Labels

Saturday 25 January 2020

ಆನೆಂತು ತುತಿಪೆ ನಿನ್ನಾ ಶ್ರೀ aanentu tutipe ninna


ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ
ಆನೆಂತು ತುತಿಪೆ ನಿನ್ನಾ ಪ
ಆನೆಂತು ತುತಿಪೆ ಪಂಚಾನನಸುತ ಪವ
ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ.
ಸನಕನಂದನ ಸನತಕುಮಾರಾದಿ
ಮುನಿಗಳು ಹರಿ ದರುಶನವ ಮಾಡುವೆವೆಂದು
ಘನಹರುಷದಿ ಮೋಕ್ಷವನು ಕುರಿತು ಬಂದೊ
ಡನೆ ಬಾಗಿಲಲಿ ನಿಲ್ಲೆನಲು ಜಯ ವಿಜಯ
ರನ ನೋಡಿ ಎರಡೊಂದು ಜನುಮದಲಿ ಕ್ರೂರ
ದನುಜಕುಲದಲಿ ಜನಿಸಿರೆಂದೆನೆ ಸಿರಿ
ವನಜಾಕ್ಷರಗೋಸ್ಕರಾ ಅವತರಸಿ
ಗುಣಪೂರ್ಣ ಗುರು ಸಮೀರಾ ಸೇವಿಪೆನೆಂದಾ
ಕ್ಷಣದಿ ಜನಿಸಿ ವಾನರಾ ರೂಪಿಲಿ ಭುವ
ವನದೊಳು ಮೆರೆದೆ ಅಸಮಶೂರಾ ಹರಿಹರಾ 1
ಕೋತಿ ಕಟಕಮಾಡಿ ಜಾತರಹಿತ ಹರಿ
ಗೇ ತಲೆಬಾಗಿ ಸುಪ್ರೀತಿಯಿಂದಲಿ ರವಿ
ಜಾತನ ಸಲಹಿ ಅತೀ ತೀವ್ರದಿಂದಲಿ
ಸೀತೆಯ ಕ್ಷೇಮವ ದೂತ ಪೇಳುವೆನೆಂದು
ವಾತವೇಗದಿ ವನಧಿಯ ತಡಿಲ್ಲದೆ ದಾಟಿ
ಮಾತೆಗುಂಗುರವಿತ್ತ ಶೋಕತರುಗಳ
ಭೀತಿ ಬಡದಲೆ ಕಿತ್ತಿ ರೋಮ ಬಳ
ವ್ರಾತವೆಲ್ಲವ ನುಗ್ಗೊತ್ತೀ ಲಂಕಾಪುರ
ಜಾತವೇದಸಗೆ ಇತ್ತೀ ಹನುಮಶಿರಿ
ನಾಥನಿಗೆರಗಿ ಪಡೆದ ಬಹುಕೀರ್ತಿ 2
ದುರುಳ ಕಲ್ಯಾದ್ಯರು ಊರ್ವಿಯೊಳ್ಪುಟ್ಟಿ ಸಂ
ಚರಿಸುತ್ತ ಇರಲಾಗಿ ಮರುತದೇವನು ಅವ
ತರಿಸಿ ಅವನಿಯೊಳು ದುರಿಯೋಧನುಣಲಿತ್ತ
ಗರಳವ ಭುಂಜಿಸಿ ಅರಗಿನ ಸದನದಿ
ಪುರೋಚನಾದಿಗಳನ್ನು ಉರುಹಿ ಏಕಚಕ್ರಾ
ಪುರದಲ್ಲಿದ್ದ ಬಕಾಸುರನ ಸದೆದು ಭೂಮಿ
ಸುರವೇಷವನೆ ಧರಿಸೀ ಪಾಂಚಾಲಿ ಸ್ವಯಂ
ವರ ಪತಿಕರಿಸಿ ಮಗಧದೇಶ
ದರಸನ ಸಂಹರಿಸೀ ರಾಜಸೂಯಜ್ಞ
ಹರಿಗೆ ಅರ್ಪಿಸಿದಿ ಮೆರೆಸೀ 3

