Labels

Saturday 6 June 2020

ನೆನೆಯಿರೊ ಭಕುತ ಜನರು-ಅನುದಿನವೂ neneyaro bhakyta janaru


ನೆನೆಯಿರೊ ಭಕುತ ಜನರು-ಅನುದಿನವೂ
ನೆನೆಯಿರೊ ಭಕುತ ಜನರುಗಳು ಪ
ಘನಮಹಿಮನ ಸೇವೆಯ ಮಾಡಿದರಾ
ಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪ
ಒಂದು ಯುಗದಿ ಹನುಮಂತಾವತಾರನಾಗಿ
ಬಂದು ನೆರೆದಯೋಧ್ಯಾಪುರಕಾ ||
ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1
ವಾಯು ಕುಮಾರಕ ದ್ವಾಪರದಲಿ ಭೀಮ-
ರಾಯನೆಂದೆನಿಸಿದ ಕೌರವ ಬಲದಿ ||
ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ2
ಕಾಯಜಪಿತನ ಮುಂದೆ ಕೌರವರ ತಂದು ರಾಜ-
ಸೂಯಯಾಗವ ಮಾಡಿದ ಬಲವಂತ ||
ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ3
ಗುರು ಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-
ಕರುಣಾಕರನಾಗಿ ಶರಣರ ಪೊರೆವ ||
ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4
ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿ
ಪಂಕಜನಾಭ ಶ್ರೀ ಪುರಂದರವಿಠಲನ
ಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5


No comments:

Post a Comment