ಮುತ್ತು ಬಂದಿದೆ ಕೇರಿಗೆ ಜನರು ಕೇಳಿ
ಮುತ್ತು ಬಂದಿದೆ ಪ.
ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪ
ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು
ಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತು
ಹಲಧರಾನುಜವೆಂಬ ಪವಿತ್ರ ನಾಮದ ಮುತ್ತು
ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು 1
ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು
ಭಂಜಿಸದ ಇತರ ಭಯವ ತೋರುವ ಮುತ್ತು
ಸಂಜೀವರಾಯ ಹೃದಯದೊಳಗಿಹ ಮುತ್ತು 2
ಜ್ಞಾನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತು
ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು
ಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತು
ಶ್ರೀನಿಧಿ ಪುರಂದರವಿಠಲನೆಂಬೋ ಆಣಿಯ ಮುತ್ತು 3
ಇದು ಕನಕದಾಸರ ಪದ್ಯ. ತಪ್ಪು ತಪ್ಪಾಗಿ ಹಾಕಬೇಡಿ.
ReplyDeleteThe above lyrics were written by kanakadasaru
ReplyDeleteಸ್ವಾಮೀ, ಇದು ಕನಕದಾಸರ ರಚನೆಯಲ್ಲವೆ? ಈ ರೀತಿ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವುದು ಕೂಡ ನಮ್ಮ ದಾಸವರೇಣ್ಯರಿಗೇ ಮಾಡಿದ ಅಪಚಾರವಲ್ಲವೆ? ಅಪನಂಬಿಕೆಗೆ ಕಾರಣವಾಗುವ ಸಂಗತಿಗಳನ್ನು ದಯವಿಟ್ಟು ಹಂಚಿಕೊಳ್ಳದಿರಿ, ಈಗ ಸ್ಪಷ್ಟನೆ ನೀಡಿ ಸರಿಪಡಿಸುವುದು ನಿಮ್ಮ ಧರ್ಮ.
ReplyDelete