Sunday, 6 October 2019

ನರಜನ್ಮ ಸ್ಥಿರವೆಂದು Narajanma

ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ
ಬರಿದೇ ಕಾಲ ಕಳೆದೆನೊ ಹರಿಯೇ
ಆಸೆಯೆಂಬುದು ಎನ್ನ ಕ್ಲೇಷಪಡಿಸುತಿದೆ
ಘಾಸಿಯಾದೆನೊ ಹರಿ ನಾರಾಯಣ
ವಾಸುದೇವನೇ ನಿನ್ನಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸಹೋದೆನೊ ಕೃಷ್ಣ
ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೀನನಾದೆ
ನೆರೆನಂಬಿದೆನೊ ಕೃಷ್ಣಾ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರ ವಿಠ್ಠಲ

No comments:

Post a Comment