Labels

Tuesday 7 April 2020

ಜ್ಞಾನವೊಂದೇ ಸಾಕು ಮುಕ್ತಿಗೆ jnanvonde saaku muktige


ಜ್ಞಾನವೊಂದೇ ಸಾಕು ಮುಕ್ತಿಗೆ  ಇನ್ನೇನು ಬೇಕು ಹುಚ್ಚುಮರುಳು ಮಾನವನೆ \\ ಪ.\\
ಪಿತ ಮಾತೆ ಸತಿ ಸುತರನಗಲಿರಬೇಡ ಯತಿಯಾಗಿ ಆರಣ್ಯ ಚರಿಸಲು ಬೇಡ ||
ವ್ರತ - ನೇಮವ ಮಾಡಿ ದಣಿಯಲು ಬೇಡ ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ \\1\\
ಜಪತಪವನೆ ಮಾಡಿ ಸೊರಗಲುಬೇಡ ಕಪಿಯಂತೆ ಅಡಿಗಡಿಗೆ ಹಾರಲುಬೇಡ ||
(ಉಪವಾಸಪಾಶಕ್ಕೆ) ಸಿಕ್ಕಲುಬೇಡ ಚಪಲತನದಲೇನು ಫಲವಿಲ್ಲೋ ಮೂಢ \\2\\
ಜಾಗರದಲಿ ನಿದ್ರೆ ಕೆಡಿಸಲು ಬೇಡ ಓಗರವನು ಬಿಟ್ಟು ಒಣಗಲು ಬೇಡ ||
ಸೋಗುಮಾಡಿ ಹೊತ್ತು ಕಳಿಯಲು ಬೇಡ ಗೊಗೆ ಹಾಗೆ ಕಣ್ಣು ತಿರುಗಿಸಬೇಡ \\3\\
ಹೊನ್ನು  ಹೆಣ್ಣು - ಮಣ್ಣು ಜರೆದಿರಬೇಡ ಅನ್ನ ವಸ್ತ್ರಗಳನ್ನು ತೊರೆದಿರಬೇಡ ||
ಬಣ್ಣದ ದೇಹವ ನೆಚ್ಚಲುಬೇಡ ತಣ್ಣೀರೊಳಗೆ ಮುಳುಗಿ ನಡುಗಲು ಬೇಡ \\4\\
ಮಹಾವಿಷ್ಣುಮೂರ್ತಿಯ ಮರೆತಿರಬೇಡ ಸಾಹಸದಿಂದಲಿ ಶ್ರಮ ಪಡಬೇಡ ||
ಕುಹಕ ಬುದ್ಧಿಯಲಿ ಕುಣಿದಾಡಬೇಡ ಮಹಿಮ ಪುರಂದರವಿಠಲನ ಮರೆಯದಿರೊ ಮೂಢ \\5\\


No comments:

Post a Comment