Labels

Thursday, 4 June 2020

ನರಸಿಂಹ ಮಂತ್ರ ಒಂದೇ ಸಾಕು narasimha mantra onde saaku


ನರಸಿಂಹ ಮಂತ್ರ ಒಂದೇ ಸಾಕು -ಮಹಾ - |
ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪ
ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ |
ಅಸುರನೊಡಲ ಬಗೆದ ದಿವ್ಯವiಂತ್ರ ||
ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |
ಪಶುಪತಿಗೆ ಪ್ರಿಯವಾದ ಮೂಲ ಮಂತ್ರ 1
ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ |
ಶಿಷ್ಟ ವಿಭೀಷಣನ ಪೊರೆದ ಮಂತ್ರ ||
ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ |
ಮುಟ್ಟಭಜಿಪರಿಗಿದು ಮೋಕ್ಷಮಂತ್ರ 2
ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ |
ಕೊಂಡಾಡೆ ಲೋಕಕುದ್ದಂಡ ಮಂತ್ರ ||
ಗಂಡುಗಲಿ ಪ್ರಚಂಡ ಹಿಂಡು ದಾನವರ |
ಗಂಡ ಪುರಂದರವಿಠಲನ ಮಹಾ ಮಂತ್ರ 3


ನರನಾದ ಮೇಲೆ naranaada mele


ನರನಾದ ಮೇಲೆ |
ಹರಿನಾಮ ಜಿಹ್ವೆಯೊಳಿರಬೇಕು ಪ.
ಭೂತದಯಾಪರನಾಗಿರಬೇಕು |
ಪಾತಕವೆಲ್ಲವ ಕಳೆಯಲು ಬೇಕು |
ಮಾತು - ಮಾತಿಗೂ ಹರಿ ಎನಬೇಕು 1
ವೇದ - ಶಾಸ್ತ್ರಗಳನೋದಲು ಬೇಕು |
ಭೇದಾಭೇದವ ತಿಳಿಯಲು ಬೇಕು |
ಸಾಧು - ಸಜ್ಜನರ ಸಂಗದೊಳಿರಬೇಕು 2
ತಂದೆ - ತಾಯಿಗಳ ಸೇವೆಯು ಬೇಕು |
ಬಂದುದನುಂಡು ಸುಖಿಸಲು ಬೇಕು |
ತಂದೆ ಪುರಂದರವಿಠಲನ ದಯೆಬೇಕು 3


ನಮ್ಮಪ್ಪ ಸುಮ್ಮಗಿರೊ ಗೋಪಾಲಾ nammappa summagiro gopala


ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|
ಗುಮ್ಮನು ಎಳೆದೊಯ್ವನು ಪ
ಎಡದ ಕೈಯಲಿ ಕಪಾಲ-ಗೋಪಾಲಾ-|
ಬಲದ ಕೈಯಲಿ ತ್ರಿಶೂಲ ||
ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |
ಅಲೆದು ಸ್ಮಶಾನವ ತಿರುಗುವನಂತೆ 1
ಮೂರು ಕಣ್ಣಿನವನೊ-ಗೋಪಾಲಾ-|
ಐದು ತಲೆಗಳವನೊ ||
ದಾರಿಯ ಪೋಗುವ ನಾರಿಯನೆಳತಂದು |
ಸೇರಿಸಿ ಶಿರದಲ್ಲಿ ಹೊತ್ತನೊ 2
ಚಂದ್ರನರ್ಧವ ಪಿಡಿದು-ತಲೆಯ ಮೇಲೆ-
ಚೆಂದಕಿಟ್ಟಿರುವನಂತೆ ||
ಅಂದಗಾರನಂತೆ [ಅನಲನೇತ್ರನಂತೆ] |
ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ 3
ನಿನ್ನ ಮಗನ ಮಗನೊ-ಗೋಪಾಲಾ-|
ಪನ್ನಗ ಭೂಷಣನೋ ||
ಧನ್ಯನಾಗಿ ಶ್ರೀರಾಮ ನಾಮವನು |
ಚೆನ್ನಾಗಿ ಚಿಂತಿಪನೊ 4
ಕರಿಯಜಿನ ಪೊತ್ತವನೊ ಗೋಪಾಲಾ-|
ನೆರೆದ ಭೂತ ತಂದವನೊ ||
ಶರಧಿ ಶಯನ ನಿನ್ನ ಚರಣ ಪಂಕಜ ಭೃಂಗ |
ಪುರಂದರವಿಠಲ ಪನ್ನಂಗ ಶಯನನೆ 5


