Labels

Saturday 15 February 2020

ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ enu saadhana maadi


ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ
ಸುಖಪೊಂದಲು ಪ
ಸಾನು ರಾಗದಿ ಶ್ರವಣ, ಮನನÀ ಧ್ಯಾನಗೈದಿತೋ
ಬಹು ಜನ್ಮದಿ ಅ.ಪ
ದೇವದಾರು, ಅಗರು, ಚಂದನ, ಮಾವು, ಚಂಪಕ,
ಹರಿ ತೋಷಕ
ಸಾವಿರಾರು ತರುಲತೆಗಳೀ ವಸುಧಿಯೊಳಿರಲೂ
ಬಿದಿರಿನಕೊಳಲು 1
ಮುರಮಡÀನನ ಅಭಯ ಕರದವರ
ಪ್ರಸಾದವ ಕಮಲೋಧ್ಬವ
ಸ್ಮರರಿಪು ಮುಖಸುರರು ಬೇಡಲು ದೊರೆಯದೀ
ವಿಭವ ವಂಶೋದ್ಬವ 2
ತ್ರಾಣವೇನು ಮುರಲಿಗೆ ಶ್ರೀ ಹರಿಯ ವದನದೊಳು
ಸುಧೆ ಸವಿಯಲು
ಶ್ರೀನರಸಿಂಹನರಾಣಿ ತಾನೆ ವೇಣುರಂಧ್ರದೊಳು
ನಿಂದಿರುವಳು 3


3 comments: