Labels

Wednesday 25 December 2019

ವರದಾತೀರದಿ ನೆಲಸಿಹ varadaa teeradi nelasiha

ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ
ವರದಾಯ ಶ್ರೀ ರಾಘವೇಂದ್ರರ
ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ
ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ
ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ
ಧರಿಸಿ ಧರಣಿಯೋಳ್ ಪರಿ ಪರಿ ವಿಭವದಿ
ಮೆರೆದ ಕರುಣವರ ಪುಣ್ಯ ಪುರುಷನ 1
ತನುಮನಧನ ವನಿತಾದಿ ವಿಷಯ ವಿರಹಿತನು ಪೇಳಮ್ಮಯ್ಯ |
ತನುರಹಿತ ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ |
ಅನಿಮಿಷ ಲೋಚನೆ ಅನುಮಾನಿಸದಿರು
ಅನಿಮಿಷಾಮಶರಿವರನನುದಿನ ಸೇವಿಸು 2
ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ
ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ
ಸತತ ರವಿ ಎನಿಸಿ ಶಾಮಸುಂದರನ
ಅತಿ ಭಕುತಿಲಿ ತುತಿಪ ಗುಣನಿಧಿ 3

No comments:

Post a Comment