ನಡೆದು ಬಾ ನಾಲ್ವರಿದ್ದೆಡೆಗೆ nadedu baar nalvariddedage


ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ ನಿನ್ನತೊಡರ ನಿರ್ಣಯಿಸಿಕೊಂಬೆನು ತೋಯಜಾಕ್ಷ ಪಆದಿಯಲ್ಲಿ ಎನ್ನ ತಾತ ಮುತ್ತಾತರುಪಾದ ಸೇವೆಯ ಮಾಡಿ | ಹಲವು ಕಾಲ ||ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆಆಧಾರವಾದುದನು ಏಕೆ ಕೊಡಲೊಲ್ಲೆ 1
ಸಾಲವ ಕೇಳಲು ಸಟೆ ಟೌಳಿಯನಾಡಿಕಾಲವ ಕಳೆವೆ ನೀ ಕಪಟದಿಂದ ||ಮೇಲಿನ ವಿಬುಧರು ಮೆಚ್ಚುವಂತೆ ನಿನ್ನಕಾಲಿಗೆ ಎನ್ನ ಕೊರಳ ಕಟ್ಟಿಕೊಳ್ಳುವೆ 2
ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನಮನಕೆ ಬಪ್ಪಂತೆ ನೀ ಘನ ನಂಬುಗೆಯಿತ್ತೆಅನುಮಾನವೇಕೆ ದಯೆಪಾಲಿಸೈ ಈಗವನಜಾಕ್ಷ ತಂದೆ ಪುರಂದರವಿಠಲ 3


ನಡುಮನೆಯೊಳಗೊಂದು ನಾಲ್ಕು nadumaneyolagondu nalku tenginamara


ನಡುಮನೆಯೊಳಗೊಂದು ನಾಲ್ಕು ತೆಂಗಿನಮರ -
ಹೇ ಗಿಣಿ - ಹೇ ಗಿಣಿಯೇ |
ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯ್ತ - ಹೇಗಿಣಿ ಪ.
ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ - ಹೇ ಗಿಣಿ
ತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ - ಹೇ ಗಿಣಿ 1
ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ - ಹೇ ಗಿಣಿ
ಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ - ಹೇ ಗಿಣಿ 2
ಬಲೆಯ ಹಾಕಿದರು ಬಲೆಯದಾಟುವದಯ್ಯ - ಹೇ ಗಿಣಿ
ಚೆಲುವ ಪುರಂದರವಿಠಲನೇ ಬಲ್ಲ - ಹೇ ಗಿಣಿ 3


ನಗೆಯು ಬರುತಿದೆ - ಎನಗೆ nageyu barutide



ನಗೆಯು ಬರುತಿದೆ - ಎನಗೆ
ನಗೆಯು ಬರುತಿದೆ ಪ.
ಜಗದೊಳಿದ್ದ ಮನುಜರೆಲ್ಲ
ಹಗರಣ ಮಾಡುವುದ ನೋಡಿ ಅಪ
ಪರಸತಿಯರ ಒಲುಮೆಗೊಲಿದು
ಹರುಷದಿಂದ ಅವರ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರೆಳನೆಣಿಸುವರ ಕಂಡು 1
ಪತಿಯ ಸೇವೆ ಬಿಟ್ಟು, ಪರ
ಸತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಡುವರ ಕಂಡು 2
ಹೀನಗುಣವ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮಾನಿ ಪುರಂದರವಿಠಲನ
ಧ್ಯಾನ ಮಾಡುವವರ ಕಂಡು 3


Wednesday, 20 May 2020

ನಂಬಿದೆ ನಿನ್ನ ಪಾದವ - ವೆಂಕಟರಮಣ nambide ninna paadava


ನಂಬಿದೆ ನಿನ್ನ ಪಾದವ  ವೆಂಕಟರಮಣ
ನಂಬಿದೆ ನಿನ್ನ ಪಾದವ \\ ಪ\\
ನಂಬಿದೆ ನಿನ್ನ ಪದಾಂಬುಜಯುಗಳವ
ಇಂಬಿತ್ತು ಸಲಹಯ್ಯ ಶಂಖ-ಚಕ್ರಧರನೆ
ತಂದೆಯು ನೀನೆ ತಾಯಿಯು ನೀನೆ ಬಂಧು ಬಳಗವು ನೀನೆ ||
ಬಂದ ದುರಿತವೆನ್ನ ಹೊಂದಿಕೊಳ್ಳದಂತೆ
ತಂದೆ ಸಲಹೊ ಮುಕುಂದ ಮುರಾರಿ \\1\\
ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು ||
ಗಕ್ಕನೆ ಜ್ಞಾ ನವನಕ್ಕರೆಯಲಿ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣಿಯರಸಾ \\2\\
ಮರೆತು ನಾ ಮಾಯೆಯೊಳು ಮುಳುಗಿದೆ ಅದ ನರಿತು ಅರಿಯದಾದೆ ||

ಮರೆಯದೆ ಎನ್ನನು ಪೊರೆಯೆ ಕೃಪಾನಿಧಿ ವರದ ಶ್ರೀವೆಂಕಟ ಪುರಂದರ ವಿಠಲ \\3\\