ಕಾಯಬೇಕೆನ್ನ ಗೋಪಾಲ
ಕರುಣಾಶೀಲ ಭಕ್ತರ ಪಾಲ
ಕರುಣಾಶೀಲ ಭಕ್ತರ ಪಾಲ
ಹಲವು ಜನ್ಮಗಳೆತ್ತಿ ಬಂದೆ
ಮಾಯಾಮಲವೆಂದರಿಯದೆ ಭವದೊಳು ನೊಂದೆ
ಮಾಯಾಮಲವೆಂದರಿಯದೆ ಭವದೊಳು ನೊಂದೆ
ಬಲು ಭಯವಾಯಿತು ಮುಂದೇ ನೀನು
ಸುಲಭನೆಂದು ಕೇಳಿ ಶರಣೆಂದು ಬಂದೆ
ಸುಲಭನೆಂದು ಕೇಳಿ ಶರಣೆಂದು ಬಂದೆ
ಈ ರೀತಿ ಪಾಪಗಳೆಲ್ಲಾ ಅನ್ಯ ನರರೇನು ಅರಿಯರು
ಯಮಧರ್ಮ ಬಲ್ಲ
ಯಮಧರ್ಮ ಬಲ್ಲ
ನರಕಕೆ ಒಳಗದೆನಲ್ಲಾ
ಸಿರಿ ವರನಾರಯಣ ಪುರಂದರ ವಿಠಲ
ಸಿರಿ ವರನಾರಯಣ ಪುರಂದರ ವಿಠಲ
No comments:
Post a Comment