Labels

Wednesday 27 November 2019

ನಾರಾಯಣೆನು ಮನವೆ ನರಹರಿಯ naarayanenu manave

ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು ಪ
ಗುರುವಿನುಪದೇಶದಲ್ಲಿ ಪರಮ ರಹಸ್ಯವನರಿತುಮರೆಯದಲೆ ಅಲ್ಲಿ ಅಧಿಕಾರಿಯಾಗೊತಿರುಮಂತ್ರವನು ಜಪಿಸು ತಿರುಲಾಂಛನವ ಧರಿಸುಪರಮ ವೈಷ್ಣವರ ಪಂಕ್ತಿಯ ಸೇರು ಮನವೆ 1
ಕುಲಛಲಂಗಳ ಬಿಟ್ಟು ಬಲು ಪಾಶಗಳ ತರಿದುಹಲವು ಕೊಂಬೆಗೆ ನೀನು ಹರಿದಾಡದೆಸುಲಭದಲಿ ಶ್ರೀಪಾದತೀರ್ಥ ಪ್ರಸಾದವನುನೆಲೆಗೊಳಿಸಿ ಆತ್ಮನಿಗೆ ನಿತ್ಯ ಸುಖಿಯಾಗೋ 2
ಶೇಷವಿಶೇಷವೆಂದೆನಿಪ ಪರಮಾರ್ಥದೊಳುಮೀಸಲಳಿಯದ ಪಾಪರಹಿತನಾಗುವಾಸಾಧಿಪತಿ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸ ನೀನಾಗೊ 3

No comments:

Post a Comment