Labels

Sunday 8 December 2019

ದುರಿತವನ ಕುಠಾರಿ duritavana kuthari

ದುರಿತವನ ಕುಠಾರಿ ದುರ್ಜನ ಕುಲವೈರಿ
ಶರಣಾಗತ ವಜ್ರ ಪಂಜರ ಕುಂಜರ
ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ
ಪರಮ ಕರುಣಾಸಿಂಧು ಭಕ್ತ ಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರ ಪುರುಷೋತ್ತÀಮ
ಉರಗಶಯನ ವೈಕುಂಠವರ ಮಂದಿರ ಚಂದಿರ
ತರಣಿಕೋಟಿ ಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗ ನಡೆಸಿದ ಸಂ
ಗರ ಭಯಂಕರ ಲೋಕ್ಯೆಕ ಧೀರ
ಸ್ಮರಣೆÉ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀ ಎಮ್ಮ ಪೊರೆವುದಕ್ಕೆ
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ
ಪರಿಪಾಲಕನೆಂಬ ಬಿರುದು ನಿನ್ನದಲ್ಲದೆ 1
ಮಟ್ಟತಾಳ
ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸದÀನನಾಗಿ ಇಪ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ 2
ರೂಪಕತಾಳ
ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಕ ಸಾಕ್ಷಿ ಕಾರಣ ಕಾರ್ಯ ದೋಷ ವಿ
ದೂರ ಸದ್ಗುಣ ಸಾಂದ್ರ ಸುಜನಾಂಬುಧಿ ಚಂದ್ರ
ಭಾರಕರ್ತನೆ ಜಗಕೆ ನೀನಿರೆ ಎಮ್ಮ ಮ
ನೋರಥವ ಸಲಿಸುವುದೇನಾಶ್ಚರ್ಯವೊ
ಕ್ರ್ರೂರ ಮಾನವರ ಸಂಹಾರ ಮಾಡಿಸು ಗುರು
ಮಾರುತನಿಂದತಿ ಶೀಘ್ರನಾಗೀ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತರಿಗೆ ಭೂರಿ
ಸಾರ ಭಾಗ್ಯವನಿತ್ತು ನೀ ರಕ್ಷಿಸನುದಿನ
ಶೂರ ಜಗನ್ನಾಥ ವಿಠ್ಠಲ ನೀನಲ್ಲದಿರುಭ
ಕ್ತರ ಕಾವ ಕರುಣಿಗಳು ಜಗದೀ 3
ಝಂಪೆ ತಾಳ
ಪಿತನಿಂದ ನೊಂದ ಪುಹ್ಲಾದನ ಕಾಯಿದೆ ದೇ
ವತೆಗಳಿಗೆ ಬಂದ ಭಯ ಪರಿಹರಿಸಿ ದಯದಿ ದ್ರೌ
ಪದಿಯ ಮೊರೆ ಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ಮಾ
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಕ್ಷಿತಿಪರನ ಬಿಡಿಸಿ ಪಾಲಿಸಿದೆ ಕರುಣದಲಿ ಕುರು
ಪೃತನದೊಳು ಪಾಂಡವರ ಗೆಲಿಸಿ ಕೀರ್ತಿಯ ಪಡೆದೆ
ಶತಮೋಹನಾಸ್ತ್ರದಿಂದಲಿ ಗರ್ಭದೊಳಗೆ ಪೀ
ಡಿತನಾದ ಶಿಶು ಪರೀಕ್ಷಿತನ ಸಂತೈಸಿದೇ
ಶಿತಿಕಂಠಗೊಲಿದು ಸಾರಥಿಯಾಗಿ ಮುಪ್ಪುರದ
ಸತಿಯರನ ಕೊಲಿಸಿ ಕೀರುತಿಯಿತ್ತೆ ಭಕ್ತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ
ಪ್ರತ ಬೇಡಿಕೊಂಬೆ ಬಿನ್ನಪ ಕೇಳಜಸ್ರ ಸಂ
ತುತಿಪ ಭಕುತನ ಮನೋರಥವ ಪೂರೈಸು ಸು
ವೃತನಾಮ ಶ್ರೀ ಜಗನ್ನಾಥ ವಿಠ್ಠಲ ಭಾಗ
ವತಜನ ಪ್ರೀಯ ನೀನೆ ಗತಿ ಎಮಗೆ ಇಹಪರದಿ 4
