Labels

Friday 27 December 2019

ತೊಲಗಿ ಪೋಗುವದಲ್ಲ tolagi poguvadalla

ತೊಲಗಿ ಪೋಗುವದಲ್ಲ ತೋಂಡನಾದ ಕಾಲಕ್ಕುಜಲಜ ಸಂಭವನು ಅನಾದಿಯಿಂದನೆಲೆಯಾಗಿ ಮಾಡಿದ ಸಂಕಲ್ಪವೆಂದಿಗುತಲೆದೂಗಿದರೆ ತಪ್ಪಲರಿಯದಿದಕೋಕಾಲ ಕಾಲಕ್ಕೆ ತಿಳಿಯದ ಕಠಿಣವಾದ ಮೋಹಬಲೆಯೊಳು ಸಿಗಬಿದ್ದು ಭ್ರಮಣನಾಗಿತಿಲ ಮಾತುರ ದುಃಖ ಅನುಭವವಲ್ಲೆಂದುಹಲವು ಸೌಖ್ಯಂಗಳ ಹಂಬಲಿಸಿಹಲುಬಿ ಹಲುಬಿ ನಿತ್ಯ ತಳಮಳಗೊಂಡರಾಗೆಫಲವಿಲ್ಲ ಫಲವಿಲ್ಲ ನಿಜವಾಹದುಬಲು ಮೂಢತನವುಳ್ಳ ಬಾಲಭಾವದ ಚಂ-ಚಲ ಬುದ್ಧಿಯನ್ನೆ ಬಿಟ್ಟು ಚತುರನಾಗಿತಿಳಿವ ಮಾರ್ಗವೆ ಕೇಳು ತೀವ್ರದಿಂದಲಿ ನಿ-ರ್ಮಳ ಪರಿಚ್ಛೇದದಲ್ಲಿ ನಿಲ್ಲಿಸಿಹ ಮನವೆಬಲವಂತಳಾಗಿದ್ದ ಸಿರಿ ಬೊಮ್ಮ ಜೀವ ಜಡಮಿಳಿತವಾಗಿದ್ದ ಜಗವೆ ಚಿದ ಚಿದಾತ್ಮಕವೆಂದುಪೊಳೆಯುತ್ತಲಿದೆ ಬಲ್ಲ e್ಞÁನಿಗಳಿಗೆಜಲಧಾರಾ ವರ್ನ ನಮ್ಮ ವ್ಯಾಸವಿಠಲನಂಘ್ರಿನಿಲಿಸಿ ನಿನ್ನೊಳು ಮುಂದೆ ತಿಳಿಯೊ ಇದರ ವಿವರ 1
ಮಟ್ಟತಾಳ
ದ್ವಿವಿಧಾತ್ಮಕವಾದ ಜಗವು ನಾಲ್ಕು ಬಗೆವಿವರದಲ್ಲಿಪ್ಪದು ಪ್ರಾಕೃತ ಅಪ್ರಾಕೃತ ವೈಕೃತತ್ರಿವಿಧವು ಅತಿಸ್ಥೂಲ ವೈಕೃತವೆಂದು ಸಂಭವಿಸಿಪ್ಪ ದುಗಡಾ ಒಂದು ಮಾತುರ ಬಿಟ್ಟುತವಕದಿನೀಕ್ಷಿಸಲು ಒಂದಕ್ಕೆ ಒಂದಧಿಕದ್ವಿವಿಧವು ಸರಿ ಎನ್ನು ಅನುಮಾನವೆ ಸಲ್ಲಾಪವನನಂತರಯಾಮಿ ವ್ಯಾಸವಿಠಲ ಇಂತುನವ ನವ ಕೃತ್ಯವನು ಮಾಡುವನೆಂದರಿಯೊ2
ತ್ರಿವಿಡಿತಾಳ
ವರ್ಣಾತ್ಮಕವಾದ ವೇದ ದೇಶ ಕಾಲಪರಮಾಣು ಪುಂಜ ಪ್ರಕೃತಿಯೆ ನಾಲ್ಕು ಬಗೆಕರಿಸಿಕೊಳುತಲಿವೆ ಪ್ರಾಕೃತ ನಾಮದಲಿ ಚ-ತುರ ಪದಾರ್ಥಂಗಳು ಚಿರಕಾಲದಿಪರಿಮಿತ ತೊರದು ಬ್ರಹ್ಮಾದ್ಯರಿಗೆ ಅ-ಪರಿಚ್ಛಿನ್ನವಹದು ಆಗಮ ವಾಕ್ಯವೆ ಸಿದ್ಧಾಪರಿಯ ಕೇಳಿದು ಒಂದರಂತೆ ಒಂದಲ್ಲ ಮುಂ-ದರಿಯೊ ವಿಕಾರವು ಎಂದಿಗಾದರು ಚಿರ ಪದಾರ್ಥಂಗಳು ಚಿನ್ಮಯ ಹರಿಯಿಂದಸರಿಯಿಂತು