Labels

Wednesday 20 May 2020

ಧರಣಿಗೆ ದೊರೆಯೆಂದು ನಂಬಿದೆ dharanige doreyandu nambide


ಧರಣಿಗೆ ದೊರೆಯೆಂದು ನಂಬಿದೆ  ಇಂಥ  ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ \\ಪ\\
ಕಾಡಿಬೇಡುವರಿಗೆ ಕೊಡಲಾರದೆ ಅಂಜಿ ಓಡಿ ನೀರೊಳು ಸೇರಿಕೊಂಡೆ ಬೇಗ ||
ಹೇಡಿಯ ತೆರದಲಿ ಮೋರೆಯ ತೋರದೆ  ಓಡಿ ಅರಣ್ಯದಿ ಮೃಗಗಳ ಸೇರಿದೆ\\1\\
ಬಡವರ ಬಿನ್ನಪ ಲಾಲಿಸದಲೆ ಹಲ್ಲ ಕಡುಕೋಪದಲಿ ತೆರೆದಂಜಿಸಿದೆ ||
ತಡೆಯದೆ ಭಿಕ್ಷುಕನಾದರು ಬಿಡರೆಂದು  ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆಯೊ\\2\\
ಉತ್ತಮನೆಂದರೆ ಮತ್ತೆ ಚೋರನಾದೆ ಬತ್ತಲೆ ನಿಂತು ತೇಜಿಯನೇರಿದೆ |

ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ ಚಿತ್ತಜ ಜನಕ ಶ್ರೀ ಪುರಂದರವಿಠಲನೆ \\3\\

No comments:

Post a Comment