ತ್ರಿವಿಡಿತಾಳ
ನೀ ಸಲಹಲಿನ್ನಾರು ಬಂದ
ಡ್ಡೈಸುವರು ಮೂಲೋಕದೊಳಹೊರ
ಗೀ ಸಮಸ್ತ ದಿವೌಕಸರು ನಿನ
ಗೆ ಸಮರ್ಪಕವಾದ ಕಾರ್ಯ ಮ
ಹಾ ಸುಖದಿ ನಡೆಸುವರು ಲಕ್ಷ್ಮೀ
ದಾಸಿ ಎನಿಪಳು ನಿನ್ನ ಮನೆಯಲ್ಲಿ
ದೇಶ ಕಾಲಾದಿಗಳು ನಿನಗಾ
ವಾಸ ಯೋಗ್ಯಸ್ಥಾನವೆನಿಪವು
ಶ್ರೀಶ ಲೋಕತ್ರಯಕೆ ಲೇಸಾ
ಯಾಸವೆಂಬುದು ಕಾಣೆನೋ ಕರು
ಣಾ ಸಮುದ್ರನೆ ಒಲಿದು ಎಮ್ಮಭಿ
ಲಾಷೆ ಪೂರೈಸೆಂದು ವೇದವ್ಯಾಸ ಕೀಟಕೆ ಒಲಿದು
ಮಹಿ ಸಿಂಹಾಸನವೇರಿಸಿ ಮೆರೆಸಿದ ಪ
ರಾಶರಾತ್ಮಜ ನಿನ್ನ ಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು
ನೀ ಸುಲಭನೆಂದರಿದು ನಾ ಬಿ
ನ್ನೈಸಿದೆನೊ ಈ ರೀತಿಯಲಿ ಸ
ರ್ವಾಸುನಿಲಯ ಜಗನ್ನಾಥ ವಿಠಲೇಸು ಮಾತುಗಳ್ಯಾಕೆ ಮನ್ಮನ
ದಾಸೆ ಪೂರ್ತಿಯ ಮಾಡಿ ಎಮ್ಮನು
ದಾಸಿಸದೆ ದಯದಿಂದ ನೋಳ್ಪ್ಪುದು 5
ಅಟ್ಟತಾಳ
ನಿಗಮ ತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿ ಬೊಮ್ಮ ಭವಾ
ದಿಗಳು ತಾವರಿಯರು ಸಾಕಲ್ಯಮಂದ ಜೀ
ವಿಗಳಿಗೆ ಗೋಚರಿಸುವುದೆ ನಿನ್ನರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯಾದೀಗೆನ್ನಪರಾಧ ಕೋಟಿಗಳನು
ಜಗತೀಪತಿ ತನ್ನ ಮಗುವಿನ ತೊದಲು ಮಾ
ತುಗಳನು ಕೇಳಿ ತಾ ನಗುತಲಿ ಕಾಮಿತ
ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವಿನ
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ
ಲ್ಮೊಗನಯ್ಯ ಅರ್ಥ ಕಾಮಗಳೊಳಗಿಪ್ಪ ಈ
ರ್ವಗೆ ರೂಪವೊಂದಾಗೆ ಆವುದಸಾಧ್ಯವೊ
ಗಗನ ಪಾತಾಳ ವ್ಯಾಪ್ತ ರೂಪನೆ ಕರ
ಮುಗಿವೆ ಗೋಚರಿಸೆಮ್ಮ
ದೃಗಯುಗಗಳಿಗಿಂದು ಯುಗಾವರ್ತ
ಜಗನ್ನಾಥ ವಿಠಲ ನರ
ಮೃಗನಾಗಿ ಸ್ತಂಭದಿಂದೊಡೆದು ಬಂದೊದಗಿದೆ 6
ಏಕತಾಳ
ಶ್ರೀನಿಧಿ ಪ್ರತಿದೇಹಗಳಲ್ಲಿ ಗತಿ
ನೀನಲ್ಲದೆ ಎಮಗಾರಿಹ ಪರದಲ್ಲಿ
ಆ ನಳಿನಭವ ಭವಾದ್ಯನಿಮೀಷರ ನಿ
ಜಾನಂದವರಿತು ಫಲಗಳ ಕೊಡುವಿ ಮ
ಹಾನುಭಾವ ಎಮ್ಮಭಿಮತ ಸಲಿಸುವು
ದೆÉೀನಚ್ಚರಿ ನಿನ್ನರಸಿ ಲಕುಮಿ ಕಡೆ
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ
ದಾನಂದಮಯನೆ ಪ್ರಣತರ ಅಧಿಕಾ
ರಾನುಸಾರ ಸುಖ ಪಾನೀಯಧೀಯೊಳು ಲೋಲ್ಯಾಡಿಸುತಿಹೆ
ದಾನಿಗಳರಸ ಮನಾದಿಕರಣಗಳ
ಮಾನಿಗಳೊಡೆಯನೆನಿಸುವ ಮುಖ್ಯ
ಪ್ರಾಣ ಪತಿಗೆ ನೂತನ ವಿe್ಞÁಪನ
ವೇನುಂಟನುದಿನದಲಿ ಮಾಳ್ಪುದು
ಮಾನವ ಗುರು ಜಗನ್ನಾಥ ವಿಠ್ಠಲ ಕರು
ಣಾನಿಧೆ ಸರ್ವರ ಸುಲಭ ನೀನಲ್ಲದೆ 7
ಜತೆ
ಚಟುಲ ಕಾರ್ಯಗಳ ಸಂಘಟನೆ ಮಾಡಿಸುವಿ ನಿ
ಷ್ಕುಟಿಲ ಜಗನ್ನಾಥವಿಠ್ಠಲ ದೇವೋತ್ತಮ ||

No comments:

Post a Comment