ಜಡದ ವಿಚಾರವೆನ್ನುಮರಳೆ ಮನವೆ ಕೇಳು ನಿತ್ಯ ಮುಕ್ತಳುಭರಿತಳಾಗಿ ಹರಿಯ ಧೇನಿಸುತ್ತಸ್ಥಿರವಾಗಿ ಇಪ್ಪಳು ಇವುಗಳಲಿ ಸಿದ್ಧಾಅರಿಯಲಾಗದು ಇತರ ಜಡ ಚೇತನಗಳಲ್ಲಿಮರಿಯಲಾಗದು ಚತುರ ಬಗೆ ತತಿ ಜಗದೊಳುಸರಿಯಿಂತು ಪ್ರಕೃತಿಯು ಚೇತನಾಚೇತನಪರಮ ಪುರುಷ ವ್ಯಾಸವಿಠಲನಂಘ್ರಿಗೆಎರಗಿ ತಿಳಿಯೊ ಪ್ರಾಕೃತದ ವಿಚಾರ 3
ಅಟ್ಟತಾಳ
ಸಾದಿ ಗುಣತ್ರಯ ಮಹದಾಹಂಕಾರವುಮೋದದಿಂದಲಿ ಮನ ಗಗನಾದಿ ಪಂಚವುಅದೆ ಸರಿ ಆವರ್ಣ ಭೇದದಿಂದ ಶೋಧಿಸೊಬುಧರೊಳು ಪ್ರಕೃತಿ ಭಾಗಗಳೆಲ್ಲಭೇದಿಸಿಪ್ಪವು ನಿತ್ಯವಹುದು ನಾಶವಿಲ್ಲಸಾಧಿಸಿ ತಿಳಿ ಮುಂದೆ ಚೇತನದ ವಿಚಾರವೇದಗರ್ಭನಿಂದ ಶನಿ ಪರಿಯಂತ ವಿ-ವಾದವಿಲ್ಲದೆ ದೇವತಿಗಳಿಗಿಪ್ಪರು ಎನ್ನುಈ ದೇವತಿಗಳ ಅಂಶಗಳು ವಿಚಾರಗಳುಕ್ರೋಧ ಮೋಹಗಳಿಲ್ಲ ಅಸುರಾವೇಶವಿಲ್ಲಸಾಧನಕೆ e್ಞÁನ ತಿರೋಹಿತಯಿಲ್ಲಆದರಿಸಿ ನೋಡ ಪ್ರಾಕೃತ ಜಡ ಚೇತ-ನದ ಸ್ಥಿತಿಯು ಇಂತು ಇತರ ಜೀವರು ಇಲ್ಲವಾದವಿಲ್ಲ ವಿಕೃತ ಇದರಂತೆ ಸಿದ್ಧ ವಿ-ನೋದದಿಂದಲಿ ಜಡವಧಿಕ ಉಭಯದಲ್ಲಿಬೋಧ ಮೂರುತಿ ನಮ್ಮ ವ್ಯಾಸವಿಠಲ ಜಗ-ದ್ವೇದನೆಂದು ನಂಬು ಮುಕ್ತಿಲಿ ಇಂಬು 4
ಆದಿತಾಳ
ಕೇಳು ವೈಕೃತದೊಳಗೆ ಪಿಂತೆ ಪೇಳಿದವೆಲ್ಲಸಾಲಾಗಿ ಬಂದಿವೆ ಜಡ ಚೇತನಗಳಿಲ್ಲಿಗೆಶ್ರೀ ಲಕುಮಿ ದೇವಾಂಶಿಗಳು ಮೇಲೆ ತ್ರಿವಿಧ ಜಡವುಸ್ಥೂಲ ಜಡ ಜೀವರಲ್ಲಿ ಮಿಳಿತವಾಗಿಪ್ಪವುಹೇಳುವೆ ಇದರ ವಿನಹಾ ಇತರ ಮುಕ್ತಿ ಯೋಗ್ಯರುಖೂಳ ಜನರು ನಿತ್ಯ ಸಂಸಾರಿಗಳು ಇಂತುಆಲಸವಿಲ್ಲದೆ ಸಿದ್ಧವಾಯಿತು ವೈಕೃತ ಲಾಲಿಸು ಜಡ ಚೇತನ ಇವೆ ಸಿದ್ಧ ಇನ್ನೊಂದಿಲ್ಲಪಾಲಸಾಗರ ಶಾಯಿ ವ್ಯಾಸವಿಠ್ಠಲನ ಪಾದ-ವೆಲ್ಲವಿಂತು ಭಜಿಸಿ ಕೇಳು ಯೋಚನೆ ಬಿಡು 5
ಜತೆ
ನಿತ್ಯಾ ನಿತ್ಯಗಳಲ್ಲಿ ನಿಸ್ಸಾರ ಸಾರವಅತ್ಯಂತದಲಿ ತಿಳಿದು ವ್ಯಾಸ ವಿಠ್ಠಲನ್ನ ಭಜಿಸು ||

No comments:

Post a Comment