ಭಕುತಳಾದ ಇಂದುಮುಖಿ ದ್ರೌಪದಿಗೆ ಸೌಗಂ
ಧಿಕವ ತರುವೆನೆಂದು ವೃಕೋದರ ಪೋಗಲು
ಅಕುಟಿಲ ಹನುಮಂತನನು ಅವಲೋಕಿಸ್ಯಂ
ಜಿಕೆಯಿಂದ ನಿಂದು ಮಾರಕಜನರಿಗೆ ಮೋ
ಹಕವ ತೋರಿಸಿ ಕುಪಥ ಖಳರನೊರಿಸಿ ನೀ
ಸಖಿಗೆ ಪೂವಿತ್ತು ಗುರುಕುಮಾರನಸ್ತ್ರಕ
ಳುಕದೆ ಯುದ್ಧವ ಮಾಡಿದೆ ದುಶ್ಯಾಸನ
ರಕುತ ವೆರಿಸಿ ಕುಡಿದೆ ಉಭಯಗಳ ರ
ಥಿಕರ ಬಲವಕರೆದೆ ಭಯದಲಿ ಉ
ದಕದಲಿರ್ದ ದುರ್ಯೋಧನನೂರು ಕಡಿದೆ 4
ಭೀಮ ಭಯಂಕರ ಕಾಮಕೋಟಿ ಚಲ್ವ
ಧೀಮಂತಜನ ಮನೋಪ್ರೇಮ ಪಾವನ ಗುಣ
ಸ್ತೋಮ ಸರ್ವಾಧಾರ ಭ್ರಾಮಕಜನ ವನ
ಧೂಮಕೇತುವೆ ಸರ್ವಾಸೀಮ ಸೌಖ್ಯ ಪೂರ್ಣ
ಸೋಮಾರ್ಕ ಸುರಪತಿ ಸಾಮಜ ಹರಿಗುರು
ರೋಮ ಕೋಟೇಶ್ವರ ಶ್ರೀಮಾನ್ಯ ಭಕುತಲ
ಲಾಮ ಭವ್ಯ ಚರಿತಾ ಸೋಮಕುಲ
ಸೋಮ ಸುಖ ಭರಿತಾ ಭಕುತ ಪ್ರೀತಾ
ಹೇಮವರ್ಣ ಕಾಯ ಹಿತದಿಂದ ನಿರುತಾ 5
ಮಣಿಮಂತನೆಂಬವನಿಯೊಳು ಪುಟ್ಟಿ ವೇ
ನನ ಮತ ಪಿಡಿದು ಜೀವನೆ ಪರಮಾತ್ಮನೆಂ
ದೆನುತ ಸ್ಥಾಪಿಸಿ ಪಣೆಗಣ್ಣೆನ್ವರದಿಂದ
ಅನಿಮಿಷರೆಲ್ಲರು ವನಜಜಗುಸುರಲು
ಮುನಿಗಳು ಸಹ ನಾರಾಯಣನ ಪದಕೆ ದಂಡ
ಪ್ರಣಾಮವ ಮಾಡಿ ಸ್ತೋತ್ರವಿನಯದಿ ಗೈಯೆ
ಅನಿಲನ ಅವಲೋಕಿಸಿ ಪೇಳಲು ಹರಿ
ಮನ ಭಾವವನು ಗ್ರಹಿಸಿ ಮಧ್ಯಗೇಹ
ಮನೆಯೊಳಗವತರಿಸಿ ಮೆರೆದೆ ಗುರು
ಅನುಗಾಲದಲಿ ನಿನ್ನ ಗುಣಗಳಾಶ್ರೈಸೀ 6
ವಾಸುದೇವನೆಂಬ ಭೂಸುರನಾಮದಿ
ಲೇಸಾಗಿ ಚರಿಸಿ ಸಂತೋಷ ಭರಿತರಾಗಿ ಸಂ
