದಿರುವೆನೈ ರಜೋಗುಣದಿ
ಒದ್ಯಾಡುತಿಹೆನೊ ಸಂಕಟದಿ
ಇದ್ದು ಫಲವೇನೊ ಈ ಭವದಿ
ಉದ್ಧರಿಸು ಕೃಪಾಜಲಧಿ 4
ಬದ್ಧನಾನಯ್ಯ ಈ ಜಗದಿ
ಶುದ್ಧಬುದ್ಧಿಯ ನೀಯೊ ಮುದದಿ
ಕೃದ್ಧನಾಗದಿರೆನ್ನ ದುಷ್ಕøತದಿ
ಎದ್ದು ಬಾರೆನ್ನಡಿಗೆ ದಯದಿ
ಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ

ಪತ್ಯಂತರ್ಗತ ನಾರಸಿಂಹ patyantargata narasimha

ಪತ್ಯಂತರ್ಗತ ನಾರಸಿಂಹ ಎನುತಾ
ಸಕ್ತಿಯಿಂ ಜಪಿಸಬೇಕಮ್ಮ ಪ
ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗ
ಪ್ರತ್ಯಾಹದಲಿ ಗೃಹ ಕೃತ್ಯವಾಚರಿಸುವಾಗಅ.ಪ
ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟ
ನಡತೆಯವರ ಕೂಟ ಮರೆದೂ
ದೃಢ ಭಕ್ತಿಯಿಂ ಲಜ್ಜೆ ತೊರೆದೂ
ನುಡಿನುಡಿಗ್ಹರಿ ಎಂದು ಬಾಯ್ದೆರೆದು
ಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗ
ಒಡೆಯಾದಿಗಳಿಗನ್ನ ಬಡಿಸುವಾಗಲು ನಿತ್ಯ 1
ಪತಿದೈವವೆಂದು ಭಾವಿಸುವ ಸತಿ
ಗತಿಶಯ ಗತಿಸಲ್ಲಿಸುವ
ಪತಿತರ ಪಾವನ ಗೈವ ಲಕ್ಷ್ಮೀ
ಪತಿಯೆ ಸದ್ಭಕ್ತರ ಕಾವ
ಅತಿಹಿತದಿಂದ ಸಂತತ ಹರಿದಾಸರಿ
ಗತಿಸೇವಾರತಿಯಿಂದ ಕೃತಕೃತ್ಯಳಾಗುತ 2
ಪದ್ಮಸಂಭವೆ ಪದ್ಮಜಾತ ವಾತ
ಪದ್ಮಜ ವಲ್ಲಭ ಎನುತ
ಕದ್ರುಜ ರುದ್ರಾದಿ ವಿನುತ ತಂದೆ
ಮುದ್ದುಮೋಹನ ವಿಠಲ ನೀತಾ
ಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿ
ನಿದ್ರೆಯೊಳÁದರು ನೀ ಮರೆಯ ಬ್ಯಾಡ 3
ನಿಜವಿರಬೇಕು ಸಜ್ಜನರಿಗೆ ಒಂದು ಪ
ಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪ
ಉದಯಾಸ್ತಮಾನ ಮಾಡುವ ವ್ಯಾಪಾರವು
ಪದುಮಾಕ್ಷ ಕೃಷ್ಣನ ಸೇವೆಯೆಂದು
ಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿ
ಮಧುವೈರಿ ಚರಿತೆಯ ಮುದದಿ ಕೇಳುವಂಥ 1
ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲ
ಒಡೆಯನ ಅಡಿಗೆ ಸೇವಕರು ಎಂದು
ದೃಢದಿ ತಿಳಿದು ಮೃಡನೊಡೆಯನ ಪಾದವ
ಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ2
ಮಾತಾಪಿತರು ಸುತ ಭ್ರಾತರಿಷ್ಟಾಬಂಧು
ವ್ರಾತ ರೆಲ್ಲರು ಹರಿಗೆ ದೂತರೆಂದು
ಮಾತುಳಾಂತಕ ತಂದೆಮುದ್ದುಮೋಹನವಿಠಲ
ಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3

ಗುರುವಿನ ಮರೆಯಾದಿರಮ್ಮ Guruvina mareyadiramma

ಗುರುವಿನ ಮರೆಯಾದಿರಮ್ಮ  ಇತ್ತಸಿರಿ ಗುರುವಿನ ನೀನು
ಮನದೊಳು ನೆನೆಯಬÉೀಕಮ್ಮ ತಂಗಿ ಅ.ಪ
ಗುರುವಿನ ಮರೆತರೆ ನಿನಗೆ ಥರಥರ ನರಕ
ಥರಥರನರಕವ ಅನುಭವಿಸಬೇಕಮ್ಮ ತಂಗೀ 1
e್ಞÁನಾನಂದಾತ್ಮಕನಾದ ಶ್ರೀಹರಿಯನ್ನು ಗುರು
ವಿನದ್ವಾರಾ ನೀ ತಿಳಿ ಮಂಗಳಾಂಗಿ 2
ಗುರುವೆ ತಂದೆಯು ಬಂಧು ಬಳಗಾವೆಂದು ಅ
ಕ್ಕರೆಯಿಂದ ನೀ ನೆನೆಯಬೇಕಮ್ಮಾ 3
ಗುರುವಿನ ಸೇವೆಯ ಮಾಡುತ್ತ ಗುರುಗಳ
ಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4
ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆ
ನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿ
ಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5