ಅಂಬರದಳವು ರವಿಶಶಿಗಲ್ಲದೆ ತಳದಲ್ಲಾಡೊ ಪಕ್ಷಿ ಬಲ್ಲದೆ
ಜಲದ ಪ್ರಮಾಣವ ತಾವರೆಗಲ್ಲದೆ ದಡದ
ಮೇಲಣ ಗಿಡವು ತಾ ಬಲ್ಲದೆ
ಪುಷ್ಪದ ಪರಿಮಳ ಮಧುಕರಗಲ್ಲದೆ
ಹಾರುವ ನೊಣವು ತಾ ಬಲ್ಲದೆ
ಮಾವಿನ ಹಣ್ಣು ಅರಗಿಳಿಗಲ್ಲದೆ ಚೀರುವ ಕಾಗೆ ತಾ ಬಲ್ಲದೆ
ಊಟದ ಸವಿರುಚಿ ನಾಲಿಗೆಗಲ್ಲದೆ ಕಲಸುವ ಕೈ ತಾ ಬಲ್ಲದೆ
ಸುರತಸುಖಗಳು ಯವ್ವನರಿಗಲ್ಲದೆ
ಬಾಲಕಜನರು ತಾವು ಬಲ್ಲರೆ
ದೇವ ನಿನ್ನ ಮಹಿಮೆಯ ಸಜ್ಜನರು
ಬಲ್ಲರಲ್ಲದೆ ದುರುಳರು ಅರಿಯೋರೆ
ಭಕುತರಿಗೆ ನೀನೆ ಗತಿಯೊ ಅಚಲಾನಂದವಿಠಲ
No comments:
Post a Comment