Labels

Saturday 15 February 2020

ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ indu aaruti tandu belagire


ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ
ಸಿಂಧು ರಾಜನ ಕುವರಿಗೆ ಅರವಿಂದ
ನಾಭನ ಮಡದಿಗೆ ಪ
ಅಂದು ಸುರಕೃತ ಸಿಂಧು ಮಥÀನದಿ ಬಂದು
ನೋಡುತ ಕೃಷ್ಣಗೆ
ವಂದಿಸುತ ಪೂಮಾಲೆ ಹಾಕಿದ
ನಂದಗೋಪಕುಮಾರಗೆ 1
ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ ಸುರರೊಳು ಕೃಷ್ಣಗೆ
ಇಲ್ಲ ಸಮರೆಂತೆಂಬುದನು ಜಗಕೆಲ್ಲ ತೋರಿದ ದೇವಿಗೆ 2
ವಾರವಾರದಿ ಚಾರುಪದಯುಗ ಸಾರಿಭಜಿಸುವ ಜನರಿಗೆ ಆ-
ಪಾರ ಸೌಖ್ಯಗಳೀವ ಕಾರ್ಪರ ನಾರಸಿಂಹನ ರಾಣಿಗೆ3


No comments:

Post a Comment