ನ್ಯಾಸಾಚ್ಯುತ ಪ್ರೇಕ್ಷರಾ ಕರಸರಸಿಜ
ದೀ ಸಂತೋಷದಿ ಕೊಂಡು ಆಶÀಂಕರರÀ ಭಾಷ್ಯ
ದೂಷಿಸೆ ಗರುಗಳುಲ್ಲಾಸ ಸನ್ಮುಖದಲಿ ವಿ
ಶೇಷದಿಂದಲಿ ವಿರಚಿಸುವುದೆನಲು ಉ
ಲ್ಲಾಸದಿಂದಲಿ ಕೇಳಿ ಆಕ್ಷಣದಿ ಸಂ
ತೋಷ ಮನದಲಿ ತಾಳಿ ಮೋಹಕವ ಪರಿಹ
ರಿಸಿ ಅರ್ಥವ ಪೇಳೆ ಭೂಸುಜನರ
ಆಶೆ ಪೂರೈಸಿದ ಘನನಿನ್ನ ಲೀಲೆ 7
ತರಳತನದಲಿ ಬದರಿಗೈದಿ ಪಾರಾ
ಶರ ನಾರಾಯಣನ ಸಂದರುಶನ ಕೊಂಡು ತೀ
ವರದಿಂದ ಹರಿತತ್ವ ನಿರ್ಣಯ ಶಾಸ್ತ್ರವ
ವಿರಚಿಸುವುದಕಿನ್ನು ವರವ ಪಡೆದು ಬಂದು
ಎರಡೇಳು ಆರೊಂದು ದುರುಳ ಭಾಷ್ಯಗಳೆಂಬ
ಗರಳ ತರುಗಳ ಮುರಿದಿಕ್ಕಿ ನೀ ಮೂವ
ತ್ತೆರಡೈದು ಗ್ರಂಥಗಳ ನಿರ್ಮಿಸಿ ವಿಬು
ಧರಿಗೆಲ್ಲ ಪೇಳಿ ವ್ಯಾಳ ಭೂಷಣದೇವ
ಪರನೆಂಬ ಯುಕುತಿಜಾಲ ಹರಿದು ಹರಿ
ಪರ ಶ್ರೀ ಬೊಮ್ಮಾದ್ಯರೆ ಗುರುಗಳೆಂದೆನಲು 8
ನಮೋ ನಮೋ ಸಮೀರನೆ ನಮೋ ಶ್ರೀ ಮುಖ್ಯಪ್ರಾಣ
ನಮೋ ನಮೋ ದಯಾಸಿಂಧು ನಮೋ ಭಕ್ತಜನ ಬಂಧು
ನಮೋ ನಮೋ ಗುಣಶೀಲ ನಮೋ ಭಾರತಿಲೋಲ
ನಮೋ ನಮೋ ಭವ್ಯಾಂಗ ನಮೋ ಅರಿಗಜಸಿಂಗ
ನಮೋ ನಮೋ ಜಗದ್ವ್ಯಾಪ್ತ ನಮಿತಜನರಾಪ್ತ
ನಮೋ ನಮೋ ಸುಖತೀರ್ಥ ನಮೋ ಮೂರ್ಲೋಕದ ಕರ್ತ
ನಮೋ ಗುರುಕುಲ ತಿಲಕ ಪಾಲಿಸು ಎನ್ನ
ತಮಹರದೂರಶೋಕ ಸಜ್ಜನರಿಗೆ
ಅಮಿತ ಮೋದದಾಯಕ ಶ್ರೀಭೂ ದುರ್ಗಾ
ರಮಣ ಜಗನ್ನಾಥವಿಠಲ ಭಕ್ತಾಧಿಕಾ 9


No comments:

Post a Comment