Labels

Sunday, 12 July 2020

ಅಪರಾಧ ಹತ್ತಕೆ ಅಭಿಷೇಕ ಉದಕ apharadha hattake



ಅಪರಾಧ ಹತ್ತಕೆ ಅಭಿಷೇಕ ಉದಕ
ಅಪರಾಧ ನೂರಕೆ ಕ್ಷೀರ ಹರಿಗೆ
ಅಪರಾಧ ಸಹಸ್ರಕೆ ಹಾಲು -ಮೊಸರು ಕಾಣೊ
ಅಪರಾಧ ಲಕ್ಷಕೆ ಜೀನು-ಘೃತ
ಅಪರಾಧ ಹತ್ತು ಲಕ್ಷಕೆ ಬಲುಪರಿ ಕ್ಷೀರ
ಅಪರಾಧ ಹೆಚ್ಚಿಗೆಗೆ ಹತ್ತು ತೆಂಗಿನಹಾಲು
ಅಪರಾಧ ಕೋಟಿಗೆ ಅಚ್ಚ ಜಲ
ಅಪರಾಧ ಅನಂತ ಕ್ಷÀಮೆಗೆ ಗÀಂಧೋದಕ
ಉಪಮೆರಹಿತ ನಮ್ಮ ಪುರಂದರವಿಠಲಗೆ
ತಾಪಸೊತ್ತಮನ ಒಲುಮೆ ವಾಕ್ಯ.


ಅನ್ಯರೊಬ್ಬರ ಕಾಣೆ anyarobbara kaane

ಅನ್ಯರೊಬ್ಬರ ಕಾಣೆ ಮನ್ನಿಸುವರೆನ್ನ ಆ-
ಪನ್ನರಕ್ಷಕನೆ ಪರಿಪಾಲಿಸೊ ಇನ್ನು |
ಪನ್ನಂಗಶಯನ ಶ್ರೀ ಪುರಂದರ ವಿಠಲನೆ.

ಅನ್ನ ಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ annapaanadigaliyo


U
ಅನ್ನ ಪಾನಾದಿಗಳೀಯೊ ಅಭ್ಯಾಗತ ಬ್ರಾಹ್ಮಣರಿಗೆ
ಅನ್ನ ಪಾನಾದಿಗಳೀಯೊ ಆ ಚಂಡಾಲಸಪ್ತರಿಗೆ
ಅನ್ನ ಪಾನಾದಿಗಳೀಯೊ ಅಂಧ ದೀನ ಕೃಪಣರಿಗೆ
ಹಸಿವೆಗೆ ಹಾಗವನ್ನರ್ಪಿಸೊ ಪುರಂದರವಿಠಲಗೆ.


ಅನುಕೂಲವಿಲ್ಲದ ಸತಿಯ anukulavillada satiya


U
ಅನುಕೂಲವಿಲ್ಲದ ಸತಿಯ ವರ್ಜಿಸಬೇಕು
ವಿನಯದಿ ಗುರು ಹಿರಿಯರ ಪೂಜಿಸಬೇಕು
ಮನಕೆ ಬಾರದ ಠಾವು ಬಿಟ್ಟು ತೊಲಗಬೇಕು
ವನಜನಾಭನ ದಾಸರ ಸಂಗವಿರಬೇಕು
ನೆನೆಯುತಲಿರಬೇಕು ಪುರಂದರವಿಠಲನ.


ಅನಾಮಿಕಾ ಮಧ್ಯದ ಎರಡನೆಯ ಗೆರೆ ಆದಿ anamika madhyada


U
ಅನಾಮಿಕಾ ಮಧ್ಯದ ಎರಡನೆಯ ಗೆರೆ ಆದಿ
ಇನಿತು ಮಧ್ಯಾಂಗುಲಿ ಕೊನೆಗೆರೆ ಕೂಡಿಸಿ
ಮನುಮೂರ್ತಿ ಪರಿಮಾಣ ಅಂಗುಷ್ಠದಿಂದಲಿ
ಎಣಿಸು ತರ್ಜನಿ ಮೂಲ ಪರಿಯಂತ(ರ)
ಘನ ಹತ್ತು ಗೆರೆ ಜಪ ಪುರಂದರವಿಠಲಗೆ
ಮನದಿ ಅರ್ಪಿಸುತ ಗಾಯತ್ರಿ ಜಪವ.


ಅಣುವಿಗೆ ಅಣುವಾಗಿ anuvige anuvige


U
ಅಣುವಿಗೆ ಅಣುವಾಗಿ ಘನಕೆ ಘನವಾಗಿ
ಗುಣತ್ರಯ ತತ್ತ್ವಕ್ಕೆ ಮೀರಿದ ದೊರೆಯಾಗಿ
ತೃಣ ಮೊದಲಾಗಿ ಮೇರು ಪರಿಯಂತ ಇರುವವ ನೀನಾಗಿ
ಗುಣನಿಧಿ ಪುರಂದರ ವಿಠಲ ನಿನ್ನ ಮಹಿಮೆ
ಎಣಿಕೆ ಮಾಡುವರಾರು ಎನ್ನಪ್ಪನೆ.


Monday, 22 June 2020

ಅಣು-ರೇಣು-ತೃಣದಲ್ಲಿ anusaar renu trunadalli

U
ಅಣು-ರೇಣು-ತೃಣದಲ್ಲಿ ಪರಿಪೂರ್ಣನಾಗಿರುವ
ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು?
ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ

ಜ್ಞಾನ ಸುಗುಣತತ್ತ್ವ ವೇಣುಗೋಪಾಲ ಹರೆ
ಕಾಣಿಸೊ ನಿನ್ನ ಮಹಿಮೆ ಪುರಂದರ ವಿಠಲ.