Labels

Sunday 20 October 2019

ಆಚ್ಯುತಾನಂತ ಗೋವಿಂದ achyutanant govind

ಆಚ್ಯುತಾನಂತ ಗೋವಿಂದ-ಹರಿ |ಸಚ್ಚಿದಾನಂದ ಸ್ಪರೂಪ ಮುಕುಂದ ಪಕೇಶವ ಕೃಷ್ಣ ಮುಕುಂದ-ಹರಿ |ವಾಸುದೇವ ಗುರು ಜಗದಾದಿವಂದ್ಯ ||ಯಶೋಧೆಯ ಸುಕೃತದ ಕಂದ-ನಮ್ಮ ||ಶೇಷಶಯನ ಭಕ್ತ ಹೃದಯಾನಂದ 1
ನಾರಾಯಣ ನಿನ್ನ ನಾಮ-ಎನ್ನ |ನಾಲಗೆಯೊಳಗಿರಬೇಕೆಂಬ ನೇಮ ||ನಾನು ಬೇಡುವೆ ನಿನ್ನ ಪ್ರೇಮ-ಎನ್ನ ||ಪಯಣ ಸಮಯಕೊದಗಲಿ ಗುಣಧಾಮ 2
ಮಾಧವ ಮಂಗಳಗಾತ್ರ-ಸ್ವಾಮಿ |ಯಾದವ ಕೈಲಾಸವಾಸನ-ಮಿತ್ರ ||ಮಹಿಮೆ ಕೇಳಿದರೆ ವಿಚಿತ್ರ-ಎನ್ನ ||ಮನಮೆಚ್ಚಲಿ ಸತ್ಯಭಾಮಾ ಕಳತ್ರ 3
ಗೋವಿಂದ ಗೋಪಾಲ ಬಾಲ-ಸೋಳ |ಸಾವಿರ ಗೋಪಿಯರ ಆನಂದಲೀಲಾ ||ಜೀವಮಣಿಯ ಮುಕ್ತಾಮಾಲಾ-ನಿನ್ನ ||ನೇನೆಂದು ಕರೆಯಲಿ ಸುಗ್ರೀವಪಾಲ 4
ವಿಷ್ಣುಚಕ್ರವು ಬಂದು ಸುತ್ತಿ-ಮೂರು |ಸೃಷ್ಟಿಯನೆಲ್ಲವ ತಿರುಗಿ ಬೆನ್ನಟ್ಟಿ ||ಕೃಷ್ಣ ಸಲಹೆಂದು ಮೊರೆಯಿಟ್ಟ-ಮುನಿ ||ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ 5
ಮಧುಸೂದನ ಮಾರಜನಕ-ನೀನು |ಮದಗಜ ಸೀಳಿ ಮಲ್ಲರ ಗೆಲಿದೆ ತವಕ ||ಒದಗಿ ಕಂಸನ ಕೊಂದ ಬಳಿಕ-ನೀ ||ಮುದುಕಗೆ ಪಟ್ಟವ ಕಟ್ಟಿದೆ ಧನಿಕ 6
ತ್ರಿವಿಕ್ರಮ ತ್ರೈಲೋಕ್ಯನಾಥ-ದೇವ |ತ್ರಿಪುರರ ಸತಿಯರ ವ್ರತಕೆ ವಿಘಾತ ||ಯದುವಂಶ ಪಾಂಡವ ಪ್ರೀತ-ಎನ್ನ ||ಹೃದಯದೊಳಡಗಿರೊ ಶ್ರೀ ಜಗನ್ನಾಥ 7
