Labels

Sunday, 6 October 2019

ನೀನೆ ಅನಾಥಬಂಧು neene Anathbandhu

ನೀನೆ ಅನಾಥಬಂಧು ಕಾರುಣ್ಯ ಸಿಂಧು
ಮದಗಜವೆಲ್ಲ ಕೂಡಿದರೇನು
ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂಧನ ಎನ್ನಲು
ಮುದದಿಂದೊದಗಿದೆಯೊ ಕೃಷ್ಣಾ
ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿನೀನೇ ಮುಕುಂದಾ ಎನ್ನಲೂ
ಅತಿವೇಗದಿ ಅಕ್ಷಯವನಿತ್ತೆ ಕೃಷ್ಣಾ
ಇಳೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯನಿತ್ತೆ
ಸುಲಭದಿ ಭಕ್ತರ ಸಲಹುವ
ನಮ್ಮ ಚೆಲುವ ಪುರಂದರ ವಿಠ್ಠಲರಾಯ

No comments:

Post a Comment