Labels

Tuesday 7 April 2020

ಜ್ಞಾನವಂತರಿಗೆ ವಿಧಿ ಕಾಡುವುದು jnanavantarige vidhi


ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ ಅಜ್ಞಾನಿ ಮೂಢರಿಗೆ ಹರಿ ನಿನ್ನ ಬಲವಯ್ಯ \\ಪ\\
ಹಿಂದೆ ಹರಿಶ್ಚಂದ್ರನ ಅರಣ್ಯವನೆ ಸೇರಿಸಿತು ಮುಂದಾಗಿ ಕುಳಿತಿತ್ತು ಕರಿರಾಜಗೆ ||
ಚೆಂದದಲಿ ಪಾಂಡವರ ಅರಣ್ಯ ಸೇರಿಸಿತು ಸುಂದರಿಯ ಸೀತೆಯನು ಲಂಕೆಯೊಳಗಿಟ್ಟಿತು \\1\\
ಚಂದ್ರಂಗೆ ವಿಧಿ ಕಾಡಿ ಸರ್ಪ ತಾ ನುಂಗಿತು ಇಂದ್ರಂಗೆ ವಿಧಿ ಕಾಡಿ ಅಂಗ ಭಂಗವಾಯಿತು ||
ಚಂದ್ರಶೇಖರನನ್ನು ಸುಡಗಾಡ ಸೇರಿಸಿತು ಇಂದಿದನು ತಿಳಿದರೆ ನರರ ಪಾಡೇನು \\2\\
ವಿಧಿ ಕಾಡುವಾ ಕಾಲಕಿಲ್ಲದ್ದೆಲ್ಲವು ಬಂತು ವಿಧಿ ಕಳವು ಸುಳ್ಳು ಹಾದರ ಕಲಿಸಿತು ||
ವಿಧಿ ಬೇನೆ ಚಳಿಯುರಿಯ ರೋಗಂಗಳನೆ ತಂತು ವಿಧಿಯ ಗೆದ್ದವ ನಮ್ಮ ಪುರಂದರ ವಿಠಲ \\3\\


No comments:

Post a Comment