ವಾಮನರೂಪದಿ ಬಂದು-ಬಲಿಯ |ದಾನವ ಬೇಡಲು ಉಚಿತವು ಎಂದು ||ಧಾರೆಯನೆರೆಯಲು ಅಂದು-ಬೆಳೆದು ||ಧಾರಿಣಿಯೆಲ್ಲವನಳೆದೆ ನೀನಂದು 8
ಶ್ರೀಧರ ಶೃಂಗಾರಾಧಾರ-ದಿವ್ಯ |ಶ್ರೀವತ್ಸಲಾಂಛನ ಶ್ರೀರಘುವೀರ ||ವಾರಿಧಿಸಮ ಗಂಭೀರ-ಗೈದೆ |ಕ್ರೂರರಕ್ಕಸರನೆಲ್ಲರ ಸಂಹಾರ 9
ಹೃಷೀಕೇಶ ವೃಂದಾವನದಲಿ-ನೀ |ನಿಶೆಯಲಿ ಕೊಳಲನೂದುತ ಇರಲಿಲ್ಲ ||ಋಷಿವೃಂದವಂದ್ಯ ನಿನ್ನಗಲಿ-ನಿ |ಮಿಷವು ಬಿಟ್ಟಿರಲಾರೆ ನಿಲ್ಲೋ ಮನದಲಿ10
ಪದ್ಮನಾಭನೆ ಕೇಳೊ ಮುನ್ನ-ಎನ್ನ |ಸುದ್ದಿಯನೆಲ್ಲವ ಉಸಿರುವೆ ಘನ್ನ ||ಅದ್ವೈತರೂಪ ಪ್ರಸನ್ನ-ಸ್ವಾಮಿ |ಇದ್ದ ಠಾವಿಗೆ ಕರೆದೊಯ್ಯೊ ನೀನೆನ್ನ 11
ದಾಮೋದರ ದನುಜಹರಣ-ಹರಿ |ರಾಮಚಂದ್ರನೆ ರಘುಕುಲ ಸಾರ್ವಭೌಮ ||ಸ್ವಾಮಿ ನೀಲ ಮೇಘಶ್ಯಾಮ-ದೇವ |ಭೂಮಿಜಾಪತಿಯೆಂಬ ಬಹುಪುಣ್ಯನಾಮ 12
ಸಂಕರ್ಷಣ ಸರುವಾಭರಣ-ಇಟ್ಟು |ಪಂಕಜಮುಖಿ ದ್ರೌಪದಿ ಮೇಲೆ ಕರುಣ ||ಕುಂಕುಮಾಂಕಿತ ನೀಲಕಿರಣ-ರತ್ನ |ಕಂಕಣಭೂಷಣ ಕೌಸ್ತುಕಾಭರಣ13
ವಾಸದೇವ ಕೇಳೊ ನಿನ್ನ-ದಿವ್ಯ |ಸಾಸಿರನಾಮವ ನೆನೆವನೆ ಧನ್ಯ ||ಬೇಸರದೆ ಸಲಹಬೇಕೆನ್ನ-ಸ್ವಲ್ಪ |ಗಾಸಿಯ ಮಾಡದೆ ಕರುಣ ಸಂಪನ್ನ14
ಪ್ರದ್ಯುಮ್ನ ನೀನೆಂದು ಕರೆಯೆ-ದುರ್ |ಬುದ್ದಿಯನೆಲ್ಲವ ನನ್ನಿಂದ ಮರೆಯೆ ||ಇದ್ದ ದುರ್ವಿಷಯವ ತೊರೆಯೆ-ಸಾಧು |ಸಜ್ಜನ ಸಂಗನೆ ನಿನ್ನೊಳು ಬೆರೆಯೆ 15
ಅನಿರುದ್ದ ಗೋಕುಲದಲ್ಲಿ-ನೀಅನುದಿನ ಇರಲು ಗೋಪಿಯರ ಮನೆಯಲಿ ||ಸನಕಾದಿವಂದ್ಯ ನಿನ್ನಗಲಿ-ಒಂದು |ಕ್ಷಣವೂ ಬಿಟ್ಟಿರಲಾರೆ ನಿಲ್ಲೋ ಮನದಲಿ 16
