Labels

Tuesday, 17 December 2019

ಆತನೆಯನ್ನ ತಾತನು aataneyanna tatanu

ಆತನೆಯನ್ನ ತಾತನು
ರಘುನಾಥನಾಗಿ ತ್ರೇತಾಯುಗದಲಿ
ಮೆರೆದಾತನೆಯನ್ನ ತಾತನು ಪ
ತಂದಿನ ಅಗಲಿದ ಕಂದ ಕಾನನದೊಳು
ಬಂದು ಅಂಗುಟ ಊರಿನಿಂದುತ್ವರಾ
ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ
ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1
ದುರುಳತನಪರಿಹರಿಸ ಬೇಕೆನೆ
ನರನರಸಿ ದ್ರೌಪದಿ ಮಾನವ ಪರಮಕರುಣಿ
ಮುರಹರನೆ ತಡಿಯದಲೆ ಪೊರೆಯನೆ
ತರುಣಿಯ ಮೊರೆ ಕೇಳಿದಂಥಾತನೆ 2
ಶಿರಿಗೋವಿಂದ ವಿಠಲ ವೇದ ವಂದಿತ
ಧರಣಿಜ ಪತಿ ಹರಿಪರನೆನ್ನುತ
ಪರಮ ಭಕುತಿಯಿಂದ ಸ್ಮರಿಸುವವರ
ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3

No comments:

Post a Comment