Labels

Monday 7 October 2019

ವಿಜಯ ರಾಯರ ಪಾದ vijayarayara paada

ವಿಜಯ ರಾಯರ ಪಾದ ನಿಜವಾಗಿ ನಂಬಲು
ಅಜನ ಪಿತ ತಾನೇ ಒಲಿವ ||ಪ||
“ವಿ” ಎಂದು ನುಡಿಯಲು ವಿಷ್ಣು ದಾಸನಾಗುವನು
“ಜ” ಎನಲು ಜನನ ಹಾನಿ
“ಯ” ಎಂದು ಕೊಂಡಾಡೆ ಯಮ ಭಟರು ಓಡುವರು
“ರಾಯ” ಎಂದೆನಲು ಹರಿ ಕಾವ ವರವೀವ ||೧||
ಇವರ ಸ್ಮರಣೆಯು ಸ್ನಾನ ಇವರ ಸ್ಮರಣೆಯು ಧ್ಯಾನ
ಇವರ ಸ್ಮರಣೆಯು ಅಮೃತ ಪಾನ
ಇವರ ಸ್ಮರಣೆಯ ಮಾಡೆ ಯುವತಿಗ್‍ಅಕ್ಷಯವಿತ್ತ
ತ್ರಿವಿಕ್ರಮನೆ ಮುಂದೆ ನಿಲುವಾ ಕುಣಿವಾ ||೨||
ವಾರಾಣಾಸಿ ಯಾತ್ರೆ ಮೂರು ಬಾರಿ ಮಾಡಿ
ಮಾರಪಿತನೊಲುಮೆಯನು ಪಡೆದು
ಮೂರವತಾರದ ಮಧ್ವಮುನಿ ರಾಯರ
ಚಾರುಚರಣವನು ಧರಿಪ ಈ ಮುನಿಪ ||೩||
ಪುರಂದರ ದಾಸರ ಪರಮಾನುಗ್ರಹ ಪಾತ್ರ
ಗುರು ವಿಜಯರಾಯನೀತ
ಸಿರಿವಿಜಯವಿಠಲನ ಶ್ರೀನಿವಾಸಾಚಾರ್ಯರು
ಹರಿಯಾಜ್ಞೆಯಿಂದ ಕೊಟ್ಟರೊ ದಿಟ್ಟರು ||೪||
ದಾನಧರ್ಮದಿ ಮಹಾ ಔದಾರ್ಯ ಗುಣಶೌರ್ಯ
ಶ್ರೀನಿವಾಸನ ಪ್ರೇಮ ಕುವರ
ಮಾನವಿ ಸೀಮೆ ಚಿಕಲಪರವಿವಾಸ
ಮೋಹನ್ನವಿಠ್ಠಲನ್ನ ನಿಜದಾಸ ಉಲ್ಲಾಸ ||೫||

No comments:

Post a Comment