ಪುರುಷೋತ್ತಮಗಾರು ಸಾಟಿ?-ಶ್ರೀ |ಪರಬ್ರಹ್ಮಸ್ವರೂಪ ನಿನಗಾರು ಧಾಟಿ? |ನಿರವದ್ಯ ಭಕ್ತಿ ಕಿರೀಟ-ನಿನ್ನ |ಶರೀರದೊಳಗೆ ಕಂಡು ಬ್ರಹ್ಮಾಂಡ ಕೋಟಿ 17
ಅಧೋಕ್ಷಜ ಅಸುರಸಂಹಾರಿ-ದೇವ |ಅದುಭುತ ರೂಪನೆ ಶಿಶುಪಾಲ ವೈರಿ ||ಭಜಕರ ಪಾಲಿಪ ಗೌರಿ-ನೀ |ಅಜಮಿಳ ಕರೆದರೆ ಕಾಯ್ದೆ ಮುರಾರಿ 18
ನರಸಿಂಹರೂಪವ ತಾಳಿ-ಬಂದೆ |ಕರೆಯೆ ಕಂಬದಿ ಕಂದನ ಮಾತಕೇಳಿ ||ದುರುಳ ರಕ್ಕಸನನು ಸೀಳಿ-ನಿನ್ನ |ಕೊರಳಲಿ ಧರಿಸಿದೆ ಕರುಳಿನ ಮಾಲಿ 19
ಅಚ್ಯತ ನೀನಲೆ ಮುದ್ದು-ಗೋಪಿ |ಬಚ್ಚಿಟ್ಟ ಹಾಲು-ಮೊಸರು-ಬೆಣ್ಣೆ ಮೆದ್ದು ||ತುಚ್ಛ ಶಕಟನ ಕಾಲಿಲೊದ್ದು-ಕರು |ಬಿಚ್ಚಿ ಓಡಿದೆ ಚೋರಕಂಡಿಯಲಿ ಕದ್ದು 20
ಜನಾರ್ಧನ ಕೇಳೊ ಬನ್ನಪವ-ನೀ |
ತೊಲಗಿಸು ಬಂದೆನ್ನ ಮನದ ಕಲುಷವ ||ಹೊರಲಾರೆ ಭೂ ಭಾರತನುವ-ನಿನ್ನ |ಸ್ಮರಣೆ ಇದ್ದವ ಮುಕ್ತಿಪಥವನೆ ಗೆಲುವ 21
ಉಪೇಂದ್ರನುರಗನ ತುಳಿಯೆ-ಆಗ |ಅಪರಿಮಿತ ವಿಷದ ಮಡುವು ಕಲಕಿ ಉಳಿಯೆ ||ತ್ರಿಪುರರಕ್ಕ ಸರನು ಗೆಲಯೆ-ನಿನ್ನ |ಚಪಲತನವ ನೋಡಿ ಸುರರೆಲ್ಲ ಬೆರೆಯೆ 22
ಹರಹರಿ ಎಂದರೆ ಪಾಪ-ರಾಶಿ |ಹರಿದು ಹೋಗುವದು ಮನದ ಸಂತಾಪ ||ಸರುವರೊಳಗೆ ವಿಶ್ವರೂಪ-ನಿನ್ನ |ನೆರೆನಂಬಿದವರನು ಸಲಹು ಪ್ರತಾಪ 23
ಕೃಷ್ಣ ಕೃಷ್ಣನೆಂಬ ಸೊಲ್ಲ-ಕೇಳಿ |ನಷ್ಟವಾಗಿ ಹೋಯ್ತು ಪಾತಕವೆಲ್ಲ ||ಮುಟ್ಟಿ ಭಜಿಸಿರಿ ಜನರೆಲ್ಲ, ಪುರಂದರ |ವಿಟ್ಠಲನಲ್ಲದೆ ಪರದೈವವಿಲ್ಲ 24

No comments:

Post a Comment