ಏಕೆ ಕಡೆಗಣ್ಣಿಂದ ನೋಡುವೆ
ನೀ ಕರುಣಾಳು ಅಲ್ಲವೇ ಹರಿಯೇ
ನೀ ಕರುಣಾಳು ಅಲ್ಲವೇ ಹರಿಯೇ
ಭಕ್ತವತ್ಸಲನಲ್ಲವೇ ಕೃಷ್ಣಾ
ಚಿತ್ಸುಕದಾತ ನೀನಲ್ಲವೇ
ಚಿತ್ಸುಕದಾತ ನೀನಲ್ಲವೇ
ಅತ್ಯಂತ ಅಪರಾಧಿ ನಾನೊದೊಡೇನಯ್ಯಾ ಕೃಷ್ಣಾ…
ಇತ್ತಿತ್ತ ಬಾ ಎನಬಾರದೆ
ಇತ್ತಿತ್ತ ಬಾ ಎನಬಾರದೆ
ದೋಷಿಯು ನಾನಾದೊಡೇನಯ್ಯ
ಸರ್ವ ದೋಷರಹಿತನು ನೀನಲ್ಲವೇ
ಸರ್ವ ದೋಷರಹಿತನು ನೀನಲ್ಲವೇ
ಘಾಸಿಯಾತಕೊ ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ ….
ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠಲ
ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠಲ
No comments:
Post a Comment