ಈಡುಗಾಣೆನಯ್ಯ ಜಗದೊಳಗೆ ಪ.
ಬೇಡಿದಭೀಷ್ಟಗಳ ಕೊಡುವ ಹನುಮ
ಭೀಮ ಮಧ್ವರಾಯ ಅ.ಪ.
ಅಷ್ಟದಿಕ್ಕಲಿ ಭೂಪರಾಳಿದ ದುಷ್ಟರಾವಣನ್ನ ಪುರವ
ದೃಷ್ಟಿಸಿ ನೋಡಿ ಸಮರದಲಿ ಪ್ರಹಾರವನೆ ಕೊಡಲು
ಕಷ್ಟದಿ ಮೂಛ್ರ್ಯಕೃತನಾಗಿಯೆದೆ ಹಿಟ್ಟಾಗಿಸನಂತಕಂದಿಸಿಯೆ
ಕಂಗೆಟ್ಟು ಹತ್ತು ದಿಸೆಗೆ ಓಡಿಸಿದ್ಯೊ
ದಿಟ್ಟನಾಗಿ ನಿರಂತರದಿ ಹನುಮಾ 1
ನಾರದ ಅಯೋಧ್ಯದಿ ಪೇಳಲು ಶ್ರೀ ರಾವಣ ಸೈನ್ಯಗಳ ಓಡಿಸಿ
ವಾರಿಧಿಗಳ ದಾಟಿ ಬೇಗ ನೂರುತಲೆ ಅಸುರನ ಪಟ್ಟಣದ
ದ್ವಾರ ಬಂಧಿಸಿ ಸಕಲದ್ವೀಪದಲ್ಲಿದ್ದ ಕ್ರೂರ ಅಸುರನ್ನ ಕಾಲಲೊದ್ದು
ವರ ವಿಭೀಷಣ ಸುಗ್ರೀವರ ಪುಚ್ಛದಲಿ
ತರುಬಿದಿಯೊ ಸಮರ್ಥ ಹನುಮಾ 2
ರುದ್ರ ಬ್ರಹ್ಮರ ವರದಲವಧ್ಯನಾದ ಜರಾಸಂಧನಾ
ಅಧ್ವರ್ಯದಲಿ ಪಶುವಂದದೀ ಮರ್ದಿಸಿ ದುಷ್ಟ
ಖಳರ ಸೀಳಿದ್ಯೊ
ಖೇದರಾದ ನೃಪರ ಬಿಡಿಸಿದೆ ಅಧ್ವರ್ಯನಾಗಿಯಾಗದಿ
ನಿಂದೆ ಯುದ್ಧದಲಿ
ದುರ್ಯೋಧನನ ಕೊಂದ ಪ್ರಸಿದ್ಧ ಭೀಮರಾಯ ನಿಮಗೆ3
ವಾದಿಗಜಕೆ ಮೃಗೇಂದ್ರ ವಾದಿವಾರುಧಿ ಬಡಿವ ಮಾಯಾ
ವಾದಿ ಪರ್ವತಕೆ ವಜ್ರ ಭೇದ ಮತಾಂಬುಧಿಗೆ ಚಂದ್ರ
ಮೋದತೀರ್ಥಾನಂದಗೆ ಕೃಷ್ಣಾ ಅಷ್ಟವಾಳುಕ ಮುಷ್ಟಿ ತಂದೆ
ಸಾಧುಜನರಿಗೆ ತತ್ವಬೋಧಿಸಿದೆ
ಮೇದಿನಿಯೊಳು ಮಧ್ವರಾಯ ನಿಮಗೆ 4
ಇಂದುಮುಖಿ ಸೀತೆಗೆ ಮುದ್ರಿಕೆಯನಿತ್ತು
ವಂದಿಸಿ ರಾಮಕಥೆಯ ಪೇಳಿದೆ
ಅಂದು ರೋಮಕೋಟಿ ಶಿವರಮಾಡಿ ಪುರುಷಮೃಗವನೆ
ತಂದೆ ಚಂದದಿಂ ಮಣಿಮಂತನ ಕೊಂದು ಸೌಗಂಧಿಕವ
ತಂದೆ ನಂದತೀರ್ಥರಾದ ಅಚಲಾನಂದ ವಿಠಲನ ದಾಸ ನಿಮಗೆ5
No comments:
Post a Comment